ಮರೆಯಾದ ಕರಿಯ

Image Credit: anime.desktopnexus.com

ಅವತ್ ಒಂದ್ ದಿನ ಹಿಂಗೆ ಏನೋ ಯೋಚ್ನೆ ಮಾಡ್ತಾ ರಸ್ತೇಲಿ ನೆಡ್ಕೊಂಡ್ ಹೋಗ್ತಾ ಇದ್ದೆ.. ಹಾಗೆ ಸೈಡ್ ಅಲ್ಲಿದ್ದ ಒಂದ್ ಕ್ಯಾಸೆಟ್ ಅಂಗಡಿ ಕಡೆ ನೋಡ್ದೆ.. ಅಲ್ಲೊಬ್ಬ ಕರಿಯ ನಿಂತಿದ್ದ.. ನೊಡಕೇನೋ ಡುಮ್ಮುಗೆ ಕರ್ರುಗೆ ಇದ್ದ, ಆದ್ರೂ ನಂಗ್ ಇಷ್ಟ ಆದ. ಅದೇ ಗುಂಗಲ್ಲಿ ಮನೆಗ್ ಹೋದೆ. ಸಂಜೆಯೆಲ್ಲ ಅವ್ನೆ ಆ ಕರಿಯನೇ ಕಣ್ಮುಂದೆ ಬರ್ತಾ ಇದ್ದ..

ಮಾರನೆ ದಿನ ಕಾಲೇಜ್ ಗೆ ಹೋಗ್ತಾ ಇದ್ದೆ ಮತ್ತೆ ಅದೆ ರಸ್ತೆ. ಒಂದ್ಸಲ ಕ್ಯಾಸೆಟ್ ಅಂಗಡಿ ಕಡೆ ತಿರುಗ್ ನೋಡ್ದೆ, ನಿನ್ನೆ ನೋಡಿದ ಆ ಕರಿ ಸುಂದ್ರ ಅಲ್ಲಿರ್ಲಿಲ್ಲ.. ಬಿಡು, ಏನ್ ದಿನ ಕಾಣ್ತಾನ? ಅನ್ಕೊಂಡು ನಿರಾಸೆ ಇಂದ ಕಾಲೇಜ್ ಗೆ ಬಂದೆ. ಕಾಲೇಜ್ ಮುಗೀತು ನನ್ ಫ್ರೆಂಡ್ ಜೊತೆ ಮನೆಗ್ ಹೊರಟೆ.. ಮತ್ತೆ ಅದೆ ರಸ್ತೆ ಈ ಸಲ ಕ್ಯಾಸೆಟ್ ಅಂಗಡಿ ಕಡೆ ನೋಡಕೇನು ಹೋಗಿಲ್ಲ, ಸ್ವಲ್ಪ ಮುಂದೆ ಹೋದೆ. ಕಣ್ಮುಂದೆ ಅದೇ ಚೆಲುವ ನಿಂತಿದ್ದ.. ಖುಷಿ ಆಗೋಯ್ತು. ಹಿಂಗೆ ದಿನ ಕಳೆಯಿತು.. ನಂಗೂ ನನ್ ಕರಿಯಂಗು ಒಳ್ಳೆ ಸ್ನೇಹ ಬೇಳಿತು ಆದ್ರೆ ಅದು ಬರೀ ಕಣ್ಣಿನ ನೋಟದಲ್ಲೇ ಇದ್ದಿದ್ದು. ಒಂದ್ ದಿನ ಸಂಜೆ ಕಾಲೇಜ್ ಇಂದ ಮನೆಗ್ ಹೋಗ್ತಾ ಇದ್ದೆ ನನ್ ಬಾಕ್ಸ್ ಲಿ ಇದಿದ್ ಮೊಸ್ರನ್ನ ನ ಅವ್ನ್ ಗೆ ಕೊಟ್ಟೆ.. ಖುಷಿಯಾಗಿ ತಿಂದ..

ಮಾರನೆ ದಿನ ಸಿಕ್ಕಾಪಟ್ಟೆ ಖುಷಿಲಿ ಕರಿಯನ್ ನೋಡೋಕೆ ಅಂತಾನೆ ಕಾಲೇಜ್ ಗೆ ಅಬ್ಸೆಂಟ್ ಆಗಿ ಹೋದ್ರೆ, ಆ ಕರಿಯ ಅಲ್ಲಿರ್ಲೆ ಇಲ್ಲ.. ಹಿಂಗೆ 4 ದಿನ ಕಳಿತು… ಆ ನನ್ ಸುಂದ್ರ ಸಿಗ್ಲೆ ಇಲ್ಲ.. 5 ನೆ ದಿನ ಏನಾದ್ರೂ ಆಗ್ಲಿ ಅಂತ ಕ್ಯಾಸೆಟ್ ಅಂಗಡಿ ಅಣ್ಣಗೆ ಕರಿಯ ಬಗ್ಗೆ ಕೇಳ್ದೆ.

