ವಿಶ್ವ ಸಾಹಿತ್ಯದ ಪರಿಚಯ – ಒಂದು ವಿಶೇಷ ಕಾರ್ಯಗಾರ

ಸಾಹಿತ್ಯದ ಓದು ಮತ್ತು ಚರ್ಚೆ ಮಾನವ ತನ್ನನ್ನು ಹಾಗೂ ತನ್ನ ಸಮಾಜವನ್ನು ಆತ್ಮಾವಲೋಕನಕ್ಕೊಳಪಡಿಸಲು ಸಹಾಯಮಾಡುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ “ವಿಶ್ವ ಸಾಹಿತ್ಯದ ಪರಿಚಯ” ಎಂಬ ವಿಷಯದ ಮೇಲಿನ ಕಾರ್ಯಾಗಾರ ನಮ್ಮ ಸಮಾಜವನ್ನು ಮತ್ತಷ್ಟು ಅರಿತುಕೊಳ್ಳಲು ಸಹಾಯ ಮಾಡಿತು. ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಜಗತ್ತಿನ ಶ್ರೇಷ್ಠ ಬರಹಗಾರರು ಹಾಗೂ ಕೃತಿಗಳನ್ನು ಪರಿಚಯ ಮಾಡುವ ಮೂಲಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿದರು.

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಶ್ರೀ ಸೋಮನಹಳ್ಳಿ ದಿವಾಕರ್ ರವರು ಪಾಕಿಸ್ತಾನದ ಪ್ರಖ್ಯಾತ ಲೇಖಕ ಸಾಧತ್ ಹಸನ್ ಮಂಟೋರವರ ಜೀವನ ಹಾಗೂ ಕೃತಿಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮಂಟೋರವರ “ಕೋಲ್ ದೋ” ಹಾಗೂ “ಟೋಬಾ ಟೇಕ್ ಸಿಂಗ್” ಕೃತಿಗಳಲ್ಲಿ ಭಾರತ ಪಾಕಿಸ್ತಾನ ವಿಭಜನೆಯ ಸಂದರ್ಭದ ಮಕ್ಕಳು, ಮಹಿಳೆಯರು ಹಾಗೂ ಅನ್ಯಕೋಮಿನವರ ಮೇಲಾದ ದೌರ್ಜನ್ಯದ ವಿವರಣೆಯಂತೂ ಅವರು ವಿವರಿಸುವಾಗ ನಮ್ಮನ್ನು ದಿಗ್ಬ್ರಮೆಗೊಳಿಸಿತು. ಇನ್ನು ದಿವಾಕರ್ ಸರ್ ಅವರು ಪೋಲ್ಯಾಂಡಿನ ಲೇಖಕ ಹಾಗೂ ಪತ್ರಕರ್ತ ಟಡಾಯಿಸ್ ಬೋರೋಸ್ಕಿ ಅವರ “ದಿಸ್ ವೇ ಫಾರ್ ಗ್ಯಾಸ್ ಲೇಡೀಸ್ ಅಂಡ್ ಜೆಂಟಲ್ ಮೆನ್” ಕೃತಿಯನ್ನು ಪರಿಚಯಿಸುತ್ತಾ ಜರ್ಮನಿಯಲ್ಲಿ ಹಿಟ್ಲರ್ ನ ಕಾಲದಲ್ಲಿ ಯಹೂದ್ಯರ ಮೇಲಾದ ಆಕ್ರಮಣದ (ಹಾಲೋ ಕಾಸ್ಟ್) ವಿವರಣೆ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸಿತು.

ಮತ್ತೊಬ್ಬ ಖ್ಯಾತ ಲೇಖಕ ಹಾಗೂ ಅನುವಾದಕರಾದ ಡಾ.ಮಾಧವ ಚಿಪ್ಪಲ್ಲಿ ಅವರು ರಷ್ಯಾದ ರಾಜಪ್ರಭುತ್ವ ಮತ್ತು ಸಮಾಜದ ವಿವರಣೆಯನ್ನು ನೀಡುತ್ತಾ, ರಾಜಮನೆತನಕ್ಕೆ ಸೇರಿದ್ದರೂ ದಿವಾಳಿತನವನ್ನು ಅನುಭವಿಸಿ ನಂತರ ತನ್ನ ಬರಹಗಳ ಮೂಲಕ ಬಡತನವನ್ನು ಗೆದ್ದ ರಷ್ಯಾದ ಖ್ಯಾತ ಲೇಖಕ ಲಿಯೋ ಟಾಲ್ ಸ್ಟಾಯ್ ಜೀವನವನ್ನು ಪರಿಚಯಿಸಿದರು. ಟಾಲ್ ಸ್ಟಾಯ್ ಅವರ ಗಮನಾರ್ಹ ಕೃತಿಗಳಾದ “ವಾರ್ ಅಂಡ್ ಪೀಸ್”, “ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್” ಬಗೆಗಿನ ವಿವರಣೆ ರಾಜ್ಯಾಡಳಿತದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಒದಗಿಸಿತು.

ಸ್ತ್ರೀವಾದಿ ಲೇಖಕಿ ಶ್ರೀಮತಿ ಜಯಶ್ರೀ ಕಾಸರವಳ್ಳಿ ಅವರು ಜೆಂಡರ್ ಸ್ಟಡೀಸ್ ಅಧ್ಯಯನ ಮಾಡುವ ವಿಧಾನವನ್ನು ವಿವರಿಸುತ್ತಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಹೇಗೆ ದಬ್ಬಾಳಿಕೆಯ ಸಾಧನವಾಗಿದ್ದಾಳೆ ಎಂಬುದನ್ನು ಜಾನ್ ಹೂಸ್ಟನ್ ಅವರ “ರಿಫ್ಲೆಕ್ಷನ್ ಇನ್ ಎ ಗೋಲ್ಡನ್ ಐ” ಮತ್ತು ತೆಹೆಮಿನ ದುರೈನಿ ಅವರ “ಮೈ ಫ್ಯೂಡಲ್ ಲಾರ್ಡ್” ಕೃತಿಗಳ ಮೂಲಕ ವಿವರಿಸಿದರು.

