ಸ್ವಾಭಿಮಾನದ ಕಡಲು ನನ್ನಮ್ಮ ನೊಡಲು……..

Image Credit : Google / Merrill Weber

ಯಾಕೆ !? ತಾಯಂದಿರ ದಿನದಂದು ಮಾತ್ರ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳಲ್ಲಿ ಬರೆಯಬೇಕೇ ? ತನ್ನ ಹೃದಯದ ಮಂದಿರದಲ್ಲೇ ನಮ್ಮನ್ನು ಇಟ್ಟುಕೊಂಡಿರುವ ತಾಯಿಯ ಬಗ್ಗೆ ಪ್ರತಿದಿನವೂ ನೆನೆಸಿಕೊಳ್ಳುತ್ತಾ ಮೈ ಮರೆಯಬಾರದೇಕೆ ? ಅದಕ್ಕಾಗಿಯೇ ಇವತ್ತೊಂದು ತಾಯಿಯ ಬಗೆಗಿನ ಭಾವನಾತ್ಮಕ ಲೇಖನವನ್ನು ಓದಿ ;

ಸ್ವಾಭಿಮಾನ, ಧೈರ್ಯ, ಆತ್ಮ ವಿಶ್ವಾಸ, ಆತ್ಮಗೌರವವನ್ನು ನಾನು ಕಲಿಯಲಾರಂಬಿಸಿದ್ದು ನನ್ನಮ್ಮನನ್ನು ನೋಡಿ. ಅವಳು ನಿರೂಪಮಾಧ್ಬುತ. ಅವಳನುಭವಿಸಿದ ಕಷ್ಟಗಳು, ನೋವು, ಅವಮಾನಗಳು, ಅನುಮಾನಗಳು ಒಂದೇ ಎರಡೆ !..? ಆಕೆಯೊಡಲಾಳದಲ್ಲಿ ಅದೆಷ್ಟು ನೋವುಗಳಿದೆಯೋ ಅದೆಷ್ಟು ಪ್ರಶ್ನೆಗಳಿವೆಯೋ..? ಬಲ್ಲವರಾರು !. “ಹುಟ್ಟಿನಿಂದ ಸಾಯವವರೆಗೂ ಇದೆ ಹಣೆ ಬರಹ”. ಇದು ಅವಳ ಸರ್ವೇ ಸಾಮಾನ್ಯ ಮಾತು. ತನ್ನ ನೋವಿನಡುಗೆಯನ್ನ ತಾನೊಬ್ಬಳೇ ಉಂಡು ಅರಗಿಸಿಕೊಳ್ಳಲೂ ಆಗದೆ ಹಾಗೆ ಬಸಿರಲ್ಲೇ ಇಟ್ಟುಕೊಳ್ಳಲೂ ಆಗದೇ ಮರುಗುತಿಹಳು ನನ್ನಮ್ಮ.

ಕೂಡು ಕುಟುಂಬವೆಂಬ ಸಂಪಿಗೆ ಮರದಲ್ಲಿ ಅರಳಿದ ಮೊದಲ ಹೂವು ನನ್ನಮ್ಮ. ಅವಳು ತನ್ನ ಹದಿಮೂರನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಳು, ತಂದೆ ಹೊರಟ ಹಲವು ದಿನಗಳಲ್ಲೇ ಕೂಡು ಕುಟುಂಬ ಬೇಸಿಗೆಯಲ್ಲಿ ಗದ್ದೆ ಬಿರಿದಂತೆ ಬಿರಿಯಿತು. ಆಗ ಆಕೆಯ ಮೇಲೆ ಮೂವರು ತಂಗಿಯರು ಹಾಗೂ ಓರ್ವ ತಮ್ಮನ ಜವಾಬ್ದಾರಿ ಬಿತ್ತು. ಏನೂ ಅರಿಯದ ಮುಗ್ಧ ಮನದ ಅಮ್ಮ ಒಂದೆಡೆಯಾದರೆ ಇನ್ನೊಂದೆಡೆ ಅರಿಯದ ವಯಸ್ಸಿನಲ್ಲಿ ತಂದೆಯಿಂದ ತೆಗೆದುಕೊಂಡ ಭಾಷೆ, ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಕಾಯಕ ತೋರಿದಾಗ ಅವಳಿಗೆ ಬೆಲ್ಲ ತಿಂದಷ್ಟು ಖುಷಿ. ಯಾರದ್ದೋ ಮನೆಯ ಎಂಜಲ ಬಟ್ಟಲ ತೊಳೆದಳು. ಆದರೆ, ಒಂದು ದಿನವೂ ಕೂಡ ತನ್ನ ಕೆಲಸದ ಮೇಲೆ ಅಸೂಯೆ ಪಡಲಿಲ್ಲ ಆಕೆ.

“ಸ್ವಂತ ದುಡಿಮೆಯೇ ಜೀವನ” ಎಂಬುದೇ ಅಮ್ಮನ ಬಾಳ ಸೂಕ್ತಿ. ಕಷ್ಟಗಳ ಸಾಲು ಒಂದರಮೇಲೊಂದು ಬಂದರೂ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಗಟ್ಟಿ ಗೊಡೆಯಾಗಿ ನಿಂತಳು. ಮನೆಯನ್ನು ನಿಭಾಯಿಸಲು ಅಕ್ಕನಿಗೊಬ್ಬಳಿಗೆ ಕಷ್ಟ ಎಂದು ಸ್ವ – ಅರಿವು ಮೂಡಿಸಿಕೊಂಡ ತಂಗಿಯರು ಊರಲ್ಲಿದ್ದ ಶಾಲೆಯಲ್ಲಿ ಅಕ್ಷರ ಜ್ಞಾನವನ್ನು ಪಡೆದುಕೊಂಡರು. ಪ್ರೌಢ ಶಿಕ್ಷಣಕ್ಕಾಗಿ ದೂರದೂರಿಗೆ ನಡೆದೇ ಹೋಗಬೇಕಾದ್ದರಿಂದ ಮೊದಲು ಮತ್ತು ಕೊನೆಯ ತಂಗಿ – ತಮ್ಮಂದಿರು ವ್ಯಾಸಂಗವನ್ನು ಅಲ್ಲೇ ಅರ್ಧ ದಾರಿಗೇ ಮರೆತರು. ಆದರೆ ಕಲಿಕೆಯ ಹಸಿವು ಎರಡನೆ ತಂಗಿಯನ್ನು ಬಿಡಲೇ ಇಲ್ಲ, ಆಕೆ ಕೂಡ ತನಗೆ ಕೈಗೆಟಕಿದ ಕೆಲಸ ಮಾಡಿ ತನ್ನ ಓದನ್ನು ಮುಂದುವರಿಸಿದಳು. ಅದೆಷ್ಟೋ ದಿನದ ಉಪವಾಸ, ಅದೆಷ್ಟೋ ಗೋಳಾಟ, ಕಂಬನಿಗಳು, ಬಿಸಿಯುಸಿರು ನನ್ನಮ್ಮನ ದೇಹದ ಮಾಂಸ ಖಂಡಗಳಂತೆ….. ಇದರ ನಡುವೆಯೇ ಪುಟ್ಟ ತಮ್ಮನ ಆರೋಗ್ಯ ಕೈ ಮೀರಿದಾಗ ತಾನೊಬ್ಬಳೇ ಒಬ್ಬ ಪುರುಷನ ಸರಿ ಸಮನಾಗಿ ನಿಂತು ಯಮನೆದುರು ತಿಂಗಳುಗಟ್ಟಲೆ ಹೋರಾಡಿ ತಮ್ಮನನ್ನು ಉಳಿಸಿಕೊಂಡಳು ನನ್ನಮ್ಮ…. ತನ್ನ ಯವ್ವನ ಪೂರ್ತಿ ಬೇರೆಯವರಿಗಾಗಿಯೇ ತೆಯ್ದಳು ಅಮ್ಮ…..ಅವಳೇ ನನ್ನ ಅಮ್ಮ…..

ವಿವಾಹದ ವಯಸ್ಸಿಗೆ ಬಂದಾಗ ಆಕೆಯ ಬಾಳಿಗೇ ಇನ್ನೊಂದು ಅಚ್ಚರಿ ಕಾದಿತ್ತು. ಅದುವೇ ತಾಯಿ ಇಲ್ಲದ ಎರಡು ಮುಗ್ಧ ಮಕ್ಕಳ ಜವಾಬ್ದಾರಿ. ತಿರಸ್ಕರಿಸಲು ಅವಕಾಶವೇ ಇಲ್ಲದಂತಹ ಸಂದರ್ಭ ಒದಗಿದಾಗ ಆಕೆಯ ಇಷ್ಟ ಕಷ್ಟಗಳನ್ನು ಕೇಳಿದವರೇ ಇಲ್ಲ !. ನವ ಜೀವನದಲ್ಲೂ ನವ ತಿರುವುಗಳು, ಹೊಸ ಸಮಸ್ಯೆಗಳು. ಬೇರಾವುದೇ ದಾರಿ ಇಲ್ಲದೆ ಕಂಡಂತಹ ದಾರಿಯಲ್ಲಿ ನಡೆಯಬೇಕಾಯಿತು. ತವರು ಮನೆಯ ಸೊಬಗನ್ನು ತೊರೆಯಲೇಬೇಕಾದ ಆ ಕಷ್ಟದ ಅನುಭವವನ್ನು ಅನುಭವಿಸಿದವರಿಗೆ ಗೊತ್ತು. ಹೊಸ ಮನೆಯಲ್ಲಿ ನಾಲ್ಕು ಜನ ಕುಳಿತುಕೊಳ್ಳಲು ಕಷ್ಟವಾಗುವಂತಹ ಇಕ್ಕಟ್ಟಿನ ಜಾಗ….. ತರಕಾರಿ ಹೆಚ್ಚುವ ಕತ್ತಿಗೂ ಗತಿ ಇಲ್ಲದಂತಹ ಕ್ಲಿಷ್ಟ ಪರಿಸ್ಥಿತಿ, ಜೊತೆಗೆ ಅರಿಯದ ಎರಡು ಮುಗ್ಧ ಮಕ್ಕಳು ಬೇರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ನನ್ನ ಅಮ್ಮನಿಗೆ ತಾನು ಸ್ವಂತ ಮನೆಯನ್ನ ಕಟ್ಟಲೇಬೇಕೆಂಬ ಛಲ, “ನನ್ನ ಕಣ್ಣೀರು, ನನ್ನ ನೋವುಗಳು ನನ್ನ ಮಕ್ಕಳಿಗೆ ಕಾಣಬಾರದು” ಎಂದು ಕೈಲಾದಷ್ಟು ದುಡಿದು ಸಂಪಾದಿಸಿದ ಹಣದಿಂದ ಮನೆಯ ಅಡಿಪಾಯವನ್ನಂತು ಮಾಡಿದಳು, ಆದ್ರೆ ಆ ಹೊತ್ತಿಗೆ ಗರ್ಭಿಣಿಯಾಗಿದ್ದ ನನ್ನಮ್ಮನಿಗೆ ಮತ್ತೊಂದು ಆಘಾತ ಕಾದಿತ್ತು.