“ರಸ್ತೇಲಿ ಒಂದ್ ಬೈಕ್ ಸ್ಪೀಡ್ ಆಗಿ ಬಂತು ಕರಿಯ ಅದುಕ್ ಸಿಕ್ಕಿ ನರಳಿ ನರಳಿ ಜೀವ ಬಿಟ್ಟ, ನಾನ್ 2 ವರ್ಷದಿಂದ ಆ ನಾಯಿ ಮರಿ ಸಾಕಿದ್ದೆ..”ಅಂತ ಹೇಳ್ತಾ ಆ ಅಣ್ಣ ಅವ್ರ ಕೆಲಸದಲ್ಲಿ ತೊಡಗಿದ್ರು. ಅವತ್ತಿಂದ ಯಾವ ಬೈಕ್, ಕಾರ್ ನೋಡಿದ್ರೂ ಕರಿಯಂದೆ ನೆನ್ಪು. ನಮ್ ಮನೆಲು ಒಬ್ಬ ಕೆಂಪ ಇದ್ದ, ಮನೆಬಿಟ್ ಹೋಗಿ ಒಂದ್ ತಿಂಗಳಾಯ್ತು.. ಕರಿಯ ನ ಹಾಗೆ ಸತ್ನ? ಜೀವಂತ ಇದಾನ? ಅವ್ನ್ Girlfriend ಜೊತೆ ಓಡಿ ಹೋದ್ನ? ಒಂದು ತಿಳಿತಿಲ್ಲ..

“ಅವ್ರು ನಮ್ ಹಾಗೆ ಜೀವಿಗಳು. ಎಲ್ಲಾ ಜೀವಕ್ಕೂ ಜೀವಿಸಕ್ಕೆ ಅವಕಾಶ ಮಾಡ್ಕೊಡಿ, ಜೀವಿಸಿ ಜೀವಿಸಲು ಬಿಡಿ ಈ ತರ ಕರಿಯ ಸಾಯುವಾಗ ಹೇಳಿರ್ ಬಹುದೇನೋ? ಆಲ್ವಾ? ಯೋಚ್ನೆ ಮಾಡಿ.. ನಾವೇನೋ ನಮ್ ಖುಷಿ ಗೆ ಸ್ಪೀಡ್ ಆಗಿ ಹೋಗ್ತೀವಿ, ನಮಗೂ ಕನಸುಗಳಿವೆ ಖುಷಿ ಪಡೋಕ್ ಏನೆಲ್ಲಾ ಮಾಡ್ತೀವಿ ಅಲ್ವಾ? ಹಾಗೇ ಆ ಮುಗ್ಧ ಜೀವಿಗಳಿಗೂ ಕನಸುಗಳಿವೆ, ಆಸೆಗಳಿವೆ, ಬದುಕುವ ಹಕ್ಕಿದೆ..

ನಾವ್ ಜಾಗರೂಕವಾಗಿ ಇರೋದ್ರಿಂದ ಸಮಾಜದಲ್ಲಿ ನಾವು ತಲೆ ತಗ್ಗಿಸೋ ಸಂದರ್ಭ ನೂ ಬರಲ್ಲ, ಮುಗ್ಧ ಜೀವಿಗಳ ಶಾಪಕ್ಕು ಒಳಗ್ ಆಗಲ್ಲ..

“ಇಷ್ಟೇ , ಇನ್ನೇನ್ ಇಲ್ಲ… ನೋಡಿ ಒಮ್ಮೆ ಈ ವಾಹನಗಳ ಚಾಲನೆ ಬಗ್ಗೆ ನೀವೇ ಯೋಚ್ನೆ ಮಾಡಿ.. ಯೋಚ್ನೆ ಮಾಡ್ತೀರಾ ಅಲ್ವಾ???

” ಮುಗ್ಧಜೀವಿಗಳನ್ನು ಉಳಿಸೋಣ..”.

ಮಧುಶ್ರಿ,

ದ್ವೀತಿಯ ಬಿ ಎ ,  ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Shiva-Neelakanta

Image Art by: Ms. Sahana Vijay Kumar

ಶಿವ, ನೀಲಕಂಠ, ಮುಕ್ಕಣ್ಣ , ಮೃತ್ಯುಂಜಯ , ಕಾಲಭೈರವ ಹೀಗೆ ಹಲವಾರು ನಾಮದಿಂದ ಕರೆಸಿಕೊಳ್ಳುವ ಈತನ ಚಿತ್ರ ಏಕೆ ಹೀಗೆ ಬರೆದಿದ್ದೇನೆಂದು ಎಂದು ನಿಮಗೆ ಅನ್ನಿಸುವುದು ಸಹಜ, ಆದರೆ ಇದರ ಹಿಂದೆ ಒಂದು ಅತಿ ಮುಖ್ಯ ಕಾರಣವಿದೆ ,

ಅದೇನೆಂದರೆ  ‘ಶಿವನು ಶಾಂತತೆಯಲ್ಲೂ, ಉಗ್ರತೆಯಲ್ಲೂ ಅವನು ಚಿಂತನೆ ಮಾಡುವನು. ಯಾವುದೇ ನಿರ್ಧರಗಳನ್ನು ತೆಗೆದುಕೊಳ್ಳುವಾಗಲೂ ಅವನು ಯೋಚಿಸಿ ನಂತರ ತೀರ್ಮಾನಕ್ಕೆ ಬರುವನು’. ಹೀಗೇ ನಾವು ಸಹ ಯಾವುದೇ ಸಮಸ್ಯೆಗಳು ಯಾವುದೇ ಸನ್ನಿವೇಶದಲ್ಲೂ ನಿಧಾನವಾಗಿ ಕೂತು ಯೋಚಿಸಿ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಈ ಒಂದು ವಿದ್ಯಮಾನವನ್ನು ಮನುಷ್ಯನು ಪಾಲಿಸಿದರೆ ಅವನ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ನನ್ನ ಅಭಪ್ರಾಯ.

ಧನ್ಯವಾದಗಳು

ಕುಮಾರಿ. ಸಹನಾ ವಿಜಯ್ ಕುಮಾರ್

ಪ್ರಥಮ ಬಿ. ಎಸ್ಸಿ. ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