ಶಿವಮೊಗ್ಗದ ಲೇಖಕ, ವಿಮರ್ಶಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಟಿ.ಪಿ.ಅಶೋಕ್ ಯುರೋಪಿನ ಹೆಸರಾಂತ ಬರಹಗಾರರಾದ ಫ್ರಾನ್ಸ್ ಕಾಫ್ಕ ಹಾಗೂ ಆಲ್ಬರ್ಟ್ ಕಮು ಅವರ “ದ ಟ್ರಯಲ್”, “ದ ಕ್ಯಾಸೆಲ್”, “ದಿ ಮೆಟಾಮಾರ್ಫಸಿಸ್” ಹಾಗೂ “ದಿ ಕಲಿಗುಲಾ” ಕೃತಿಗಳನ್ನು ವಿವರಿಸುತ್ತಾ ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಾಹಿತ್ಯ ಜಗತ್ತಿನ ಆಳ ಅಗಲವನ್ನು ಅರಿಯಲು ಕನಿಷ್ಠ ಎರಡು ಭಾಷೆಗಳ ಸಾಹಿತ್ಯ ಪರಿಚಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಕನ್ನಡದ ಮತೋರ್ವ ವಿಮರ್ಶಕ, ಲೇಖಕ ಡಾ.ರಾಜೇಂದ್ರ ಚೆನ್ನಿ ಅವರು ಪ್ರಸ್ತುತ ಸನ್ನಿವೇಶದಲ್ಲಿ ಸಾಹಿತ್ಯ ಮತ್ತು ಅದರ ಪ್ರಾಮುಖ್ಯತೆಯ ಸಂಕ್ಷಿಪ್ತ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಒಟ್ಟಿನಲ್ಲಿ ವಿಶ್ವ ಸಾಹಿತ್ಯದ ಪರಿಚಯ ಕಾರ್ಯಗಾರವನ್ನು ಬೇರೆ ಬೇರೆ ಕಾಲೇಜುಗಳ ಸಾಹಿತ್ಯದ ವಿದ್ಯಾರ್ಥಿಗಳನ್ನು ಸಹ ಒಳಗೂಡಿಸಿಕೊಂಡು ಹಲವು ಸಾಹಿತ್ಯದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನೆರವೇರಿಸಿದ್ದು ಬಹಳ ಉಪಯುಕ್ತವಾಯಿತು. ಇದರಿಂದ ನಮ್ಮ ಮುಂದಿನ ಸಾಹಿತ್ಯದ ಓದಿಗೆ ಹೆಚ್ಚಿನ ಸಹಕಾರ ದೊರೆತಂತಾಯಿತು. ಹೀಗೆ ಶಿವಮೊಗ್ಗದ ಸಾಹಿತ್ಯ ವಿಭಾಗ ಹೊಂದಿರುವ ಎಲ್ಲಾ ಕಾಲೇಜುಗಳು ಇದೇ ರೀತಿ ಹಲವು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡುತ್ತಿರಲಿ, ಮತ್ತೆ ಮತ್ತೆ ಸಾಹಿತ್ಯದ ಕಾರ್ಯಕ್ರಮಗಳನ್ನು ಆಸ್ವಾದಿಸಲು ನಾವೆಲ್ಲರೂ ಒಟ್ಟಿಗೆ ಸೇರೋಣ ಎಂದು ಆಶಿಸುತ್ತೇವೆ.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದಿಂದ ಆಯೋಜಿಸಲ್ಪಟ್ಟ ವಿಶ್ವಸಾಹಿತ್ಯದ ಪರಿಚಯ ಎಂಬ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಬರೆದ ಲೇಖನ.

ಸಹನ & ವಿಸ್ಮಯ

ದ್ವಿತೀಯ ಬಿ ಎ (ಸಾಹಿತ್ಯದ ವಿದ್ಯಾರ್ಥಿನಿಯರು)

ಕಮಲ ನೆಹರು ರಾಷ್ಟ್ರೀಯ ಸ್ಮಾರಕ ಮಹಿಳಾ ಕಾಲೇಜು, ಶಿವಮೊಗ್ಗ.

 

ಪುಸ್ತಕ ವಿಮರ್ಶೆ

ಕಾಲೇಜಿನಲ್ಲಿ ಗ್ರಂಥಾಲಯ ಇದ್ದರೂ, ಹೊರಗಡೆ ಪುಸ್ತಕ ಕೊಂಡುಕೊಂಡು ಓದುವುದು ನನ್ನ ರೂಢಿ.. ಹಾಗಾಗಿ ಏನಾದರೂ ಕೆಲಸವಿದ್ದರೆ ಮಾತ್ರ ಕಾಲೇಜು ಗ್ರಂಥಾಲಯದ ಕಡೆಗೆ ಪಯಣ.. ಹೀಗೆ ಮೊನ್ನೆ ಕಾಲೇಜು ಲೈಬ್ರರಿಗೆ ಭೇಟಿ ನೀಡಿದ್ದೆ, ಗಣೇಶ್ ಸರ್ ಯಾವುದೋ ಪುಸ್ತಕ ಹುಡುಕುವುದರಲ್ಲಿ ನಿರತರಾಗಿದ್ದರು.. ಯಾಕೋ ಗಂಭೀರವಾಗಿರುವಂತೆ ಕಂಡರು.. ಹೇಗೆ ಕೇಳುವುದು ತಿಳಿಯದೇ ಅಳುಕುತ್ತಲೇ, ಸರ್, ಇಲ್ಲಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅಷ್ಟೇನಾ ಅಥವಾ ಉಪನ್ಯಾಸಕರೂ ಓದಬಹುದಾ ? ಎಂದು ಕೇಳಿದೆ.. ತಕ್ಷಣಕ್ಕೆ ಉತ್ತರಿಸಿದ ಅವರು ಗ್ರಂಥಾಲಯ ಇರುವುದೇ ಓದುವವರಿಗಾಗಿ ಮೇಡಂ ಎಂದರು…

ಹಾಗೆಯೇ, ಕನ್ನಡ ಪುಸ್ತಕಗಳಿರುವ ವಿಭಾಗದಲ್ಲಿ ಪುಸ್ತಕಗಳನ್ನ ಹುಡುಕುವಾಗ ನನ್ನ ಕೈ ಗೆ ಸಿಕ್ಕಿದ್ದು, ಧಾರವಾಡದ ಪಡ್ಡೆ ದಿನಗಳು ಪುಸ್ತಕ.. ಈ ಪುಸ್ತಕವನ್ನು ಬರೆದವರು ಖ್ಯಾತ ವಿಮರ್ಶಕರು, ಕಥೆಗಾರರು,ಲೇಖಕರಾಗಿರುವ ರಾಜೇಂದ್ರ ಚೆನ್ನಿ… ಅವರನ್ನು ಪ್ರತಿದಿನವೂ ಹತ್ತಿರದಿಂದ ನೋಡುವುದರಿಂದ ಅವರ ಪುಸ್ತಕವನ್ನು ಒಮ್ಮೆ ಓದಬೇಕೆನಿಸಿತು. ಆ ಪುಸ್ತಕವನ್ನು ತೆಗೆದುಕೊಂಡು ಲೈಬ್ರರಿಯಿಂದ ಹೊರನಡೆದೆ.