ತುಂಬು ಗರ್ಭಿಣಿಯಾದ ಅವಳು ತಣ್ಣಗೆ ಬಾಗಿಲ ಬಳಿಯಲ್ಲಿ ದಣಿದು ಮಲಗಿದ್ದಾಗ ಆಡುವ ಮಕ್ಕಳೆರಡು ಬಂದು ಅರಿಯದೆ ಆಕೆಯ ಹೊಟ್ಟೆಯ ಮೇಲೆ ತಮ್ಮ ಕಾಲಿಟ್ಟು ಜಿಗಿದರು. ತೀವ್ರ ನೋವಲ್ಲಿ ಹೊಟ್ಟೆಯ ಒಳಗಡೆಯೇ ಒದ್ದಾಡಿ – ಒದ್ದಾಡಿ ಕಣ್ತೆರೆವ ಮೊದಲೇ ತನ್ನ ಕಣ್ಣನ್ನ ಗರ್ಭದಲ್ಲೇ ಮುಚ್ಚಿತು ಆ ಮಗು. ಒಂಭತ್ತು ತಿಂಗಳು ಹೊತ್ತ ಮಗು ಕೈಗೆ ಸಿಗದಂತಹ ಪರಿಸ್ಥಿತಿಯಲ್ಲೂ ಕುಗ್ಗದ ನನ್ನಮ್ಮ, ನಿಂದನೆಯ ಮಾತುಗಳನ್ನು ನುಂಗಿದ ನನ್ನಮ್ಮ ತನ್ನ ಮನೆಯ ಕೆಲಸಗಳನ್ನು ಮುಂದುವರಿಸಿದಳು. ಅಷ್ಟರಲ್ಲಿ ಮತ್ತೆ ಗರ್ಭಿಣಿಯಾದ ನನ್ನಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು. ತಾಯಿ ಇಲ್ಲದ ಆ ಎರಡು ಮುಗ್ಧ ಮಕ್ಕಳನ್ನು ಎಂದಿಗೂ ಬೇರೆಯವರೆಂದು ಭಾವಿಸದೇ ತನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ಉಣಿಸಿ ಸಾಕಿದಳು. ನಾನು ಆಕೆಯ ಸ್ವಂತ ಮಗಳೇ ಆದರೂ ನನ್ನನ್ನು ಎಂದಿಗೂ ಕೂಡ ಅತಿಯಾಗಿ ಪ್ರೀತಿಸಲಿಲ್ಲ, ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ “ಈಕೆ ನಿಜವಾಗಿಯೂ ನನ್ನ ತಾಯಿಯೇ” ಎಂದು. ಇಂದಿಗೂ ಕೂಡ ನನಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಎತ್ತಿಟ್ಟವಳಲ್ಲ ನನ್ನಮ್ಮ, ಒಂದು ದಿನವೂ ನನ್ನನ್ನ ಮುದ್ದು ಮಾಡಿದವಳಲ್ಲ ನನ್ನಮ್ಮ, ಅಬ್ಬಾ….! ಅವಳಷ್ಟು ತಾಳ್ಮೆ ಯಾರಿಗೂ ಇಲ್ಲ. ನೋವಿನಲ್ಲಿ ತನ್ನ ಹೃದಯ ಜರ್ಜರಿತವಾಗಿದ್ದರು ಎಂದಿಗೂ ರಕ್ತದ ಕಲೆಯನ್ನು ತೋರಿದವಳಲ್ಲ ನನ್ನಮ್ಮ. ಅವಲಂಬನೆ ಎಂಬುದೊಂದು ಬಂಧನ ಎಂದು ಅರಿತ ಅವಳು ಮುಕ್ತ ಜೀವನವನ್ನೇ ನಡೆಸಿದಳು. ಆಕೆಯ ಪ್ರೀತಿಗೆ ಪಾಲುದಾರರಿದ್ದಾರಲ್ಲವೇ, ಅವರಿಗೂ ಕೂಡ ನ್ಯಾಯ ಒದಗಿಸಬೇಕಲ್ಲವೇ ?!. ಪುಣ್ಯ ಮಾಡಿರುವೆನು ಅವಳ ಮಡಿಲ ಮಗುವಾಗಿ ಬೆಳೆಯಲು, ಆಕೆಯ ಜೀವನವೇ ನನಗೆ ಕಲಿಸಿಕೊಟ್ಟ ಪಾಠವೆಂದರೆ ನಾವೆಂದಿಗೂ ಯಾವುದಕ್ಕೂ ಯಾರನ್ನೂ ಅವಲಂಬಿಸಬಾರದು ಅದು ಅನ್ನಕ್ಕೇ ಆಗಿರಲಿ, ಅರಿವಿಗೇ ಆಗಿರಲಿ ಅಥವಾ ಆಶ್ರಯಕ್ಕೇ ಆಗಿರಲಿ…….ಜಗತ್ತಿನ ಎಲ್ಲಾ ತಾಯಂದಿರಿಗೂ ಶತ ಶತ ನಮನಗಳು.

 

ಬರಹ : ಕವನ ಕೆ.,

ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

 

ಪ್ರಜೆಗಳ ಹಬ್ಬ ಚುನಾವಣೆಯ ಹಬ್ಬ

“ನಾ ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ, ನನ್ನಲ್ಲಡಗಿದೆ ಶಕ್ತಿ” ಎಂದು ಭಾರತದ ಪ್ರಜೆಗಳನ್ನು ಮತ ಚಲಾಯಿಸಲು ಹುರಿದುಂಬಿಸಿದ ಭಾರತದ ಚುನಾವಣಾ ಆಯೋಗದ ಹಾಡನ್ನು ಮೆಲುಕು ಹಾಕುತ್ತಾ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ,

ಚುನಾವಣೆ ಎನ್ನುವುದೇ ಒಂದು ಅಸ್ತ್ರ, ಪಕ್ಷ ಪಕ್ಷಗಳ ನಡುವೆ ಜನಪ್ರತಿನಿಧಿಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಪೈಪೋಟಿ ನಡೆಯುವಾಗ ಪರಿಹಾರವಾಗಿ ಬರುವುದೇ ಚುನಾವಣೆಯಾಗಿದೆ, ಚುನಾವಣೆ ಹಾಗೂ ಮತದಾನದ ನಡುವೆ ಅಪಾರವಾದ ಸಂಬಂಧವಿದೆ, ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು  ಮುಖಗಳಿದ್ದ ಹಾಗೆ, ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನವೇ ಮುಖ್ಯವಾದ ಭಾಗ,

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಸಂವಿಧಾನಾತ್ಮಕ ಸರ್ಕಾರ, ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಪ್ರಜೆಗಳು ಆರಿಸುವ ಪ್ರಜಾ ಪ್ರತಿನಿಧಿಗೆ ರಾಜಕೀಯ ಹಕ್ಕನ್ನು ನೀಡಲು ಚುನಾವಣೆ ಎಂಬ ಕಾರ್ಯತಂತ್ರವನ್ನು ರೂಪಿಸಿದೆ, ಮತದಾನದ ಹಕ್ಕು ಇತರ ಹಕ್ಕುಗಳೊಡನೆ ನಾಗರಿಕರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕಾಗಿದೆ, ಆದ್ದರಿಂದ ಬನ್ನಿ ಎಲ್ಲಾ ಸೇರಿ ಯೋಗ್ಯವಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡೋಣ, ನಮ್ಮ ಹಕ್ಕನ್ನು ಸರಿಯಾಗಿ ಉಪಯೋಗಿಸಕೊಳ್ಳೋಣ,

ಇತ್ತೀಚಿನ ವಿದ್ಯಮಾನಗಳಲ್ಲಿ ಒಂದು ಸಮೀಕ್ಷೆಯ ಪ್ರಕಾರ ಬಹುತೇಕ ಸುಶಿಕ್ಷಿತರು ಮತಗಟ್ಟೆಗೆ ಬರದೇ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ, 5 ನೇ ಕ್ಲಾಸಿಂದ 18 ವರ್ಷ ತುಂಬಿದವರೆಲ್ಲ ಮತದಾನ ಮಾಡಲೇಬೇಕು ಎಂದು ಪಾಠ ಮಾಡುತ್ತಾ ಬರುತ್ತಿದ್ದರೂ ಸಹ ಎಲ್ಲವನ್ನೂ ಓದಿಕೊಂಡಂತಹ ವಿದ್ಯಾವಂತರು ಚುನಾವಣೆಯ ದಿನ ಮತ ಚಲಾವಣೆ ಮಾಡುವುದನ್ನೇ ಮೈ ಮರೆತು ಮನೆಯಿಂದ ಹೊರಬರದೆ ಟಿವಿ ಮುಂದೆ ಕುಳಿತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆಯುವುದು. ಇನ್ನು ಕೆಲವರು ಮಕ್ಕಳ ಬೇಸಿಗೆ ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದು, ಒಂದು (ದೂರದ) ಊರಿನಿಂದ ಇನ್ನೊಂದು ಊರಿಗೆ ಹೊಟ್ಟೆಪಾಡಿಗಾಗಿ ಅಥವಾ ಕೆಲಸದ ನಿಮಿತ್ತ ಬಂದ ಕೆಲಸಗಾರರು ಮತದಾನ ಮಾಡಲು ಒಂದು ದಿನಕೊಸ್ಕರ ತಮ್ಮ ಊರಿಗೆ ಹೋಗಲಾರದೆ ಇರುವ ಪರಿಸ್ಥಿಯಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಇಂದು ಭಾರತದ ಯಾವುದೇ ಭಾಗದಲ್ಲಿ ಮತದಾನವಾದರೂ  ಶೇಕಡಾ 100 ರಷ್ಟು ಮತದಾನ ನಡೆಯುತ್ತಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ನಾಗರಿಕರಲ್ಲಿ ಮತದಾನದ ಬಗ್ಗೆ ಇರುವ  ಅಲಕ್ಷ್ಯ ಮತ್ತು ಅವರಿಗೆ ತಮ್ಮ ಮತದಾನದ ಹಕ್ಕು ಹಾಗೂ ಜವಾಬ್ದಾರಿಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದೇ ಆಗಿದೆ, ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಸರಿಯಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡಬೇಕು, ದೇಶದ ಭವಿಷ್ಯದ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಕರ್ತವ್ಯ ಇದು ಎಂದು ಭಾವಿಸಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆರಿಸುವಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು,

ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಾಗಿದೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನವೇ ಅತ್ಯಂತ ಮುಖ್ಯವಾದ ಘಟ್ಟ, ಮತ ಚಲಾಯಿಸುವವನೇ ಮತದಾರ, ಜಾತಿ, ಮತ, ಪಂಥ, ಧರ್ಮ, ಉನ್ನತ, ಕನಿಷ್ಠ, ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಒಂದು ರಾಷ್ಟ್ರದ 18 ವರ್ಷ ತುಂಬಿದ ಪ್ರಜೆಯು ಮತ ಚಲಾಯಿಸುವ ಹಕ್ಕನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ,

ಬನ್ನಿ ಎಲ್ಲಾ ಸೇರಿ ರಾಷ್ಟ್ರೀಯ ಹಬ್ಬದಂತೆ ಈ ಬಾರಿಯ ಚುನಾವಣೆಯ ಹಬ್ಬವನ್ನು ಆಚರಿಸೋಣ 10ನೇ ಮೇ 2023 ರಂದು ಯೋಗ್ಯವಾದ ಪ್ರಜಾಪ್ರತಿನಿಧಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ ಕರ್ನಾಟಕದ ರಾಜ್ಯದ ಮುಂದಿನ 5 ವರ್ಷದ ಭವಿಷ್ಯಕ್ಕೆ ಮುನ್ನುಡಿ ಬರೆಯೋಣ, ರಾಜ್ಯದ ಮುಂದಿನ 5 ವರ್ಷದ ಭವಿಷ್ಯದ ಜೊತೆಗೆ ನಮ್ಮಂತಹ ಕೋಟ್ಯಂತರ ಪ್ರಜೆಗಳ 5 ವರ್ಷದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿ……!

ಗೌಸ್ ಪೀರ್,
ಪ್ರಥಮ ವರ್ಷದ ಬಿಎ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ಶಿವಮೊಗ್ಗ,

ನನ್ನ ಕಾಲೇಜು ನನ್ನ ಹೆಮ್ಮೆ- 2

ಆ ದಿನ ಸಂಜೆ ಹೊಸನಗರದಿಂದ ಶಿವಮೊಗ್ಗಕ್ಕೆ ಬಂದು ಕಾಲಿಟ್ಟ ಆ ದಿನ ಕಳೆದು ಬಹಳ ಕಾಲವಾಯಿತು ಎಂದು ಅನಿಸುತ್ತಿಲ್ಲ..

ನೋಡು ನೋಡುತ್ತಲೇ ಎರಡು ವರ್ಷ ಅಲ್ಲ ಎರಡುವರೆ ವರ್ಷಗಳು ಕಳೆದು ಹೋಯಿತು.. ಯಾರೂ ಪರಿಚಯ ಇರದ ತರಗತಿ, ಬೆರಳೆಣಿಕೆ ದಿನಗಳಲ್ಲಿ ಪರಿಚಯವಾಗಿ ಕಳೆದು ಹೋದ ಆ ದಿನಗಳನ್ನು ನೆನೆಯುವುದು ಅನಿವಾರ್ಯ.

ಕ್ಲಾಸ್ ಇಲ್ಲದೆ ಇದ್ದಾಗ ಸ್ನೇಹಿತರೊಂದಿಗೆ ಹರಟೆ ಹೊಡೆದ  ಆ ಕ್ಷಣಗಳು, ಮಾಡಿದ ಮೋಜು ಮಸ್ತಿ, ನಮಗೆ ಫ್ರೆಷರ್ಸ್ ಪಾರ್ಟಿ ಕೊಟ್ಟ ಆ ಸೀನಿಯರ್ಸ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಿದ ಆ ಕ್ಷಣಗಳು, ಕನ್ನಡ ತರಗತಿಯಲ್ಲಿ ಮಾಡಿದ ತರ್ಲೆಗಳು, ಇಂಗ್ಲಿಷ್ ತರಗತಿಯಲ್ಲಿ ಮಾಡಿದ ಕೀಟಲೆಗಳು,

ಆಪ್ಷನಲ್ ಇಂಗ್ಲಿಷ್ ತರಗತಿಯಲ್ಲಿ ನಿದ್ರೆ 😴 ಹೋದ ಆ ಕ್ಷಣಗಳು, ಸೈಕಾಲಜಿ ತರಗತಿಯಲ್ಲಿ ತಮಾಷೆ ಮಾಡಲು ಹೋಗಿ ಅಮಾವಾಸ್ಯೆಯಾದ ಆ ದಿನಗಳು😂🙌, ಆಕ್ಟಿವಿಟಿ ಗಾಗಿ ಕೂರುತ್ತಿದ್ದ  ಜರ್ನಲಿಸಂ ಕ್ಲಾಸ್ ಗಳು,🥳, ಅಟೆಂಡೆನ್ಸ್ ಬೇಕಲ್ಲ ಎಂದು ಕೂರುತಿದ್ದ ಐಸಿ ಮತ್ತು ಇವಿಎಸ್ ತರಗತಿಗಳು😁.

ಬೇಡ ಬೇಡವೆಂದರೂ ಬರುತ್ತಿದ್ದ ಎರಡು ಇಂಟರ್ನಲ್ಸ್ ಗಳು🥺🤦🏻‍♀️, ನಾನ್ ಏನ್ ಕಮ್ಮಿ ಇಲ್ಲ ಅಂತ ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾಕ್ ಪ್ರಾಕ್ಟಿಕಲ್ಸ್ ಗಳು 🤦🏻‍♀️ಕ್ಲಾಸ್ ಟೆಸ್ಟ್ ಗಳು, ಇವೆಲ್ಲವೂ ಕೂಡ ಮೊನ್ನೆ ಮೊನ್ನೆ  ಅಷ್ಟೇ ನಡೆದಂತೆ ಅನಿಸುತ್ತಿದೆ..

ಕ್ಲಾಸ್ ಮುಗಿದ ಕೂಡಲೇ ಪಕ್ಕದಲ್ಲಿರುವ ಟೀ ಅಂಗಡಿಗೆ ಹೋಗಿ ಕುಡಿಯುತ್ತಿದ್ದ ಬಿಸಿ ಬಿಸಿ ಟೀ ☕ ಗಳು ಮತ್ತು 12 ರೂಪಾಯಿಯ ಪೇಪರ್ ಬೋಟ್ಗಳು 🧃, ಹೊರಗಡೆ ಊಟಕ್ಕೆ ಕಾಸಿಲ್ಲ💰 ಎಂದಾಗ ಕಾಲೇಜ್ ಕ್ಯಾಂಟೀನ್ ನಲ್ಲೇ ಅನ್ನ ಮತ್ತು ಸೊಪ್ಪಿನ ಹುಳಿ 🍚 ತಿನ್ನುತ್ತಿದ್ದ ಆ ದಿನಗಳು, ಕೆಲವರಿಗಂತು ಉಪ್ಪಿನಕಾಯಿಯೇ ಅನ್ನ 😂 ಹೋಗಿಬಂದು ಕುಡಿಯುತ್ತಿದ್ದ ಆ ಮಜ್ಜಿಗೆ ಮತ್ತು ತಿನ್ನುತ್ತಿದ್ದ 🍋 ನಿಂಬೆಕಾಯಿ ಉಪ್ಪಿನಕಾಯಿ.

ಕಾಲೇಜ್ ಕ್ಯಾಂಟೀನ್ ನಲ್ಲಿ ತಿಂದು ತಿಂದು ಬೇಸರವಾದಾಗ, ಸಾಲ ಮಾಡಿ ಹೋಗುತ್ತಿದ್ದ ಆ ತಿನಿಸು ಅಂಗಳ (ಫುಡ್ ಕೋರ್ಟ್) ದಲ್ಲಿ ತಿನ್ನುತ್ತಿದ್ದ ಆ ಪಲಾವ್, ಗೋಬಿ, ಮೊಸರನ್ನ, ದಿನ ಕಳೆದಂತೆ ಬದಲಾದ ಆ ಪಯಣದ ದಾರಿ ವೆಜ್ ಫುಡ್ ಕೋರ್ಟ್ ನಿಂದ ನಾನ್ ವೆಜ್ ಫುಡ್ ಕೋರ್ಟ್ ಕಡೆಗೆ.

ತರಗತಿ ಇದ್ದರೂ ಬಂಕ್ ಮಾಡಿ ಲೈಬ್ರರಿಯಲ್ಲಿ ಕೂತು ಕಂಪ್ಲೀಟ್ ಮಾಡಿದ ಅಸೈನ್ಮೆಂಟ್  ಮತ್ತು ರೆಕಾರ್ಡ ಗಳು  ಗಳು, ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ ಆ ಪಿಪಿಟಿ ಮತ್ತು  ಸೆಮಿನಾರ್ ಗಳು,  ಮಧ್ಯಾಹ್ನ ಕ್ಲಾಸ್ ಇಲ್ಲದೆ ಇದ್ದಾಗ ಮಾಡಿದ ಆ ಗಲಾಟೆಗಳು, ಅದಕ್ಕೆ ಪ್ರತಿಫಲವಾಗಿ ಸರಾಸರಿಯಾಗಿ ಪ್ರತಿಯೊಬ್ಬ ಶಿಕ್ಷಕರಿಂದ ಉಗಿಸಿಕೊಂಡ   ಆ ಮಧುರವಾದ ಕ್ಷಣಗಳು. 😁⭐

ಕಡೆ ಕಡೆಗೆ ಪರಿಚಯ ಆದ  ಜೂನಿಯರ್ಸ್ ಗಳು🦧 ಸೀನಿಯರ್ಸ್ ಅಂತ ಬಹಳ ಮರ್ಯಾದೆ  ಮರ್ಯಾದೆ ನೀಡುತ್ತಾ ನಮಗೆ ಹೆದರದೆ ಸಹೋದರ ಸಹೋದರಿಯರಂತೆ ಕೀಟಲೆ ಮಾಡಿ, ಕಾಳಜಿ ತೋರಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕಲಿಯುತ್ತಿರುವ ಗೆಳೆಯರು.