ಲೇಖಕರು ಈ ಪುಸ್ತಕದಲ್ಲಿ ಕಾಲೇಜು ದಿನಗಳಲ್ಲಿದ್ದಾಗ ಅನುಭವಿಸಿದ ಪಡ್ಡೆ ದಿನಗಳನ್ನು 11 ಅಧ್ಯಾಯಗಳಲ್ಲಿ ಬರೆದಿದ್ದಾರೆ. ಪುಸ್ತಕದ ಪ್ರತೀ ಅಧ್ಯಾಯವೂ ಕೂಡ ವಿಭಿನ್ನವಾಗಿದೆ. ನಟಿ ಹೇಮಾ ಮಾಲಿನಿಯವರು ಗಿರೀಶ್ ಕಾರ್ನಾಡ್ ಅವರನ್ನ ಮದುವೆ ಆಗ್ತಾರೆ. ಅವರು ಧಾರವಾಡದ ಸೊಸೆಯಾಗ್ತಾರೆ ಎನ್ನುವ ಸುದ್ದಿಯನ್ನ ಪೇಪರ್ ನಲ್ಲಿ ಓದಿ, ಕುತೂಹಲದಿಂದ ಆ ದಿನಕ್ಕಾಗಿ ಕಾಯುವ ಸ್ನೇಹಿತರ ಬಳಗದ ಕುರಿತು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.

ಆಮೇಲಿನ ಅಧ್ಯಾಯಗಳಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದಿದ್ದಾರೆ. ಆಗೆಲ್ಲಾ ಕಾಲೇಜು ಚುನಾವಣೆಗಳಿಗೆ ಎಷ್ಟೊಂದು ಮಹತ್ವ ಇತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ.

ಒಮ್ಮೆ ಅವರ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಿರುವುದಿಲ್ಲ. ಆಮೇಲೆ ಲಂಕೇಶರ ಪ್ರಸ್ತಾಪವನ್ನು ಕೇಳಲಾಗಲಿಲ್ಲವೆಂದು ತಮ್ಮ ಅದೃಷ್ಟವನ್ನು ಶಪಿಸಿಕೊಳ್ಳುವ ಪ್ರಸಂಗವನ್ನು ಇಲ್ಲಿ ಕಾಣಬಹುದಾಗಿದೆ.

ಇನ್ನೊಂದು ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಇರುತ್ತಿದ್ದ, ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎನ್ನುವುದನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸಿದ್ದಾರೆ.

ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ವಿದೇಶಿ ಡಾಕ್ಟರ್ ಹಾಗೂ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಸುಂದರ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು, ಅವಳಿಗೆ ಪ್ರೇಮ ಪ್ರಸ್ತಾಪ ಮಾಡಿದ ಸನ್ನಿವೇಶವನ್ನು ಅಚ್ಚು ಕಟ್ಟಾಗಿ ಹಾಸ್ಯದೊಂದಿಗೆ ಬರೆಯಲಾಗಿದೆ.

“ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ಬೇಸರದೊಂದಿಗೆ ಈ ಪುಸ್ತಕ ಮುಗಿಯುತ್ತದೆ.  ಹಾಗೆ ನೋಡಿದರೆ, ರಾಜೇಂದ್ರ ಚೆನ್ನಿಯವರು ಗಂಭೀರ ಚಿಂತಕರು…. ಹೀಗಿರುವಾಗ ತಾವು ಕಾಲೇಜು ದಿನಗಳಲ್ಲಿದ್ದಾಗ ಪಡ್ಡೆ ಹುಡುಗರಾಗಿದ್ದರು ಎನ್ನುವುದರ ಕೈ ಗನ್ನಡಿಯಾಗಿ, ತೆರೆದ ಪುಸ್ತಕದಂತೆ ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿರುವುದು ವಿಶೇಷ.

ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವಂತಹ ಪುಸ್ತಕ ಇದಾಗಿದೆ. ಹೆಚ್ಚು ಗಾಂಭೀರ್ಯತೆಯನ್ನು ಹೊಂದದ, ಲಘು ಹಾಸ್ಯ, ಹಾಗೂ ಸರಾಗವಾಗಿ ಓದಿಸಿಕೊಳ್ಳುವ ಒಳ್ಳೆಯ ಪುಟ್ಟ ಪುಸ್ತಕ ಇದಾಗಿದೆ.. ಸಾಧ್ಯವಾದರೆ ಒಮ್ಮೆ ಈ ಪುಸ್ತಕ ಓದಿ…

ಅಂಜುಮ್ ಬಿ.ಎಸ್.

ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Ooru (ಊರು)

Ooru (ಊರು)

     Ooru, a short realistic fiction directed by Manjunath Jambe. ಊರು , village is not just a settlement of people living in community or it is just a group of houses. Villagers not only have bondage with one another but also with everything around them. So, they feel, they belongs to that place not the other way around the place belongs to them. If this sense of belonging vanishes, it leads to catastrophe. There is a tendency in village youth to abandon the village in search of luxury in cities. This is the subject of the movie Ooru.

Story: Shivram Hegde, though well educated, got a job offer in Mumbai has decided to stay in his village and received reasonable respect from villagers. He is worried about youngsters leaving villages in search of luxurious life in city. He regrets that the youngsters fail to understand that “rice can’t be born in factories and can’t get bananas out of computers”. But he has unflinching hope that his son Ravi will never abandon the village. However,  Ravi gets an job offer from MNC in Bengaluru, it is a wish of every youngster to put his knowledge into practice. Ravi is no different. He compares, life in village to life of frog in a well. So he decides to leave for Bengaluru against his father’s wish.

      In Bengaluru, Ravi lives a comfortable, luxurious life, he get married and later a son. He never bothers to visit his parents, once his son Adi, watching a discussion on farmer’s on TV, suddenly feels like visiting his grandparents.  The labourer Rudra takes him around the village and gives a commentary on the state of affair, How their farm has given place to a factory, how people have left village in search of jobs. Adi realizes it is nothing like his father has described.  He felt his father wronged his parents then Adi decides to……

What does he decide?

How does Ravi feel about his son’s decision?

Or is it just Ravi’s dream ending in Nightmare? The movie will answer.

Review: The village itself is the protagonist of the story. The characters are participants and witnesses for the changes taking place in the village. Purushottam Thalavata‘s acting gives meaning to the silence to the character Shivram hegde. The actor who played the role Rudra had given justice to the character. All other characters may have failed to be surreal.

      Dialogue in this movie are like punctuations in a long sentence of silence.  Even silence communicates what it can. Dialogues like “How can I sacrifice tender coconut water here, for mud water in the city” is not just Shivram hegde’s word but an explanation for the contrast between village and city. Thanks to the dialogue writer Chandan shankar.