ಇಂಟರ್ನಲ್ ಇದ್ದಾಗ ಮಾತ್ರ ಯೂಸ್ ಮಾಡಿಕೊಳ್ಳುತ್ತಿದ್ದ ಲೈಬ್ರರಿ ಕಾರ್ಡುಗಳು , ಲೈಬ್ರರಿಗೆ ಓದಲು 📖 ಎಂದು ಹೋಗಿ ಅಲ್ಲೇ ಮಲಗಿ ಬಿಡುತ್ತಿದ್ದ ಸಾಧಕರದ ನನ್ನ ಮಿತ್ರರು, ಸದಾಕಾಲ ಓದುತ್ತಲೇ ಇದ್ದು ಟಾಪರ್ ಟಾಪರ್ ಎಂದು ಕರೆಸಿ ಕೊಳ್ಳುತ್ತಿದ್ದಂತ ಮಹಾನ್ ಮೇಧಾವಿಗಳು, ಏನು ಓದದೆ ಪರೀಕ್ಷೆಯಲ್ಲಿ ಓದಿದವರಿಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದ ಬುದ್ಧಿವಂತರು, ಏನನ್ನು ಓದಿಯೇ ಇಲ್ಲ ಓದಿಯೇ ಇಲ್ಲ ಎಂದು ಕಾಗೆ ಹಾರಿಸಿ ಪ್ರತಿ ಪರೀಕ್ಷೆಯಲ್ಲೂ  ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುತ್ತಿದ್ದ   ಆ ಮಿತ್ರದ್ರೋಹಿಗಳು.

ಸದಾಕಾಲ ಹೊಗಳಿಸಿಕೊಳ್ಳುವವರ ಮಧ್ಯೆ ಇಲ್ಲದ ಕೀಟಲೆಗಳನ್ನು ಮಾಡಿ ಬೈಸಿಕೊಳ್ಳುತ್ತಿದ್ದ ವೀರರು, ಪ್ರಾರಂಭದಲ್ಲಿ ಉಂಟಾದ ಅದೆಷ್ಟೋ ಗ್ಯಾಂಗ್ಗಳು,  ಕಾಲಾ ನಂತರ ಮುರಿದು ಬಿದ್ದ ಅದೇ ಗ್ಯಾಂಗಳು, ಉಂಟಾದ ಅದೆಷ್ಟೋ ಮನಸ್ತಾಪಗಳು , ಬಿಡು ಮಚ ಇದೆಲ್ಲ ಕಾಮನ್ ಅನ್ನುತ್ತಾ..

ಫ್ರೆಂಡ್ಶಿಪ್ ಅಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ,
ಕಂಪ್ರೋ ಮಾಡಿ  ಮತ್ತರಿತುಕೊ ಒಗಟ್ಟಲಿ ಬಲವಿದೆ..

ಎಂದು ಕಿರಿಕ್ ಪಾರ್ಟಿ ಸಿನೆಮಾದ ಹಾಡನ್ನು ನೆನೆಸುತ್ತ ಕೊನೆಗೂ ಒಂದಾದ ಅದೆಷ್ಟೋ ಸ್ನೇಹ ಸಂಬಂಧಗಳು.

ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದ ಪ್ರತಿಭೆಗಳು⭐, ಪ್ರತಿಯೊಬ್ಬರೂ ಭಾಗವಹಿಸಲೇಬೇಕೆಂದು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದ ಕಟೀಲ್ ಅಶೋಕ್ ಪೈ ಕಾಲೇಜಿನ ಶಿಕ್ಷಕ ವೃಂದ, ಯಾವ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಹೊರಗಡೆ ಹೋಗದಂತೆ ಕಾವಲು ಕಾಯುತ್ತಿದ್ದ ಅಬ್ದುಲ್ ಅಣ್ಣ, 

ಇದೇ ನಮ್ಮೆಲ್ಲರ ಕಾಲೇಜ್ ,

ಇಷ್ಟೇ ಅಲ್ಲ ಹೇಳಕ್ ಹೋದ್ರೆ ಬೇಜಾನ್ ಇದೆ ಆದ್ರೆ ಓದೊರಿಲ್ಲ.. Anyway ಇನ್ನೇನ್ ಕಾಲೇಜ್ ಮುಗೀತಾ ಬಂತು … ನಗ್ತಾ ಇರೋಣ ನಾಗ್ಸ್ತಾ ಇರೋಣ..

ಇಷ್ಟು ಹೇಳಕ್ಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್.

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

‘ROLE OF YOUTH IN SANITATION AND CLEANLINESS IN SOCIETY’ : 2

Sanitation and cleanliness are among the humblest of the civic virtues, and it is easy to underestimate their significance. Cleanliness is indeed next to godliness.

Sanitation and cleanliness play an important role in the betterment of the physical environment. Sanitation refers to the maintenance of hygienic conditions and improvement and promotion of human health through different practices including safe disposal of human waste- solid, liquid, garbage collection, health and hygiene management. We must reduce the harmful effect of inadequate sanitation practices in order to improve health and hygiene promote sustainable development. Practicing good sanitation is a life-long solution for dangerous diseases and contaminations.

Sanitation and cleanliness are crucial for everyone since they aid in the maintenance of health and the extension of like spans.

Why is sanitation and cleanliness so important?  

  • It helps in prevention of illness and diseases in the family.
  • Maintaining proper cleanliness and hygiene is also important for the emotional well being. A healthy body will nourish a healthy mind and the reverse is also true.
  • Sanitation and hygiene shape our personalities and strengthen our self-perception.
  • By ensuring the possible physical and mental environment around us, we aid in our development.
  • We provide the ideal atmosphere for ourselves and the people around us by maintaining proper sanitation and hygiene. We are making the most of our living situation and as a result, improving the quality of life for others.

        National youth Day is celebrated every year on January 12, to honour the birth anniversary of Swami Vivekananda, who believed in the power of youth and service to humanity.

“Arise! Awake! And don’t stop until the goal is reached” is one of their famous quotation.

Nothing can equal the splendour of the youth.

To be young- that itself is to possess a treasure of infinite worth far greater Thank any person of power. Together we will explore our world-pushing the boundaries of understanding in new and surprising ways. Confidence, conviction and character are three most important qualities of youth. Youth is strength. Youth is commitment to fulfil certain goals. Youth is the pillar of society.

As the entire nation is abuzz with the cleanliness drives and campaigns under the oh-so famous ‘Swatch Bharat Abhiyan’ launched by the honourable Prime minister of India Mr. Narendra Modi, Lets continue to contribute to it by making ourselves clean first. We must ensure we become the real participants in this crusade against the dirt and squalor in true spirit. We must start the cleanliness drive from our home and surroundings.

Students, who are so energetic and dedicated to anything they fully drawn towards can do phenomenal work in making cleanliness a successful campaign.

India has immense youth power. All our nation missing is channelling of this power.

Manasi K R

I Year BSc Student

Kateel Ashok Pai Memorial College-Shivamogga                

ಸಮಾಜದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವಲ್ಲಿ ಯುವಕರ ಪಾತ್ರ.

“ಯಾರನ್ನು ಅವರ ಕೊಳಕು ಪಾದಗಳಿಂದ ನನ್ನ ಮನಸ್ಸಿನಲ್ಲಿ ನಡೆಯಲು ಬಿಡುವುದಿಲ್ಲ”. ಇದು 20ನೇ ಶತಮಾನದ ಮಹಾ ಮಾನವತಾಪುರುಷನ ಮನದಾಳದ ಮಾತು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅವರು ಕೊಟ್ಟ ಪ್ರಾಶಸ್ತ್ಯವೇನು? ಮಹತ್ವವೇನು? ಎಂಬುದಕ್ಕೆ ಕನ್ನಡಿ. ಅವರು ಮತ್ತಾರು ಅಲ್ಲ, ಅವರೇ ನಮ್ಮ ರಾಷ್ಟ್ರಪಿತ ಗಾಂಧೀಜಿ. ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ ಅದು ಜೀವನದ ಅವಿಭಾಜ್ಯ ಅಂಗ ಎಂದೇ ನಂಬಿದ್ದ ಮಹಾನ್ ಚೇತನ. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವಲ್ಲಿ ಯುವಶಕ್ತಿ ಎಂದು ಕರೆಸಿಕೊಳ್ಳುವ ಯುವಜನರ ಪಾತ್ರ ಬಹಳ ದೊಡ್ಡದು ಆಗ ಮಾತ್ರ ನನ್ನ ಭಾರತ ಮಹಾನ್ ಭಾರತವಾಗಲು ಸಾಧ್ಯ!!!..

ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವಲ್ಲಿ ಯುವಕರ ಪಾತ್ರ ಏನು? ಎಂದು ತಿಳಿಯುವ ಮೊದಲು ಅವುಗಳ ಅರ್ಥವನ್ನು ನೋಡುವುದಾದರೆ ಸ್ವಚ್ಛತೆ ಎಂಬುದು ನಮ್ಮನ್ನು ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛ ಮಾಡಬೇಕು ಎಂದು ಸೂಚಿಸಿದರೆ ನೈರ್ಮಲ್ಯತೆಯು ಆ ಸ್ವಚ್ಛತೆಯನ್ನ ಹೇಗೆ ಪ್ರತಿನಿತ್ಯವೂ ಕಾಪಾಡುವುದು ಅಥವಾ ಪ್ರತಿನಿತ್ಯ ಸ್ವಚ್ಛವಾಗಿರುವುದೇ ನೈರ್ಮಲ್ಯತೆ. ಸ್ವಚ್ಛತೆ ಮತ್ತು ನೈರ್ಮಲ್ಯತೆ ಒಂದೇ ನಾಣ್ಯದ ಎರಡು ಮುಖಗಳು.

ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಈಗ ಒಂದು ದೊಡ್ಡಸವಾಲಾಗಿದೆ . ಕೈಗಾರಿಕರಣ, ನಗರೀಕರಣ, ಔದ್ಯೋಗಿಕರಣ ಎಂಬ ಬೆನ್ನು ಬಿದ್ದ ನಾವು ಅಲೆಕ್ಸಾಂಡರ್ ಎಂಬಾತ ಕಂಡುಹಿಡಿದ ಪ್ಲಾಸ್ಟಿಕ್ ನ ಬಲೆಗೆ ಬಿದ್ದೆವು. ಅದು ಎಷ್ಟು ನಮ್ಮ ಬದುಕಿಗೆ ಜೊತೆ ಆಯ್ತು? ಎಂದು ಎಲ್ಲರಿಗೂ ಗೊತ್ತು. ಪ್ಲಾಸ್ಟಿಕ್ ಇಂದು ಪೆಡಂಭೂತದಂತೆ ನಮ್ಮ ಬೆನ್ನು ಹತ್ತಿದೆ. ಇದಕ್ಕೆ ಮುಕ್ತಿ ಕೊಡಲು ಒಂದೇ ಬಾರಿಗೆ ಸಾಧ್ಯವಿಲ್ಲ ಎಂಬುದು ಕಟುವಾದ ಸತ್ಯ. ಇದು ಅನೇಕ ರೀತಿಯ ಮಾಲಿನ್ಯಕ್ಕು ತನ್ನ ಕೊಡುಗೆಯನ್ನು ನೀಡಿದೆ. ಸಕಲರು ಸ್ವಲ್ಪ ಕ್ಷಣವು ಬಿಟ್ಟಿರಲಾರದ ‘ಗಾಳಿ’ , ನೂರು ಜನ ಪ್ರೀತಿ ಇಲ್ಲದೆ ಇರಬಹುದು ಆದರೆ ಒಬ್ಬರು ನೀರಿಲ್ಲದೆ ಇರಲಾರರು ಅಂತಹ ಪವಿತ್ರವಾದ ನೀರು ಇಂದು ಅಸ್ವಚ್ಛತೆಯಿಂದ ಇರುವುದು ಸಹಿಸಲಾಗದ ನೋವು .”ಜನನಕ್ಕೆ ಕಾರಣ ,ಜೀವನಕ್ಕೆ ಚೇತನವಾಗಿರುವ ಭೂಮಿಯು ಇಂದು ಅಸ್ವಚತೆ ಅನೈರ್ಮಲ್ಯಕರಣಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!! ಇವೆಲ್ಲವೂ ಮಾನವನ ಉತ್ತಮ ಸಮಾಜಕ್ಕೆ ಯಮವೇ ಎಂದು ಹೇಳಿದರೆ ತಪ್ಪಾಗಲಾರದು.

ಇ – ವೇಸ್ಟ್ ಕೂಡ ಈಗಿನ ಅಸ್ವಚ್ಛತೆಯ ಒಂದು ಭಾಗವಾಗಿದೆ. ಎಲ್ಲವೂ ಕೂಡ ತನ್ನ ಬೆರಳ ತುದಿಯಲ್ಲೇ ಆಗಬೇಕು ಎಂಬ ದುರಾಸೆಯ ಮಾನವ ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾನೆ. ಇ- ವೆಸ್ಟ್ ಗಳಾದ ಮೊಬೈಲ್ಗಳ ಹಾಳಾದ ಪರಿಕರ ,ಕಂಪ್ಯೂಟರ್ಗಳ ಭಾಗ ಇತ್ಯಾದಿ. ಇವು ಮಣ್ಣಿನಲ್ಲಿ ಬೇಗ ಕರಗದ ವಸ್ತುಗಳಾಗಿರುವುದರಿಂದ ಅಸ್ವಚ್ಛತೆ ಅನೈರ್ಮಲ್ಯೀಕರಣಕ್ಕೆ ಕಾರಣವಾಗಿದೆ. ಇವು ಕೂಡ ಪರಿಸರಕ್ಕೆ ಕಂಟಕವೇ…..

ಇವನ್ನೆಲ್ಲ ತಡೆಗಟ್ಟಬೇಕೆಂದರೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕು .”ಸ್ವಚ್ಚವಾದ, ನೈರ್ಮಲ್ಯವಾದ ,ಭಾರತವನ್ನು ಕಟ್ಟಲು ಇಟ್ಟಿಗೆ ಮಣ್ಣಿನಿಂದ ಸಾಧ್ಯವಿಲ್ಲ ಅದು ಸಾಧ್ಯವಾಗುವುದು ಬಿಸಿ ರಕ್ತ ಮಾಂಸಗಳಿಂದ ಕೂಡಿದ ಒಂದು ಬಲಿಷ್ಠ ಶಕ್ತಿ ಎಂದು ಕರೆಸಿಕೊಳ್ಳುವ ಯುವಕ ಯುವತಿಯರಿಂದ”. ಭಾರತದಂತಹ ರಾಷ್ಟ್ರಕಂತು ಇದು ಬಹು ಸುಲಭ ಇಡೀ ಜಗತ್ತಿಗೆ ಯುವಶಕ್ತಿಯನ್ನು ಪರಿಚಯಿಸಿದ, ಅತ್ಯಂತ ಬೃಹತ್ತಾದ ಯುವಶಕ್ತಿ ಹೊಂದಿರುವ ನಾವು ನಮ್ಮನ್ನು ಹೇಗೆ ಸ್ವಚ್ಛವಾಗಿರಿಸಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ, ನೈರ್ಮಲ್ಯವಾಗಿ ಇಡಬೇಕು. ಪ್ರಕೃತಿಯ ಕೂಸಾಗಿರುವ ನಾವು ನಮ್ಮ ಅಮ್ಮನನ್ನು ನೋಡಿಕೊಳ್ಳುವ ರೀತಿಯಲ್ಲಿ ಪರಿಸರ ಅಂದರೆ ಸಮಾಜವನ್ನು ನೋಡಿಕೊಳ್ಳಬೇಕು. ಇದು ಜವಾಬ್ದಾರಿಯು ಹೌದು…. ಕರ್ತವ್ಯವೂ ಹೌದು….

ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಯುವಕರು ತಮ್ಮ ಪಾತ್ರವನ್ನು ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾಡಬಹುದು ಅವುಗಳೆಂದರೆ:

೧. ತಮ್ಮನ್ನು ತಾವು ಸ್ವಚ್ಚವಾಗಿಟ್ಟುಕೊಳ್ಳುವುದು ಮತ್ತು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರತಿನಿತ್ಯ ಸ್ವಚ್ಛವಾಗಿರುವಂತೆ ಮಾಡುವುದು.

೨. ಸ್ವಚ್ಛತೆಗೆ ಸಂಬಂಧಿಸಿದಂತೆ ಎಲ್ಲರಿಗೂ ಅರ್ಥವಾಗುವಂತೆ ಬೀದಿ ನಾಟಕಗಳನ್ನು ಮಾಡುವುದು.

೩. ಯುವಕ, ಯುವತಿಯರೆಲ್ಲ ಸೇರಿ ಸ್ವಚ್ಛತೆ ಪ್ರಾಮುಖ್ಯತೆಯ ಕುರಿತು ಜನಸಾಮಾನ್ಯರಿಗೆ ತಿಳಿಸುವುದು.

೪. ಸ್ವಚ್ಛತೆ ಮತ್ತು ನೈರ್ಮಲ್ಯಕರಣಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡುವುದು.

೫. ಭಿತ್ತಿಪತ್ರ , ಗೋಡೆ ಬರಹಗಳನ್ನು ಸ್ವಚ್ಛತೆಗೆ ಸಂಬಂಧಿಸಿದಂತೆ ಬರೆಯುವುದು. ಇತ್ಯಾದಿ…

ವಿಷಾದನೀಯವೆಂದರೆ ಇಂದು ಯುವಕ ಯುವತಿಯರು ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ. ಅಂತವರು ತಮ್ಮ ಕರ್ತವ್ಯವನ್ನು ಅರಿತು ಸಾಮಾಜಿಕ ಜಾಲತಾಣದಲ್ಲೇ ಸ್ವಚ್ಛತೆ, ನೈರ್ಮಲ್ಯತೆಯ ಕುರಿತು ಪೋಸ್ಟರ್ ಗಳನ್ನು ಬಿಡಬೇಕು. ಇದರಿಂದ ಕೂಡ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ತಮ್ಮ ಪಾತ್ರವನ್ನು ವಹಿಸಿದಂತಾಗುತ್ತದೆ.

ಇದರೊಂದಿಗೆ ಯುವಕರು ಸರ್ಕಾರಕ್ಕೂ ಇದರ ಬಗ್ಗೆ ಅರಿವು ಮೂಡಿಸಿ, ಸರ್ಕಾರಕ್ಕೆ ತಮ್ಮ ಸಲಹೆಯನ್ನು ನೀಡಿ ಅದು ಜಾರಿಯಾಗುವಂತೆ ಮಾಡಬೇಕು .ನನ್ನ ಪ್ರಕಾರ ಸರ್ಕಾರಕ್ಕೆ ಯುವಜನತೆ ಕೊಡಬಹುದಾದ ಸಲಹೆಗಳೆಂದರೆ:

೧. ಪ್ರತಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಕಸದ ಬುಟ್ಟಿ ಕೊಟ್ಟು. ಹಸಿಕಸ , ಒಣಕಸ ಬೇರ್ಪಡಿಸಲು ಹೇಳಿ ಬೇರೆ ಮಾಡದಿದ್ದರೆ ಆಗುವ ತೊಂದರೆಯ ಬಗ್ಗೆ ಅರಿವು ಮೂಡಿಸಿ ಕಸಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡಲು ತಿಳಿಸಬೇಕು. ಇದರೊಂದಿಗೆ ಯುವಕರ ಸಹಾಯವು ಇದೆ ಎಂದು ಹಸ್ತ ಚಾಚಬೇಕು.

೨. ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು.

೩. ಚರಂಡಿ ನೀರನ್ನು ಸರಿಯಾದ ರೀತಿಯಲ್ಲಿ ಹೋಗುವಂತೆ ಮಾಡಬೇಕು. ಪ್ರತಿ ಬೀದಿಗೂ ಅದರ ಉದ್ದದ ಅನುಗುಣವಾಗಿ ಕಸದ ಬುಟ್ಟಿಗಳನ್ನು ಇರಿಸಬೇಕು.

೪. ಪರಿಸರದ ಅಥವಾ ಸಮಾಜದ ಸ್ವಚ್ಛತೆ ನೈರ್ಮಲ್ಯಕರಣಕ್ಕೆ ಅಡ್ಡಿಯಾಗಿರುವ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಬೇಕು.

೫. ಕೈಗಾರಿಕೆಯಿಂದ ಅಥವಾ ಇನ್ಯಾವುದೇ ರೀತಿಯಿಂದ ನೀರಿನ ಮೂಲಗಳಿಗೆ ತ್ಯಾಜ್ಯಗಳನ್ನು ಹೋಗದಂತೆ ಮಾಡಬೇಕು.

೬. ಅತ್ಯಂತ ಹೊಗೆ ಬೀರುವ ಗಾಡಿ, ಕೈಗಾರಿಕೆಗಳನ್ನು ಅತ್ಯಂತ ಕಮ್ಮಿ ಮಾಡಬೇಕು.

ಹೀಗೆ ಯುವಜನತೆ   ಸರ್ಕಾರಕ್ಕೆ ಸಲಹೆ ನೀಡಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಇದನ್ನು ಕೇವಲ ಒಂದು ವಾರ ಒಂದು ತಿಂಗಳು ಮಾಡದೆ ಪ್ರತಿನಿತ್ಯ ತಮ್ಮ ಸಮಾಜವನ್ನು ನೈರ್ಮಲ್ಯವಾಗಿಡಲು ಪ್ರಯತ್ನಿಸಬೇಕು.