      The opening song by Ananya bhat “It has been long since we forgot our town” which expresses the regret. The Cinematography has succeeded in capturing lush green beauty of villages. Contribution of other technicians cannot be ignored.

         In these days of exodus of youth from village to city,  deserted village, cramped cities, soring prices, farmer’s suicide, where is to find the solace and peace? Where is the solution? The movie may have an answer.

Critics rating: 4/5

Movie link:  https://youtu.be/o0QKlJzvqP0

Reviewed by:

Radhika S Joshi

2nd year BA,

Kateel Ashok Pai Memorial College, Shivamogga

ಮಗುವಾಗು ಮನವೇ………!

Image Credit: Google.com

ಪ್ರೀತಿಯ ಓದುಗರೇ,

ಕನ್ನಡ ಚಿತ್ರರಂಗದ ಮೇರುರತ್ನಗಳಲ್ಲೊಬ್ಬರಾದ ಡಾ. ಅಶೋಕ್ ಪೈ ರವರ ಸುವರ್ಣಹಸ್ತದಿಂದ ವಿರಚಿತ ಕಥಾಸಂಕಲನಗಳಲ್ಲಿ ಒಂದಾದ ಸುರೇಶ್ ಹೆಬ್ಳೀಕರ್ ನಿರ್ದೇಶಿಸಿದ ಕನ್ನಡದ ಅದ್ಭುತ ಮನೋವೈಜ್ಞಾನಿಕ ಉಪನ್ಯಾಸ ನಾಟಕ “ಪ್ರಥಮ ಉಷಾಕಿರಣ”. ಪ್ರಸ್ತುತ ಚಲನಚಿತ್ರವು ಮಕ್ಕಳ ಮಾನಸಿಕ ಬದಲಾವಣೆಯನ್ನು ಪ್ರಥಮ ಆದ್ಯತೆಯನ್ನಾಗಿಸಿಕೊಂಡು ವೈಶಿಷ್ಟ್ಯವಾಗಿ ಚಿತ್ರೀಕರಿಸಿದ್ದಾರೆ. ಪ್ರಸ್ತುತ ಸಿನಿನಾಟಕದಲ್ಲಿ ವಿದೇಶಿ ಸಂಸ್ಕøತಿಯ ಸಂಸ್ಕಾರಗಳಿಂದ ಬದಲಾದ ಒಬ್ಬ ತಂದೆಯ ಶಿಸ್ತು ಮತ್ತು ಅನೌಪಚಾರಿಕ ನಡತೆಗಳಿಂದ ಕಂಗೆಟ್ಟ ಆತನ ಇಬ್ಬರು ಮಕ್ಕಳ ಮೇಲಾದ ಮಾನಸಿಕ ದುರಾವಸ್ಥೆ ಶೋಷಣೆಯ ಪರಿಣಾಮವನ್ನು ಚಿತ್ರದ ಕೈಗನ್ನಡಿಯನ್ನಾಗಿ ರೂಪಿಸಿದ್ದಾರೆ.

ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳಗತಿ ಅಧೋಗತಿ! ಏಕೆಂದರೆ ಸ್ವಲ್ಪವೂ ಹೊರಕೌಶಲ್ಯಗಳಲ್ಲಿ ತೊಡಗಿಕೊಳ್ಳದೆ ಶೈಕ್ಷಣಿಕ ಒತ್ತಡಕ್ಕೆ ಮಣಿದು ಬೆಟ್ಟವನ್ನು ತಲೆಯ ಮೇಲೆ ಹೊತ್ತಂತೆ ಕಾಣುವುದು ಅವರ ಮುಖ! ನಗರಗಳಲ್ಲಿ ಚಿಕ್ಕ ಮಗುವಿಗೆ ಕುಡಿಯುವ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ಆ ಮುಗ್ಧ ಮಗು ಗಾಡಿಯಲ್ಲಿ ಬರುತ್ತದೆ ಎಂದು ಹೇಳಿದಾಗ ಉಂಟಾಗುವ ನಗು ಹಾಗೂ ಆಶ್ಚರ್ಯವೇ ಹೇಳುತ್ತದೆ ಆಧುನಿಕ ತಂತ್ರಜ್ಞಾನ ಎಲ್ಲವನ್ನೂ ಬದಲಿಸಿದೆ ಎಂದು. “ಏನ್ ಕಾಲ ಬಂತಪ್ಪಾ, ನಮ್ ಕಾಲದಲ್ಲಿ ಹೀಗೆಲ್ಲಾ ಇರ್ಲಿಲ್ಲಾ!” ಎಂದು ನುಡಿಯುವ ಹಿರಿಯರ ಆಶ್ಚರ್ಯದ ಮಾತು ನಿಜ ಅನ್ಸುತ್ತೇ. ಚಲನಚಿತ್ರದ ವಿಷಯಕ್ಕೆ ಬಂದರೆ ಪ್ರಸ್ತುತ ಚಲನಚಿತ್ರವು 1990 ಇಸವಿಯಲ್ಲಿ, ಸುರೇಶ್ ಹೆಬ್ಳೀಕರ್ ಮುಖ್ಯಭೂಮಿಕೆಯಲ್ಲಿ, ಡಾ. ಅಶೋಕ್ ಪೈ ವಿರಚಿತ ಮತ್ತು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ ಅದ್ಭುತ ಚಲನಚಿತ್ರ “ಪ್ರಥಮ ಉಷಾಕಿರಣ”.

ಮುಖ್ಯ ಪಾತ್ರಗಳು:
ಸುರೇಶ್ ಹೆಬ್ಳೀಕರ್ – ಶ್ರೀಧರ್ ಆಗಿ ನಟಿಸಿದ್ದಾರೆ.
ಗೀತಾ _ ಶ್ರೀಧರನ ಪತ್ನಿಯಾಗಿ ನಟಿಸಿದ್ದಾರೆ.
ಗಿರೀಶ್ ಕಾರ್ನಾಡ್ _ ಮನೋವೈದ್ಯರಾಗಿ ನಟಿಸಿದ್ದಾರೆ.
ಉಷಾ ಮತ್ತು ಕಿರಣ್ ಶ್ರೀಧರನ ಇಬ್ಬರು ಮಕ್ಕಳಾಗಿ ತಮ್ಮ ನಟನಾ ಮುಖ್ಯಭೂಮಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಸ್ತುತ ಚಲನಚಿತ್ರದಲ್ಲಿ ಶ್ರೀಧರ್ ಒಬ್ಬ ಪ್ರಾಮಾಣಿಕ, ಬುದ್ಧಿವಂತ, ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಸಾಮಾನ್ಯ ಯುವಕ. ಮೂರು ವರ್ಷ ಹೊಸ ಕೆಲಸದ ಹುಮ್ಮಸ್ಸಿನೊಂದಿಗೆ ಅಮೇರಿಕಾಗೆ ತನ್ನ ಮಡದಿಯೊಂದಿಗೆ ತೆರಳಿದ ಆತ ಅಮೇರಿಕಾದ ನಡವಳಿಕೆ ಮತ್ತು ಸಂಸ್ಕøತಿಗೆ ಮರುಳಾಗುತ್ತಾನೆ. ಭಾರತಕ್ಕೆ ಮರಳಿದ ನಂತರ ತನ್ನ ನಡವಳಿಕೆ ಹಾಗೂ ಶಿಸ್ತನ್ನು ತನ್ನ ಎಳೆಯ ಮಕ್ಕಳ ಮೇಲೆ ಭಾರವನ್ನು ಹೇರುತ್ತಾನೆ. ಇದರಿಂದ ವಿಚಲಿತಗೊಂಡ ಇಬ್ಬರು ಮಕ್ಕಳು ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ. ಅದರ ಪರಿಣಾಮವಾಗಿ ವಿಚಿತ್ರವಾದ ನಡವಳಿಕೆಗಳನ್ನು ಪ್ರದರ್ಶಿಸತೊಡಗುತ್ತಾರೆ.