“ಆರೋಗ್ಯದ ಮೂಲವೇ ಸ್ವಚ್ಛತೆ ಮತ್ತು ನೈರ್ಮಲ್ಯ”. ಅತ್ಯಂತ ದೊಡ್ಡ ಸಂವಹನ ಮಾಧ್ಯಮ ಎಂದು ಕರೆಸಿಕೊಳ್ಳುವ ವಿದ್ಯಾರ್ಥಿಗಳು ,ಯುವ ಜನರು ಸ್ವಚ್ಛತೆ ಮತ್ತು ನೈರ್ಮಲ್ಯವಾದ ಸಮಾಜವನ್ನು ನಿರ್ಮಿಸಲು ತಮ್ಮ ದಾಪುಗಾಲನ್ನು ಹಾಕಬೇಕು. ಗಾಂಧಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸು ಮಾಡಬೇಕು.”ಸ್ವಚ್ಛ ಮೇವ ಜಯತೇ” ಎಂದು ಜಗತ್ತಿಗೆಲ್ಲ ಸಾರಬೇಕು .ಇದರ ರುವಾರಿಗಳು ನಾವಾಗೋಣ ಸ್ವಚ್ಛವಾದ ನೈರ್ಮನ್ಯವಾದ ಸಮಾಜವನ್ನು ಕಟ್ಟೋಣ.

ಧನ್ಯವಾದಗಳು….

ಸಂಧ್ಯಾ ಕೆ. ಕೆ

ಪ್ರಥಮ ಬಿ.ಎ ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್ಶಿವಮೊಗ್ಗ

Role of Youth in Sanitation and Cleanliness in Society : 1

On the Occasion of Gandhi Jayanthi an essay writing competition is organised on the topic “Role of Youth in Sanitisation and Cleanliness in Society“ for students.
Selected few essays are publishing in this platform.

“The world’s biggest power is the youth and the beauty of woman.”- Chanakya.

India has the highest number of youth population in the world with 365 million number of 10-24 years old. The beauty of Mother India could be achieved and be maintained through sanitation and cleanliness. As youth are the backbone of the nation. Youth become the important contributors when it comes to sanitation and cleanliness. Hence, increasing the power of the society and the nation.

Cleanliness refers to the state of being clean. It is something which must not be forced but encouraged. As every youth should develop the habit of cleanliness which can beneficial to the whole nation and even can enhance the quality of one’s life. “A sound mind in a sound body” as the quote states that one should have a clean body in order to have a cleaner soul and mind. It’s not a tough task to complete rather cleanliness is quite easy. It is essential for the health and wellbeing of humans and animals. Cleanliness will also keep us physically fit and also enhance our lifespan. Also similarly, cleanliness in our society mean enhanced beauty and healthiness of the surrounding. It just doesn’t beautify the area but also make it more attractive which in turn gives peace for the mind and can also be helpful in attracting more tourists to enhance the economy of the country.

Sanitation refers to the public health conditions related to clean drinking water, and treatment and disposal of human waste with proper sewage system. Poor sanitation puts children and youth at risk of diseases and malnutrition which can impact on overall development, learning and later in life, lack of sanitation can be a barrier to individual prosperity and sustainable development. Without proper sanitation, it can also lead to spread of harmful deadly disease like malaria and dengue which are caused by mosquitoes grown in the places of poor sanitation which in turn be a risk to health and livelihoods. Proper sanitation promotes health, improves the quality of the environment and thus, enhancing the quality of life in a society.

Me being a youth, playing a role in sanitation and cleanliness, I ask myself these following questions: what can be done to achieve cleanliness and sanitation? What can I do in order to keep my society clean and safe from disease? How to maintain cleanliness and sanitation? In order to achieve cleanliness and sanitation every youth should join hands, starting from own society we should keep our surroundings clean, just by not littering wherever we like would contribute to a greater cleanliness, and together participating in the cleanliness campaign like Swachh Bharat Abhiyan which was started by prime minister of India Narendra Modi and cleaning our streets, parks and spreading awareness throughout the world leading to achieve cleanliness at greater level. Sanitation can be achieved by checking or by avoiding the collection of rainwater or drainage water in any open water bodies or in tyres sanitation is maintained by having proper sewage system and by using public restrooms.

Me as a youth can keep the society clean starting from my own house, cleaning and taking out the garbage and properly disposing it which in turn will have my house clean and tidy. And even in school or college I can maintain cleanliness by not littering in the classroom or anywhere in the premises and by properly disposing wastes in dustbins. In order to maintain sanitation, I could clean the bench, where I sit to eat if I spilled anything and properly flushing and washing hand after the use of toilet will play a huge role in sanitation. Furthermore we can maintain cleanliness and sanitation by adopting the three R’s : Reduce, Recycle and Reuse in society to avoid the garbage collection across the streets.

“Sanitation is more important than political freedom” -Mahatma Gandhi.

It is the responsibility of every youth in maintaining cleanliness and sanitation in society. As youth are the bigger contributors in the field of cleanliness and sanitation. It can influence the growth of nation’s economy at a great extent and also increase the beauty of the nation. It not only improve a nation but also enhance the quality of education and knowledge of every youth and children thus making society a safer place even for older generations. Overall through sanitation and cleanliness with youth playing a huge role thus improves society’s and even whole nation’s health wealth and prosperity.

ATHISH R SHETTY

I Year BA Student.

Kateel Ashok Pai Memorial College, Shivamogga

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ ಶುಭಾಶಯಗಳು (Happy Teachers Day)

“ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ”

ಅಂದರೆ, ಗುರುವು ಬ್ರಹ್ಮ, ವಿಷ್ಣುಮತ್ತು ಮಹೇಶ್ವರರ ಸ್ವರೂಪಿಯಾಗಿದ್ದು, ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು, ಎನ್ನುತ್ತಾರೆ ಶಂಕರಾಚಾರ್ಯರು.

ಹಾಗೆಯೇ ಪುರಂದರದಾಸರು : “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ತಿಂಗಳು ಬಂತೆಂದರೆ ಮೊದಲು ನೆನಪಾಗುವುದು ಶಿಕ್ಷಕರ ದಿನಾಚರಣೆ, ಹೌದು ಸೆಪ್ಟೆಂಬರ್‌ 5 ಶಿಕ್ಷಕರ ದಿನಾಚರಣೆ ಹಾಗೂ ಡಾ.|| ಸರ್ವಪಲ್ಲಿ ರಾಧಕೃಷ್ಣನ್‌ ರವರ ಹುಟ್ಟುಹಬ್ಬವೂ ಕೂಡ. ಪ್ರತಿ ಶಾಲಾ ಕಾಲೇಜುಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ತಮಗೆ ತಿಳಿದಿರುವ ವಿಷಯದ ಜೊತೆಗೆ, ತಮಗೆ ತಿಳಿದಿರದ ವಿಷಯಗಳನ್ನು ತಿಳಿದು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರುಗಳಿಗಾಗಿಯೇ ಇರುವ ದಿನ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆ ದಿನ ತಮ್ಮ ಶಿಕ್ಷಕರಿಗಾಗಿ ಹಬ್ಬದ ವತಾವರಣ ನಿರ್ಮಿಸುತ್ತಾರೆ.

ವಿವಿದ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಆ ದಿನವನ್ನು ಅರ್ಥ ಪೂರ್ಣಗೊಳಿಸುತ್ತಾರೆ. ಅಲ್ಲದೆ ತಮ್ಮ ವಿದ್ಯಾರ್ಥಿ ಜೀವನದ  ಶಿಕ್ಷಕರನ್ನು / ನೆಚ್ಚಿನ ಗುರುಗಳನ್ನು ನೆನಪಿಸಿಕೊಂಡು ಕೃತಙ್ಞಾತೆಗಳನ್ನು ತಿಳಿಸುತ್ತ ಅವರೊಂದಿಗಿನ ಆವಿನಾಬಾವ ನೆನಪುಗಳನ್ನು ಮೆಲುಕು ಹಾಕುವುದು ಈ ದಿನದ ವಿಶೇಷ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ತೆಗಿಸಿದ ಭಾವಚಿತ್ರಗಳೊಂದಿಗೆ ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ಸಂಬ್ರಮಿಸುತ್ತಾರೆ.

ಅರಿವಿಗೂ ಸಿಗದ ಜ್ಞಾನದ ಮೂರ್ತಿ ಶಿಕ್ಷಕ.

ಅರಿಯದೆ ಆದ ತಪ್ಪನ್ನು ಕ್ಷಮಿಸುವವ ಶಿಕ್ಷಕ.

ಅರಿವೂ ಎಂಬ ಜ್ಞಾನವನ್ನು ಬಿತ್ತಿ,  ಪೋಷಿಸುವ  ಮಾರ್ಗದರ್ಶಕ.

ಅರಿಯದೆ ಬರುವ ಅಹಂ ಎಂಬ ನೌಕೆಯನ್ನು ಕಿತ್ತೊಗೆಸಿ.

ಪ್ರತ್ಯಕ್ಷ ಮೂರ್ತಿ ಆಗುವ ಸಹಾನು ದ್ಯೋತಕ.

ಅಮ್ಮ ಅಪ್ಪ ಎಂಬ ಎರಡಕ್ಷರದ ನಡುವೆ.

ಎಣಿಕೆಗೂ ಸಿಗದಷ್ಟು ಬಂದು ಹೋಗುವ ಗುರುವೆಂಬ ನಾವಿಕ.

ಆಕಾಶದ ಅಂಚನ್ನು ತಟ್ಟುವಂತೆ  ಪ್ರೋತ್ಸಾಹ ನೀಡುವ ಉತ್ಸಾಹದ ಬಿಂಬಕ.

ಅಮ್ಮಂನಂತೆ ಆಲಂಗಿಸಿ, ಅಪ್ಪನಂತೆ ಆಶೀರ್ವದಿಸಿ ಆತ್ಮೀಯ ಮಿತ್ರರಾಗುವ

ಅಪಾರ ಜೀವೊನ್ಮದದ ಹಿಂಚಾಲಕ.

ಎಂದಿಗೂ ನಮ್ಮೊಂದಿಗಿರುವ ಗುರುವೇ.

ನಿಮಗಿದೋ ವರ್ಷಾಕೊಮ್ಮೆ ಆಚರಿಸುವ

ಶಿಕ್ಷಕರ ದಿನದ ಶುಭಾಶಯಗಳು.