ವಿದೇಶಿ ಸಂಸ್ಕøತಿಗೆ ಬದಲಾದ ವ್ಯಕ್ತಿತ್ವ ಮತ್ತು ವರ್ತನೆಗಳು, ಶಾಲಾ ಪರಿಸ್ಥಿತಿ ಹಾಗೂ ಹಳ್ಳಿ ಶಾಲೆಯ ದುಸ್ಥಿತಿ, ಮಕ್ಕಳಲ್ಲಾಗುವ ಮಾನಸಿಕ ಬದಲಾವಣೆ ಹಾಗೂ ಪರಿಣಾಮಗಳು ಚಲನಚಿತ್ರದಲ್ಲಿ ಕಾಣಬಹುದಾದ ಪ್ರಮುಖ ಅಂಶಗಳಾಗಿವೆ. ಅಂತಿಮವಾಗಿ ಮಕ್ಕಳ ಮನೋವ್ಯಾಧಿಯನ್ನು ಅರ್ಥಮಾಡಿಕೊಂಡ ಪರಿಣಿತ ಮನೋಶಾಸ್ತ್ರಜ್ಞ (ಗಿರೀಶ್ ಕಾರ್ನಾಡ್) ರೊಬ್ಬರು ಅವರಿಬ್ಬರ ದುರವಸ್ಥೆಯ ಕಾರಣವನ್ನು ತಂದೆಗೆ ವಿವರವಾಗಿ ಅರ್ಥಮಾಡಿಸುತ್ತಾರೆ. ಹೀಗೆ ಉತ್ತಮ ಸಂದೇಶದೊಂದಿಗೆ ಮುಕ್ತಾಯವಾದ ನಾನು ಕಂಡಂತಹ ಅದ್ಭುತ ಚಿತ್ರ ಪ್ರಥಮ ಉಷಾಕಿರಣ ‘ಪೋಷಕರ ಹೃದಯ ಮಕ್ಕಳು’ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಕಹ್ಲಿಲ್-ಗಿಬ್ರನ್ ರವರ ಪ್ರಕಾರ ಮಕ್ಕಳು ಬಾಣ(ಶರ) ದಂತೆ ಹಾಗೂ ಪೋಷಕರು ಬಾಣವನ್ನು ಗುರಿಯೆಡೆಗೆ ತಲುಪಿಸುವ ಬಿಲ್ಲಿನಂತೆ ಇರಬೇಕು. ಏಕೆಂದರೆ ಬಿಲ್ಲು ಸದೃಢವಾಗಿ ತನ್ನನ್ನು ತಗ್ಗಿಸಿಕೊಂಡಷ್ಟು ಬಾಣವು ಕಠಿಣದೂರವನ್ನು ತಲುಪಿ ಗುರಿಯ ಕೇಂದ್ರವನ್ನು ಮುಟ್ಟುತ್ತದೆ.

ಪ್ರಸ್ತುತ ಚಲನಚಿತ್ರದಲ್ಲಿ ನಾನು ಹೆಚ್ಚಾಗಿ ಗಮನವಿಟ್ಟು ವೀಕ್ಷಿಸಿದ ಮನೋಹರ ದೃಶ್ಯವೆಂದರೆ ಹಿರಿಯರು ಮೊಮ್ಮಕ್ಕಳಿಗೆ ಹೇಳುವ ಧಾರ್ಮಿಕ ನೀತಿಯುಕ್ತ ಕಥೆ. ನಾನು ಈ ವಿಷಯವನ್ನು ಹೆಚ್ಚಾಗಿ ವಿಮರ್ಶಿಸಿದೆ ಏಕೆಂದರೆ ಇಂದಿನ ದಿನಗಳಲ್ಲಿ. ಆ ಸಂತೋಷದ ಕ್ಷಣಗಳು ತಂತ್ರಜ್ಞಾನದ ತುಳಿತಕ್ಕೆ ಸಿಕ್ಕಿ ಸತ್ತುಹೋಗಿವೆ. ನನ್ನ ಅನುಭವದಿಂದ ಹೇಳಬೇಕಾದರೆ ನನ್ನ ಅಜ್ಜ ಕೂಡ ನಾನು ಚಿಕ್ಕವನಿದ್ದಾಗ ಅನೇಕ ಧಾರ್ಮಿಕ, ವೈಚಾರಿಕ ಕಥೆಯಿಂದ ನನ್ನ ಕುತೂಹಲವನ್ನು ಕೆರಳಿಸಿ ತಣಿಸುತ್ತಿದ್ದರು. ಆದರೆ ಈಗ ಕಥೆಯೂ ಇಲ್ಲ, ಅಜ್ಜನೂ ಇಲ್ಲ! Only voot kids. ಈ ಚಲನಚಿತ್ರವು ನನ್ನನ್ನು ಇಂದಿನ ಪೋಷಕರ ವರ್ತನೆಯ ಕುರಿತು ವಿಚಾರ ಮಾಡುವಂತೆ ಮಾಡಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇಂದಿನ ದಿನಗಳು ನಿಜವಾಗಲೂ ಅಂದಿನಂತಿಲ್ಲ. ನಿಮ್ಮ ಅನುಮತಿಯಿದ್ದರೆ ನನ್ನದೊಂದು ಪುಟ್ಟ ಕಥೆ, ವಿದ್ಯಾಭ್ಯಾಸದ ನಂತರ ಹೊರದೇಶಕ್ಕೆ ಕೆಲಸಕ್ಕೆಂದು ಹೋದ ಒಬ್ಬ ಮಗನಿದ್ದ. ಒಮ್ಮೆ ಆತನ ತಂದೆ, ಮಗನಿಗೆ ತನ್ನ ಮರಣಕಾಲ ಸಮೀಪಿಸಿದೆ ಎಂದು ತಾನು ನಿನ್ನೊಮ್ಮೆ ನೋಡಬೇಕೆಂದು ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಆ ಹುಡುಗನು ಹೇಳಿದನು. “Sorry dad, I am busy with my work”. . ಕೊನೆಗೆ ತಂದೆಯ ಮರಣನಂತರ ಸ್ನೇಹಿತರ ಕರೆಯನ್ನು ಸ್ವೀಕರಿಸಿ ಹೇಳಿದನು. “Sorry dude, please complete my all duties regarding my father”. ವಿಪರ್ಯಾಸವೆಂದರೆ ತನ್ನ ತಂದೆಯ ಮುಖವನ್ನು ಸಹ ನೋಡಲಿಕ್ಕಾಗದ ಆತ ತನ್ನ ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡನು ಹೀಗೆ. “RIP, miss u dad..!”