💐||ಗುರುಭ್ಯೋ ನಮಃ||💐

ಭಾರ್ಗವಿ. ಜಿ.ಆರ್

ಪ್ರಥಮ ಬಿ. ಎ. ವಿದ್ಯಾರ್ಥಿನಿ

ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನನ್ನ ಕಾಲೇಜು ನನ್ನ ಹೆಮ್ಮೆ

ನನ್ನ ಕಾಲೇಜು ನನ್ನ ಹೆಮ್ಮೆ

ಈ ಕಥೆ ಶುರುವಾಗುವುದು ಒಂದು ಆನ್ಲೈನ್ ವೇಬಿನರ್ ನಲ್ಲಿ, ಒಬ್ಬ ವಿದ್ಯಾರ್ಥಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ, ಮಾನಸ ಸಂಸ್ಥೆಯ ಯಾವುದೇ ವಿಭಾಗದಲ್ಲಿ ಸಂಸ್ಥೆಯ ನಿರ್ದೇಶಕರಿಂದ ಹಿಡಿದು ಸಂಸ್ಥೆಯಲ್ಲಿ ಕಸ ಗುಡಿಸುವವರವರೆಗೂ ಮಹಿಳೆಯರ ಪ್ರಮಾಣ ಹೆಚ್ಚಿದೆ, ಕಾಲೇಜಿನ ಆಡಿಟೋರಿಯಂನಲ್ಲಿ ಯಾವುದಾದರೂ ಕಾರ್ಯಕ್ರಮ ಆಯೋಜಿಸಿದರೆ ಒಂದಷ್ಟು ಪ್ರಮಾಣದಲ್ಲಿ ಗಂಡು ಮಕ್ಕಳು ಇದ್ದರೆ ಆಡಿಟೋರಿಯಂನಾ ಮೊದಲಿನಿಂದ ಕೊನೆಯವರೆಗೂ ಹೆಣ್ಣುಮಕ್ಕಳೇ ಕುಳಿತಿರುತ್ತಾರೆ,     ಹೀಗೆ ಒಮ್ಮೆ ನನ್ನ ಬೇರೆ ಕಾಲೇಜಿನ ಸ್ನೇಹಿತ ಕೇಳಿದ “ಕೋ-ಎಜುಕೇಶನ್ ಅಂತ ಬಂದಾಗ ಯಾವುದೇ ಶಾಲಾ-ಕಾಲೇಜುಗಳಲ್ಲಿ ಹುಡುಗಿಯರಿಗಿಂತ ಹುಡುಗರ ಪ್ರಮಾಣ ಹೆಚ್ಚಿರುತ್ತದೆ, ಆದರೆ ನಿಮ್ಮ ಕಾಲೇಜಿನಲ್ಲಿ  ಯಾಕೆ ಹುಡುಗಿಯರೇ ಜಾಸ್ತಿ ಇದ್ದಾರೆ?” ಎಂದು…..

ಸ್ವಲ್ಪ ಹೊತ್ತಿನ ನಂತರ ಅವನೇ ಉತ್ತರ ಹೇಳಿದ “ಭವಿಷ್ಯಃ ಎಷ್ಟೋ ಜನ ಹೆಣ್ಣುಮಕ್ಕಳ ತಂದೆ-ತಾಯಿಯರಿಗೆ ಅನ್ನಿಸಿರಬಹುದು ನನ್ನ ಮಗಳನ್ನು ಈ ಕಾಲೇಜಿನಲ್ಲಿ ಸೇರಿಸಿದರೆ ಹೆಚ್ಚಿನ ಭದ್ರತೆ, ಸುರಕ್ಷತೆ, ಸ್ವಾಯತ್ತತೆ , ನನ್ನ ಮಗಳಿಗೆ ಸಿಗಬಹುದು ಆದ್ದರಿಂದ ಈ ಕಾಲೇಜಿಗೆ ಸೇರಿಸಲೇಬೇಕು ಎಂದು, ಅದಕ್ಕೆ ನಿಮ್ಮ ಕಾಲೇಜಿನಲ್ಲಿ ಹುಡುಗಿಯರು ಜಾಸ್ತಿ” ಎಂದು ಹೇಳಿದ.

ಬೇರೆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಮ್ಮ ಕಾಲೇಜಿನ ಬಗ್ಗೆ ಇಷ್ಟೆಲ್ಲಾ ಅರ್ಥ ಮಾಡಿಕೊಂಡಿರುವುದನ್ನು ನೋಡಿ ಖುಷಿಯಾಯಿತು ಮತ್ತು ನಾವು ಎಂತಹ ಒಳ್ಳೆಯ ಕಾಲೇಜಿನಲ್ಲಿ ಓದುತ್ತಿದ್ದೇವೆ ಎಂದು ಒಮ್ಮೆ ನೆನಪಿಗೆ ಬಂದು ಹೆಮ್ಮೆಯಾಯಿತು.

ಇದಕ್ಕಿಂತ ಒಳ್ಳೆಯ ಮಹಿಳಾ ಅಭಿವೃದ್ಧಿ ಕಾರ್ಯ ಬೇಕಾ? ಹೆಣ್ಣುಮಕ್ಕಳಿಗೆ ಹೆಚ್ಚೆಂದರೆ 2nd PUC ಓದಿಸಿ ನಂತರ ಮದುವೆ ಮಾಡಿಸಿ ಕಳುಹಿಸಿದರೆ ಆಗುತ್ತಾ? ಈ ಕಾಲೇಜಿನಲ್ಲಿ BA, BSW, BSC, MScಯಲ್ಲಿ ಸಹಿತ ಹೆಚ್ಚಿನ ಹೆಣ್ಣುಮಕ್ಕಳೇ ಇದ್ದಾರೆ, ಮಾನಸ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ವರ್ಗ ಹೆಚ್ಚಿನದಾಗಿ ಮಹಿಳಾ ಸಿಬ್ಬಂದಿ ವರ್ಗವೇ ಆಗಿದೆ, ಈ ಕಾಲೇಜಿನ “ಮಹಿಳಾ ವಿದ್ಯಾರ್ಥಿನಿಯರ ಸೈನ್ಯವೇ” ಒಮ್ಮೆ ಕೇಳಿ ಈ ಕಾಲೇಜಿನ ಮುಖಾಂತರ ನೀವೇ ಸಮಾಜಕ್ಕೆ ತೋರಿಸುತ್ತಿದ್ದೀರಿ ಮಹಿಳೆಯರಿಗೆ ಕಟ್ಟುಪಾಡುಗಳನ್ನು ಹಾಕದೆ ಅವರಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಅವರು ರಾಷ್ಟ್ರವನ್ನೇ ಅಭಿವೃದ್ಧಿ ಮಾಡುತ್ತಾರೆ ಎಂದು…….. ವಿವೇಕಾನಂದರು ಸಹ ಇದನ್ನೇ ಹೇಳಿದ್ದು “ಮಹಿಳೆಯರನ್ನು ಉದ್ದಾರ ಮಾಡಲು ನೀನ್ಯಾರು? ಮಹಿಳೆಯರಿಗೆ ಯಾವುದೇ ಕಟ್ಟುಪಾಡನ್ನು ಹಾಕದೆ ಸುಮ್ಮನೆ ಬಿಟ್ಟರೆ ಅವರು ತಾನೇತಾನಾಗಿ ಅಭಿವೃದ್ಧಿಹೊಂದಿ ಮುಂದೆ ರಾಷ್ಟ್ರವನ್ನು ಸಹ ಮುನ್ನಡೆಸುತ್ತಾರೆ” ಎಂದು, ಈ ನುಡಿಗಳನ್ನು ನಾವು ಕೇಳಿದ್ದೆವು, ಈಗ ನೋಡುತ್ತಿದ್ದೇವೆ……..

ಕೊನೆಯದಾಗಿ ಒಂದು ಮಾತು ಭೂಮಿತಾಯಿ ಹೆಣ್ಣು, ಭಾರತಮಾತೆ ಹೆಣ್ಣು, ಕರ್ನಾಟಕ ಮಾತೆ ಹೆಣ್ಣು, ನಮ್ಮ ತಾಯಿ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಮಗಳು, ಎಲ್ಲರೂ ಹೆಣ್ಣೆ, ಹೆಣ್ಣಿಲ್ಲದೆ ಗಂಡಿಲ್ಲ, ಗಂಡಿಲ್ಲದೇ ಹೆಣ್ಣಿಲ್ಲ ಇದು ಪ್ರಕೃತಿ ನಿಯಮ. ಮಹಿಳಾ ದಿನಾಚರಣೆಯ ದಿನ ಒಂದು ದಿನದ ಮಟ್ಟಿಗೆ ಮಹಿಳೆಯರೆಲ್ಲ ಶುಭಾಶಯವನ್ನು ಹೇಳಿಕೊಂಡರೆ ಅದು ಮಹಿಳಾ ದಿನಾಚರಣೆಯಲ್ಲಾ…….

ಇಡೀ ವರ್ಷಪೂರ್ತಿ ಪುರುಷರೆಲ್ಲ ಮಹಿಳೆಯರನ್ನು ಗೌರವದಿಂದ ಕಂಡರೆ ಅದು ನಿಜವಾದ ಮಹಿಳಾ ದಿನಾಚರಣೆ, ಹೆಣ್ಣು ಮನಸ್ಸು ಮಾಡಿದರೆ ದುರ್ಗೆಯಂತೆ, ಕಾಳಿಯಂತೆ ಮೈ ಕೊಡವಿ ನಿಂತು ತನ್ನನ್ನು ರಕ್ಷಿಸಿಕೊಳ್ಳುತ್ತಾ ಇತರರನ್ನು ರಕ್ಷಿಸುತ್ತಾಳೆ, ಹೆಣ್ಣನ್ನು ರಕ್ಷಿಸುವುದಲ್ಲಾ ಗೌರವಿಸೋಣ…… ಅವಳಿಗೆ ತನ್ನನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸುವುದು ಗೊತ್ತಿದೆ……..

ಮಹಿಳೆಯರ ಅಭಿವೃದ್ಧಿಯು ಸಮಾಜಕ್ಕೆ ಕಾಣುವಂತೆ ಮಾಡುತ್ತಿರುವ ಮಾನಸ ಸಂಸ್ಥೆಯ ನಿರ್ದೇಶಕರಿಗೂ, ನಮ್ಮ ಕಾಲೇಜಿನ ಪ್ರಾಂಶುಪಾಲರಿಗೂ, ಕಾಲೇಜಿನ ಶಿಕ್ಷಕ ವೃಂದಕ್ಕೂ ಮತ್ತು ನಮ್ಮ ಕಾಲೇಜಿನ ಮಹಿಳಾ ಸೈನ್ಯಕ್ಕೂ, ಪುರುಷ ವಿದ್ಯಾರ್ಥಿಗಳಿಗೂ ಎಲ್ಲರಿಗೂ ಶತಶತ ನಮನಗಳು………


ನಾಗೇಂದ್ರ,

ಪ್ರಥಮ ವರ್ಷದ ಸಮಾಜಕಾರ್ಯ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ,

ಯುಗಾದಿ ಎಂಬ ಹರುಷ 🌅

Image Credit: google.com

ಯುಗಾದಿ ಎಂಬ ಹರುಷ 🌅

     ತುಂಬಾ ದಿನದಿಂದ ಕಾಯ್ತಾ ಇದ್ದೆ. ಎಂತಕ್ ಅಂತನಾ? ನಮ್ ಹೊಸ ವರ್ಷ ಯಾವಾಗ್ ಬರತ್ತೋ ಅಂತ ಅಂದ್ರೆ ನಮ್ ಸಂತಸದ ಹಬ್ಬ ಅದೇ ಯುಗಾದಿ 💫.