ಆಧುನಿಕ ದಿನಗಳಲ್ಲಿ ಜನರ ಕಣ್ಣುಗಳು ಅವರವರ ಕನ್ನಡಕಗಳಿಂದ ವರ್ಣಮಯವಾಗಿ ಪ್ರಜ್ವಲಿಸುತ್ತಿವೆ. ಏಕೆಂದರೆ ಹೊರಗಿನ ಜಗತ್ತು, ಅವರ ಕನ್ನಡಕಗಳಿಂದ ಬದಲಾಗುತ್ತಿರುವ ಅವರ ವೀಕ್ಷಣೆ, ಎಲ್ಲವೂ ವಿಭಿನ್ನ.

ನಾನು ಗಮನಿಸಿರುವ ಒಂದು ವಿಷಯವೇನೆಂದರೆ ಪೋಷಕರು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಸ್ಫೂರ್ತಿ ತುಂಬುತ್ತಾರೆ. ಹೇಗೆಂದರೆ, “ಮಗೂ ನಿನ್ನಿಂದ ಸಾಧ್ಯ” (you can do it)  ಇದು ತಪ್ಪು ನಡವಳಿಕೆ. ಏಕೆಂದರೆ ಈ ಒಂದು ಮಾತು ಅನೇಕ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಈಗಷ್ಟೇ ಆಗ ಜನಿಸಿದ ಮಗುವಿನ ಕಿವಿಯಲ್ಲಿ ಅಪ್ಪ, ಅಮ್ಮ ಎಂದು ಹೇಳುವ ಬದಲು  Doctor, Engineer  ಎಂದು ಹೇಳುವ ದಾರಿದ್ರ್ಯ ಬಂದೊದಗಿದೆ. ಪೋಷಕರ ಒತ್ತಡದ ವರ್ತನೆ, ಸಂಬಂಧಿಕರ ಅನಗತ್ಯ ಸಂಭಾಷಣೆ, ಹೊರಗಿನ ತಂತ್ರಜ್ಞಾನ ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಂದು ನಿದರ್ಶನ ಎಂದರೆ ಇಬ್ಬರು ಅಕ್ಕಪಕ್ಕದ ಮನೆಯ ಹೆಂಗಳೆಯರು ತನ್ನ ಇಬ್ಬರು ಮಕ್ಕಳೊಂದಿಗೆ ಶಾಲಾ ವಾಹನಕ್ಕಾಗಿ ಕಾದಿದ್ದರು. ಆಗ ಆಕಸ್ಮಿಕವಾಗಿ ಒಬ್ಬ ಭಿಕ್ಷುಕನು ಭಿಕ್ಷೆಗಾಗಿ ಹಣವನ್ನು ಬೇಡಿ ಹೊರಟ. ಆಗ ಒಬ್ಬ ತಾಯಿಯು ತನ್ನ ಮಗುವಿಗೆ, “ಮಗೂ ನೀನು ವಿದ್ಯಾಭ್ಯಾಸ ಚೆನ್ನಾಗಿ ಮಾಡದಿದ್ದರೆ ಈ ರೀತಿ ಆಗುತ್ತೀಯಾ ಎಂದು ಹೇಳಿದಳು. ಇದನ್ನು ಕೇಳಿದ ಮತ್ತೊಬ್ಬ ತಾಯಿಯು ತನ್ನ ಮಗುವಿಗೆ, “ಪುಟ್ಟಾ, ನೀನು ವಿದ್ಯಾಭ್ಯಾಸ ಚೆನ್ನಾಗಿ ಮಾಡಿದರೆ ಇಂತಹ ಅನೇಕ ಭಿಕ್ಷುಕರಿಗೆ ಆಸರೆಯಾಗಬಹುದು.” ಈ ರೀತಿಯ ಬದಲಾವಣೆ ನಿಜವಾಗಲೂ ಬೇಕಾಗಿದೆ. ಆದರೆ ಇಂತಹ ಆಲೋಚನೆಯುಳ್ಳ ತಾಯಂದಿರು ವಿರಳ.

ಪೋಷಕರು ತಮ್ಮ ಐಷಾರಾಮಿ ಜೀವನದ ತುಣುಕನ್ನು ತಮ್ಮ ಮಕ್ಕಳಿಗೆ ಕೊಡುತ್ತಾರೆ. ಆದರೆ ಈ ಮಕ್ಕಳನ್ನು ನೋಡಿದ ಇನ್ನೊಂದು ಮಗು ತಾನೂ ಅವರಂತೆಯೇ ಐಷಾರಾಮವಾಗಿ ಬದುಕಬೇಕೆಂದು ದುಡ್ಡಿನ ಹಿಂದೆ ಓಡಲು ಶುರುಮಾಡುತ್ತಾನೆ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತು ಸುಳ್ಳೋ, ನಿಜವೋ ಗೊತ್ತಿಲ್ಲ. ಆದರೆ ಪ್ರತಿ ಮಗುವೂ ತನ್ನ ಸ್ವಂತ ಸುಖದೆಡೆಗೆ ಓಡುತ್ತಿರುವುದಂತೂ ನಿಜ.