     ಯುಗಾದಿ ಅಂದ್ರೆ ಖುಷಿ, ಎಲ್ಲಿಲ್ಲದ ಉತ್ಸಾಹ. ಹಾಗಾದ್ರೆ ಏನಕ್ಕೆ ಇಷ್ಟೊಂದು ಆತುರದಿಂದ ನಾನ್ ಈ ಹಬ್ಬಕ್ಕೆ ಕಾಯ್ತಿರದು ಅಂತನಾ? ಹೌದು “ಹಳೆ ನೆನಪುಗಳೊಂದಿಗೆ ಹೊಸ ಯುಗಾದಿ, ಹೊಸ ಯುಗಾದಿಯಲ್ಲಿ ನವ ನೆನಪನ್ನ ಮೂಡಿಸೋಣ ಅಂತ”.ಸಣ್ಣವರಿದ್ದಾಗ ಅಜ್ಜ ಅಜ್ಜಿ, ಆ ಹಳ್ಳಿ, ಹಳ್ಳಿಯ ಸ್ನೇಹಿತರು, ಏನೆಲ್ಲಾ ತರ್ಲೆ, ತುಂಟಾಟ, ಕಿತ್ತಾಟ, ಅಬ್ಬಬ್ಬಾ! ಹಂಗೆ ಸರ್ಯಾಗ್ ಹಬ್ಬದ್ ನಮ್ ಗಲಾಟೆ ಪ್ರಯುಕ್ತ ನಮ್ಮೆಲ್ಲರಿಗೂ ಬಿಸಿಬಿಸಿ ಕಜ್ಜಾಯ, ಕಡುಬು ಕೂಡ ಸಿಕ್ತಿತ್ತು.      

ಅದೇ ಈಗ ನಾವೆಲ್ಲ ಕಾಲೇಜ್ ಸ್ಟೂಡೆಂಟ್ಸ್ ಅಲ್ವಾ? ಅಪ್ಪ ಅಮ್ಮ ಬೈದ್ರೆ, ಬುದ್ದಿ ಹೇಳಿದ್ರೆ ನಾವೇನ್ ಮಕ್ಳ? ಅಂತ ಕೂಗಾಡೋ ನಾವು ಹಬ್ದಲ್ಲಿ ಹಳೆ ನೆನಪಲ್ಲಿ ಸಣ್ಣವ್ರಾಗ್ಬಿಡ್ತಿವಿ. ಹಬ್ಬಗಳಲ್ಲಿ ಮೊದಲ್ನೆ ಹಬ್ಬನೇ ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಗೊತ್ತಲ್ವಾ? ಬೇಸಿಗೆ ಕಾಲ ಕತ್ತಲೆಗೆ ಅವಕಾಶನೇ ಇಲ್ಲ. ಅದೇ ಕಂಡ್ರೀ ನಮ್ ಯುಗಾದಿ special.

ಅಷ್ಟಲ್ದೆ ನಮ್ ದ. ರಾ. ಬೇಂದ್ರೆ ಅವ್ರು ಹೇಳ್ತಾರಾ?

“ಯುಗಾ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ. 💕

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ”. 💫

ಅಬ್ಬಾ!! ಅಂತೂ ಯುಗಾದಿ ಬಂದೇ ಬಿಡ್ತು.. ಹೊಸ ಭರವಸೆಗಳನ್ನ ಹೊತ್ತು ತರ್ತಾ ಇದೆ. ಹಿಂದೆಲ್ಲಾ ಅಜ್ಜ ಅಜ್ಜಿ ಮುಂಜಾನೆ ನೇ ಎದ್ದೇಳಿ ಅಂತ ಬಂದ್ರೆ ಮತ್ತೆ bed sheet ಮುಚ್ ಹಕೊಂಡ್ ಮಲ್ಗ್ ತಿದ್ವಿ.. ಆದ್ರೂ ಎಬ್ಸಿ ಒಳ್ಳೆ ಎಣ್ಣೆ ಸ್ನಾನ ಮಾಡ್ಸಿ ಹೊಸ ಬಟ್ಟೆ ಅದು ಅಜ್ಜಿ ಸೀರೆಲಿ ಹೊಲ್ಸಿದ್ ಎಂತ ಕುಷಿ ನೆನಪಾದರೆ..ಆಮೇಲೆ ದೇವಸ್ಥಾನ ಹೋಗಿ ವಾವ್!! ಅದೆಲ್ಲ ಈಗ ಬರೀ ನೆನಪಾಗಿ ಇದೆ ಅಷ್ಟೇ😕.. ಈಗ ನಾವೇ ಎದ್ದು ಸ್ನಾನ ಮಾಡಿ ಒಟ್ರಾಶಿ ತಲೆ ಬಾಚ್ಕೊಂಡ್, ಬೇವು ಬೆಲ್ಲ ತಯಾರಿಸಿ, ದೇವಸ್ಥಾನ ಹೋಗ್ ಬಂದು , ಎಲ್ಲರ್ಗು ಬೇವು ಬೆಲ್ಲ ಕೊಟ್ಟು”ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ”ಅನ್ನದು.. ಹಾಗಾದ್ರೆ ಬೇವು ಬೆಲ್ಲದ ಮೂಲಕ ಈ ಜೀವನದಲ್ಲಿ ಬೇವಿನ್ ತರ ಕಹಿ ಘಟನೆಗಳು, ಕಷ್ಟಗಳು ಇದ್ದೆ ಇರುತ್ತೆ, ಅಷ್ಟಕ್ಕೇ ಬೇಜಾರ 😁 ಅದ್ರು ಜೊತೇನೆ ಬೆಲ್ಲದ ತರ ಖುಷಿ, ನೆಮ್ಮದಿ, ಸುಖ, ಸಿಹಿ ನೆನಪುಗಳು ಇರ್ತಾವೆ ಅಲ್ವಾ 😁 ನಗ್ರಿ ಹಾಗಾದ್ರೆ ನಗ್ತಾ ಇರಿ… ಕಷ್ಟ ಬಂದಾಗ ಕುಗ್ದೆ ಸುಖ ಬಂದಾಗ ಹಿಗ್ದೆ ಕಷ್ಟ, ಸುಖ ಎರಡನ್ನೂ balance ಮಾಡ್ತಾ ನಗ್ತಾ ಇರಿ ನಗುಸ್ತ ಇರಿ 🪄.

ಒಹ್ ದೇವಸ್ಥಾನ ಇಂದ ಬಂದ್ದ್ಮೆಲ್ ಏನ್ ಮಾಡದು ಹೇಳಿಲ್ಲ ಅಲ್ವಾ? ಇದೆ ಅಲ್ವಾ snap, photos, ಅಯ್ಯೋ insta reels ಮಾಡಿ ಯುಗಾದಿ ನ ಧಾಮ್ ಧೂಮ್ ಅಂತ celebreate ಮಾಡಣ..

ಹೊಸ ವರ್ಷದ ಪ್ರಯುಕ್ತ ನಿಮ್ಮೆಲ್ಲಾ “ಹಳೆಯ ಕಹಿ ನೆನಪು , ತಪ್ಪು ತಿಳುವಳಿಕೆ, ನೋವು, ಕೋಪ, ಪಶ್ಚಾತಾಪ, ಭಯ, ತಿರಸ್ಕಾರ, ಸೋಲು, ಶತ್ರುತ್ವ, ತಪ್ಪುಗಳು, negative feelings, ಇದೆಲ್ಲ account ನ close ಮಾಡಿ “ಪ್ರೀತಿ, ನಂಬಿಕೆ, ಸಾಧನೆ, positive attitude, ಖುಷಿ ಎಂಬ account ನ open ಮಾಡಿ..

” ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.🪄. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಹಳೆಯ ಕಹಿ ನೆನಪನ್ನ ಮರ್ತು ಖುಷಿಯಾಗಿರಿ”. ♥️.. ನಗ್ತಾ ಇರಿ ನಗುಸ್ತಾ ಇರಿ 🪄..

ಮಧುಶ್ರಿ,

ದ್ವೀತಿಯ ಬಿ ಎ ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

National Science Day: February 28th, 2022

Image Credit: Shutterstock

National Science Day: February 28th, 2022

The National Science Day is celebrated on 28th February each year in India to spread the message about the importance of science in the daily life of the people. On this day (28th February, 1928) Sir C V Raman had announced the discovery of the “Raman Effect” for which he was awarded the Nobel Prize in 1930. The government of India designated 28th February as National Science Day (NSD) in 1986.

Science pushes us to our limits. Everything in our environment is based on science. The National Science Day is for those who believe in science, scientists, the next generation of scientists and technologists, and those who are fascinated by scientific discoveries.

National Science Day 2022: Theme 

Every year, National Science Day is celebrated under various themes, and this year’s National Science Day 2022 is “Integrated Approach in Science and Technology for Sustainable Future.”

Each year, the themes for such day are varied, highlighting a particular aspect of the nation’s society. The themes are intended to recognize the contributions of common people, students, employees, popular officials, and representatives from a major scientific institution.

The History of National Science Day

Sir CV Raman was quite popular even during his learning days, as he used to excel at school and university. He has made some remarkable contributions to acoustics and optics. Raman was the first person who was appointed as the Palit Professor of Physics at the Rajabazar Science College in 1917.

During his trip to Europe in 1921, Raman became attract after seeing the blue colour of the Mediterranean Sea, which led him to conduct various experiments with transparent surfaces, ice blocks, and light. Raman then noted a change in wavelength after light passed through ice cubes. Soon after, he announced his discovery to the world, and a new phenomenon was born. Raman’s work was published, and it became quite impactful in the world of science.

In 1948, He left the IIS and founded the Raman Research Institute in Bangalore the next year. He was the organizations’ director, and stayed involved till his demise in 1970 at the age of 82.

Sir CV Raman is still remembered for his remarkable discovery of The Raman Effect and has many buildings, streets, layouts, schools, museums, educational clubs and many more named after him. 

The National Council for Science and Technology Communication (NCSTC) convinced the Indian government to designate the 28th of February every year as National Science Day from 1986. This event is celebrated throughout India at schools, colleges, institutions, and other academic, medical, technical, medicinal, and research institutions.

On the first National Science Day (February 28th, 1987), the NCSTC revealed the creation of the National Science Popularization Prizes to honour outstanding accomplishments in science and technology.

Edited: KAPMI LIBRARY

Kateel Ashok Pai Memorial College, Shivamogga