ಪೋಷಕರ ಹಾಗೂ ಮಕ್ಕಳ ಸಂಬಂಧ ಸೂರ್ಯ ಹಾಗೂ ಚಂದ್ರನಂತಿರಬೇಕು. ಏಕೆಂದರೆ ಸೂರ್ಯ ಮತ್ತು ಚಂದ್ರರ ನಡುವಿನ ಪ್ರೀತಿಯ ಕಾಂತಿ ಹಾಗೂ ಮಮತೆ ಯಾರಿಗೂ ಕಾಣುವುದಿಲ್ಲ. ಆದರೆ ಸೂರ್ಯನ ಕಿರಣ ಚಂದ್ರನನ್ನು ಸ್ಪರ್ಶಿಸುತ್ತಲೇ ಚಂದ್ರನು ಪ್ರಕಾಶಿಸಲು ಶುರುಮಾಡುತ್ತಾನೆ. ಹೀಗೆಯೇ ಪೋಷಕರ ವಿಚಾರ ನಡವಳಿಕೆಗಳು ಸೂರ್ಯನ ಕಿರಣದಂತಿರಬೇಕು. ಆಗ ಮಾತ್ರ ಸಾಧನೆ ಎಂಬ ಭೂಮಿಗೆ ಚಂದ್ರನ ಪ್ರಭೆ ಸಾಧ್ಯ.
ಬದಲಾಗಬೇಕಾಗಿರುವುದು ಅವರು ಇವರಲ್ಲ ನಾನು ಎಂದುಕೊಂಡು ತಮ್ಮ ಆಸೆ ಬಯಕೆಗಳನ್ನು ಮಕ್ಕಳ ಮೇಲೆ ತೋರ್ಪಡಿಸಿಕೊಳ್ಳದೇ ಸ್ವತಂತ್ರವಾಗಿ ಮಕ್ಕಳನ್ನು ಪಕ್ಷಿಯಂತೆ ಹಾರಲು ಬಿಡಿ ಅನ್ನುವುದೇ ನನ್ನ ಅಭಿಪ್ರಾಯ.

Today’s children are the brightest future of a country.

ಮಗುವಾಗು ಮನವೇ………!

ರಕ್ಷಿತ್ ಎಚ್. ಆರ್

ಪ್ರಥಮ ಬಿ. ಎ , ವಿದ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ

 

ಮಂಜಿನಲ್ಲಿ ಬರಿಯ ಮರಗಳು

ಮಂಜಿನಲ್ಲಿ ಬರಿಯ ಮರಗಳು (Bare Trees In The Mist- Nepal)

ಹಲವು ಉದ್ದೇಶ, ಗುರಿ, ಸಂತೋಷ, ನೆಮ್ಮದಿಗಳನ್ನು ಬಯಸುವ ವ್ಯಕ್ತಿ ಅದೇ ಗುರಿಯ ಕಡೆಗೆ ಸಾಗಲು ಹೊರಡುತ್ತಾನೆ. ಆದರೆ ಅದಕ್ಕೆ ಒಂದು ನಿರ್ದಿಷ್ಟ ಗುರಿ ಇರುತ್ತದೆ, ಆದರೆ ತನ್ನ ಗಂಡನ ಬರುವಿಕೆಯನ್ನೇ ಮುಖ್ಯಗುರಿ ಎಂದೆನಿಸಿಕೊಂಡ ಕಾಲಿ ಎಂಬ ಮಹಿಳೆಯ ಕುರಿತು ಚಿತ್ರಿಸಿರುವ ಕಿರುಚಿತ್ರವೇ ‘ಮಂಜಿನಲ್ಲಿ ಬರಿಯ ಮರಗಳು’ಎಂಬ ನೇಪಾಳಿ ಭಾಷೆಯ ಕಿರುಚಿತ್ರ.

ಪ್ರಜ್ವಲ್ ನಿರ್ಮಾಣದ ರಾಜನ್ ಕಾರ್ತೂನ್ ನಿರ್ದೇಶಿಸಿ ರಚಿಸಿರುವ ಕಿರುಚಿತ್ರ, ಒಬ್ಬ ಮಹಿಳೆಯ ಜವಾಬ್ದಾರಿಯಾದ ತಾಯಿ, ಹೆಂಡತಿ, ನೆರೆಹೊರೆಯ ಪಾತ್ರ ಕೆಲಸ ಇತ್ಯಾದಿಗಳ ಜೊತೆಜೊತೆಗೆ ತನ್ನ ಸಂವೇದನಶೀಲವಾದ ಪ್ರೀತಿ ಪ್ರೇಮ ನೋವು ಹತಾಶೆ ಇವುಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ.  ಮೊದಲಾರ್ಧ ಭಾಗದಲ್ಲಿ ನೇಪಾಳದ ಹಿಮಾವೃತ ಚಿತ್ರಣವನ್ನು ಚಿತ್ರಿಸಿ ಜೀವನದ ಭಾರಹೊತ್ತ ತಾಯಿಯ ಜೊತೆಗೆ – ಮಗನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವು ಕಾಲಿ ಎಂಬ ಮಹಿಳೆಯ ಪಾತ್ರವನ್ನು ನೋಡಬಹುದಾಗಿದೆ.

ಕಿರುಚಿತ್ರ, ಎರಡು ಸಂಸಾರದ ಚಿತ್ರಣವನ್ನು ಚಿತ್ರಿಸುತ್ತದೆ, ಒಂದು ಸಂಪದ್ಭರಿತ ಕೂಡುಕುಟುಂಬ ಅಂದರೆ ಚಾರ್ಲಿ, ಚಾರ್ಲಿಯ ತಂದೆ ಮತ್ತು ಚಾರ್ಲಿಯ ತಾಯಿ- ಮತ್ತೊಂದು ಕಾಲಿ ಮತ್ತು ಅವಳ ಮಗ, ಆದರೆ ಕಾಲಿಯ ಗಂಡ ವಿದೇಶದಲ್ಲಿ ಕೆಲಸಕ್ಕೆಂದು ದುಡಿಯಲು ಹೋಗಿದ್ದಾನೆ ಆದರೆ ವಿಪರ್ಯಾಸ ಎಂದರೆ ಕಾಲಿಯ ಮುಗ್ದತನ ಅರ್ಥವಾಗುವುದು ಚಾರ್ಲಿಯ ತಂದೆ ‘ನಿನ್ನ ಗಂಡ ಯಾವ ದೇಶಕ್ಕೆ ಹೋಗಿದ್ದಾನೆ ಎಂದು ಕೇಳಿದಾಗ ಅದಕ್ಕೆ ಉತ್ತರ “ಅರಬ್ ದೇಶ” ಎಂದು ಮಾತ್ರವಾಗಿತ್ತು. ಆದರೆ ಅರಬ್ ದೇಶದ ಯಾವ ಭಾಗದಲ್ಲಿ ಎಂದು ಕೇಳಿದಾಗ ಅವಳಲ್ಲಿ ಉತ್ತರ ಇರಲಿಲ್ಲ’. ಇಲ್ಲಿ ನಿರ್ದೇಶಕ ಕಾಲಿಯ ಜವಾಬ್ದಾರಿಯನ್ನು ಹೊಲ ಊಳಲು ಬಳಸುವ ನೊಗದಂತೆ ಚಿತ್ರಿಸಿದ್ದಾರೆ,ಅರ್ಥತ್ ‘ನೊಗ ಹೊತ್ತ ಮಹಿಳೆಯ ಮೂಕ ನಡಿಗೆಯು ವೀಕ್ಷಕರಿಗೆ ಸಾವಿರ ಭಾವನೆಯನ್ನು ಕಾಲಿಯ ನೋವು, ಹತಾಶೆ, ದಿಕ್ಕೇತೋಚದ ಸ್ಥಿತಿ – ಎಂತಹದ್ದು ಎಂದು ಅರಿವಾಗುತ್ತದೆ,

ಈ ಕಿರುಚಿತ್ರದಲ್ಲಿ ಸುಖೀ ಕುಟುಂಬ ಅಂದರೆ ಚಾರ್ಲಿಯ ಕುಟುಂಬ ಸುಖ ಸಂತೋಷದಿಂದ ಕೂಡಿದ್ದು ಕಾಲಿಯ ಸ್ಥಿತಿಗೆ ಅವಮಾನಿಸುವ ವ್ಯಕ್ತಿತ್ವ ಎಂಬಂತೆ ಭಾಸವಾಗುತ್ತದೆ. ಕೊನೆಯ ದೃಶ್ಯದಲ್ಲಿ ಚಾರ್ಲಿ ತನ್ನ ಕಾಲನ್ನು ಗೋಡೆಗೆ ಹೊಡೆಯುವ ದೃಶ್ಯದ ಶಬ್ದ, ಚಾರ್ಲಿ ತಾಯಿ ರುಬ್ಬುತ್ತಿರುವ ಶಬ್ದ, ಮತ್ತು ಚಾರ್ಲಿಯ ತಂದೆ ಕಟ್ಟಿಗೆಯನ್ನು ಇಬ್ಭಾಗ ಮಾಡುವಾಗ ಮೂಡಿದ ಶಬ್ದವನ್ನೇ – ‘ಕಾಲಿಯಾ ಎದೆಬಡಿತವನ್ನು ‘ಮತ್ತು ವೀಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆಲೋಚನೆಯನ್ನು ಮೂಡಿಸುತ್ತಾರೆ ಧ್ವನಿ ಸಂಯೋಜಕರಾದ ಡಿಕೇಶ್ ಕಾಡ್ಗಿ ಶಾಹಿ ಮತ್ತು ಸಾರ ತಮಾಗ್ ರವರು.

ಚಿತ್ರದ ಛಾಯಾಗ್ರಹಣದ ವಿಷಯಕ್ಕೆ ಬಂದರೆ ಮಂಜು ಮುಸುಕಿನ ಪ್ರದೇಶದಲ್ಲಿ ಚಿತ್ರಿಸಿದ್ದಾರೆ, ಒಟ್ಟಾರೆ ಇಡೀ ಚಿತ್ರದಲ್ಲಿ ತಿಳಿ ಕಪ್ಪು ಬಣ್ಣದಲ್ಲಿ ಮೂಡಿ ಬಂದಿದ್ದು ವೀಕ್ಷಕರಿಗೆ ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ. ಚಿತ್ರದ ಸಕಾರಾತ್ಮಕ ಅಂಶವೆಂದರೆ ಅಷ್ಟು ಪಾತ್ರದಾರಿಗಳ ಸ್ವಾಭಾವಿಕ ನಟನೆ, ಹಿನ್ನೆಲೆ ಧ್ವನಿಯಾದ ಹಕ್ಕಿಗಳ ಚಿಲಿಪಿಲಿ ಕಲರವ ಮತ್ತು ಸಾಕು ಪ್ರಾಣಿಗಳ ಶಬ್ದ,ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಸಕಾರಾತ್ಮಕ ಅಂಶಗಳಲ್ಲೊಂದು, ಇನ್ನು ಚಿತ್ರದ ‘ಚಿಹ್ನೆ’ ವಿಷಯಕ್ಕೆ ಬಂದರೆ ಮೂಕನಡಿಗೆ,ಕಟ್ಟಿಗೆ, ಇವೆಲ್ಲವೂ ನೂರಾರು ಭಾವನೆಗಳನ್ನು ಮತ್ತು ನೇಪಾಳದ ಭಾಗದ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ಪಾತ್ರಧಾರಿಗಳ ಮೆಲ್ಲು ಧ್ವನಿ -ವೀಕ್ಷಕರಿಗೆ ಅಸಮಾಧಾನ ಮೂಡಿಸುತ್ತದೆ, ಕೆಲವೊಂದು ಸಂಭಾಷಣೆ ಮತ್ತು ಸೆರೆಹಿಡಿದಿರುವ ದೃಶ್ಯ ಮೂಕ ನಡಿಗೆ ವೀಕ್ಷಕರಿಗೆ ತುಸು ಹೆಚ್ಚಾಯಿತು ಎಂದು ಭಾಸವಾಗುತ್ತದೆ.  ‘ಮಂಜಿನಲ್ಲಿ ಬರಿಯ ಗಿಡಗಳು’ ( Bare Trees In The Mist ) ಎಂಬ ಶೀರ್ಷಿಕೆ ನೇಪಾಳದ ಪ್ರಕೃತಿಸೌಂದರ್ಯದ ಜೊತೆಜೊತೆಗೆ ಕಾಲಿಯ ಸ್ಥಿತಿಯನ್ನು ಹೋಲುತ್ತದೆ.

ಒಟ್ಟಾರೆಯಾಗಿ ಈ ಚಿತ್ರವನ್ನು ವಿವಿಧ ಸಂಸ್ಕೃತಿ ಭಾಷೆ ಮತ್ತು ಪ್ರಕೃತಿಯನ್ನು ಅರಿಯುವ ಸಲುವಾಗಿ, ವ್ಯಕ್ತಿಗತ ಸಂಬಂಧ- ಪ್ರೀತಿಯ ಮಹಿಮೆ ಮತ್ತು ತನ್ನವರಿಂದ ದೂರವಾದ ವ್ಯಕ್ತಿಯ ನೋವು ಎಂತಹದ್ದು ಎಂದು ಅರಿಯುವ ಸಲುವಾಗಿ ಈ ಚಿತ್ರವನ್ನು ನೋಡಬಹುದಾಗಿದೆ.
ಒಟ್ಟಾರೆಯಾಗಿ ಈ ಚಿತ್ರಕ್ಕೆ ಐದು ಅಂಕದಲ್ಲಿ ವಿಮರ್ಶಿಸುವುದಾದರೆ 4:50 ಅಂಕವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ನೀಡಬಹುದು.

ಉಮರ್ ಫಾರೂಕ್

ತೃತೀಯ ಬಿ. ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