ಪ್ರಜೆಗಳ ಹಬ್ಬ ಚುನಾವಣೆಯ ಹಬ್ಬ

“ನಾ ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ, ನನ್ನಲ್ಲಡಗಿದೆ ಶಕ್ತಿ” ಎಂದು ಭಾರತದ ಪ್ರಜೆಗಳನ್ನು ಮತ ಚಲಾಯಿಸಲು ಹುರಿದುಂಬಿಸಿದ ಭಾರತದ ಚುನಾವಣಾ ಆಯೋಗದ ಹಾಡನ್ನು ಮೆಲುಕು ಹಾಕುತ್ತಾ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ,

ಚುನಾವಣೆ ಎನ್ನುವುದೇ ಒಂದು ಅಸ್ತ್ರ, ಪಕ್ಷ ಪಕ್ಷಗಳ ನಡುವೆ ಜನಪ್ರತಿನಿಧಿಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಪೈಪೋಟಿ ನಡೆಯುವಾಗ ಪರಿಹಾರವಾಗಿ ಬರುವುದೇ ಚುನಾವಣೆಯಾಗಿದೆ, ಚುನಾವಣೆ ಹಾಗೂ ಮತದಾನದ ನಡುವೆ ಅಪಾರವಾದ ಸಂಬಂಧವಿದೆ, ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು  ಮುಖಗಳಿದ್ದ ಹಾಗೆ, ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನವೇ ಮುಖ್ಯವಾದ ಭಾಗ,

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಸಂವಿಧಾನಾತ್ಮಕ ಸರ್ಕಾರ, ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಪ್ರಜೆಗಳು ಆರಿಸುವ ಪ್ರಜಾ ಪ್ರತಿನಿಧಿಗೆ ರಾಜಕೀಯ ಹಕ್ಕನ್ನು ನೀಡಲು ಚುನಾವಣೆ ಎಂಬ ಕಾರ್ಯತಂತ್ರವನ್ನು ರೂಪಿಸಿದೆ, ಮತದಾನದ ಹಕ್ಕು ಇತರ ಹಕ್ಕುಗಳೊಡನೆ ನಾಗರಿಕರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕಾಗಿದೆ, ಆದ್ದರಿಂದ ಬನ್ನಿ ಎಲ್ಲಾ ಸೇರಿ ಯೋಗ್ಯವಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡೋಣ, ನಮ್ಮ ಹಕ್ಕನ್ನು ಸರಿಯಾಗಿ ಉಪಯೋಗಿಸಕೊಳ್ಳೋಣ,

ಇತ್ತೀಚಿನ ವಿದ್ಯಮಾನಗಳಲ್ಲಿ ಒಂದು ಸಮೀಕ್ಷೆಯ ಪ್ರಕಾರ ಬಹುತೇಕ ಸುಶಿಕ್ಷಿತರು ಮತಗಟ್ಟೆಗೆ ಬರದೇ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ, 5 ನೇ ಕ್ಲಾಸಿಂದ 18 ವರ್ಷ ತುಂಬಿದವರೆಲ್ಲ ಮತದಾನ ಮಾಡಲೇಬೇಕು ಎಂದು ಪಾಠ ಮಾಡುತ್ತಾ ಬರುತ್ತಿದ್ದರೂ ಸಹ ಎಲ್ಲವನ್ನೂ ಓದಿಕೊಂಡಂತಹ ವಿದ್ಯಾವಂತರು ಚುನಾವಣೆಯ ದಿನ ಮತ ಚಲಾವಣೆ ಮಾಡುವುದನ್ನೇ ಮೈ ಮರೆತು ಮನೆಯಿಂದ ಹೊರಬರದೆ ಟಿವಿ ಮುಂದೆ ಕುಳಿತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆಯುವುದು. ಇನ್ನು ಕೆಲವರು ಮಕ್ಕಳ ಬೇಸಿಗೆ ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದು, ಒಂದು (ದೂರದ) ಊರಿನಿಂದ ಇನ್ನೊಂದು ಊರಿಗೆ ಹೊಟ್ಟೆಪಾಡಿಗಾಗಿ ಅಥವಾ ಕೆಲಸದ ನಿಮಿತ್ತ ಬಂದ ಕೆಲಸಗಾರರು ಮತದಾನ ಮಾಡಲು ಒಂದು ದಿನಕೊಸ್ಕರ ತಮ್ಮ ಊರಿಗೆ ಹೋಗಲಾರದೆ ಇರುವ ಪರಿಸ್ಥಿಯಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಇಂದು ಭಾರತದ ಯಾವುದೇ ಭಾಗದಲ್ಲಿ ಮತದಾನವಾದರೂ  ಶೇಕಡಾ 100 ರಷ್ಟು ಮತದಾನ ನಡೆಯುತ್ತಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ನಾಗರಿಕರಲ್ಲಿ ಮತದಾನದ ಬಗ್ಗೆ ಇರುವ  ಅಲಕ್ಷ್ಯ ಮತ್ತು ಅವರಿಗೆ ತಮ್ಮ ಮತದಾನದ ಹಕ್ಕು ಹಾಗೂ ಜವಾಬ್ದಾರಿಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದೇ ಆಗಿದೆ, ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಸರಿಯಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡಬೇಕು, ದೇಶದ ಭವಿಷ್ಯದ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಕರ್ತವ್ಯ ಇದು ಎಂದು ಭಾವಿಸಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆರಿಸುವಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು,

ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಾಗಿದೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನವೇ ಅತ್ಯಂತ ಮುಖ್ಯವಾದ ಘಟ್ಟ, ಮತ ಚಲಾಯಿಸುವವನೇ ಮತದಾರ, ಜಾತಿ, ಮತ, ಪಂಥ, ಧರ್ಮ, ಉನ್ನತ, ಕನಿಷ್ಠ, ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಒಂದು ರಾಷ್ಟ್ರದ 18 ವರ್ಷ ತುಂಬಿದ ಪ್ರಜೆಯು ಮತ ಚಲಾಯಿಸುವ ಹಕ್ಕನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ,

ಬನ್ನಿ ಎಲ್ಲಾ ಸೇರಿ ರಾಷ್ಟ್ರೀಯ ಹಬ್ಬದಂತೆ ಈ ಬಾರಿಯ ಚುನಾವಣೆಯ ಹಬ್ಬವನ್ನು ಆಚರಿಸೋಣ 10ನೇ ಮೇ 2023 ರಂದು ಯೋಗ್ಯವಾದ ಪ್ರಜಾಪ್ರತಿನಿಧಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ ಕರ್ನಾಟಕದ ರಾಜ್ಯದ ಮುಂದಿನ 5 ವರ್ಷದ ಭವಿಷ್ಯಕ್ಕೆ ಮುನ್ನುಡಿ ಬರೆಯೋಣ, ರಾಜ್ಯದ ಮುಂದಿನ 5 ವರ್ಷದ ಭವಿಷ್ಯದ ಜೊತೆಗೆ ನಮ್ಮಂತಹ ಕೋಟ್ಯಂತರ ಪ್ರಜೆಗಳ 5 ವರ್ಷದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿ……!

ಗೌಸ್ ಪೀರ್,
ಪ್ರಥಮ ವರ್ಷದ ಬಿಎ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ಶಿವಮೊಗ್ಗ,

Manospandana : Suicide

Mr. Ganesh Nadiger
Senior Counsellor
Manasa Nursing Home, Shivamogga, is talking about Suicide.

Suicide is the act of intentionally causing one’s own death. Mental disorders (including depression, bipolar disorder, schizophrenia, personality disorders, anxiety disorders), physical disorders (such as chronic fatigue syndrome), and substance abuse (including alcoholism and the use of and withdrawal from benzodiazepines) are risk factors

many suicides happen impulsively in moments of crisis with a breakdown in the ability to deal with life stresses, such as financial problems, relationship break-up or chronic pain and illness. experiencing conflict, disaster, violence, abuse, or loss and a sense of isolation are strongly associated with suicidal behavior.

ಆತ್ಮಹತ್ಯೆಯು ಒಬ್ಬರು ಸ್ವಂತ ಸಾವನ್ನು ಉದ್ದೇಶಪೂರ್ವಕವಾಗಿ ಉಂಟುಮಾಡುವ ಕ್ರಿಯೆಯಾಗಿದೆ. ಮಾನಸಿಕ ಅಸ್ವಸ್ಥತೆಗಳು (ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ವ್ಯಕ್ತಿತ್ವ ಅಸ್ವಸ್ಥತೆಗಳು, ಆತಂಕದ ಅಸ್ವಸ್ಥತೆಗಳು ಸೇರಿದಂತೆ), ದೈಹಿಕ ಅಸ್ವಸ್ಥತೆಗಳು (ಉದಾಹರಣೆಗೆ ದೀರ್ಘಕಾಲದ ಆಯಾಸ ಸಿಂಡ್ರೋಮ್) ಮತ್ತು ಮಾದಕ ವ್ಯಸನ (ಮದ್ಯಪಾನ ಮತ್ತು ಮಾದಕ ದ್ರವ್ಯ ಬಳಕೆ ಸೇರಿದಂತೆ ಮತ್ತು ಬೆಂಜೊಡಿಯಜೆಪೈನ್ಗಳಿಂದ ಹಿಂತೆಗೆದುಕೊಳ್ಳುವಿಕೆ) ಅಪಾಯಕಾರಿ ಅಂಶಗಳಾಗಿವೆ.

ಆರ್ಥಿಕ ಸಮಸ್ಯೆಗಳು, ಸಂಬಂಧದ ವಿಘಟನೆ ಅಥವಾ ದೀರ್ಘಕಾಲದ ನೋವು ಮತ್ತು ಅನಾರೋಗ್ಯದಂತಹ ಜೀವನದ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯದ ಕುಸಿತದೊಂದಿಗೆ ಬಿಕ್ಕಟ್ಟಿನ ಕ್ಷಣಗಳಲ್ಲಿ ಅನೇಕ ಆತ್ಮಹತ್ಯೆಗಳು ಹಠಾತ್ ಆಗಿ ಸಂಭವಿಸುತ್ತವೆ.ಸಂಘರ್ಷ, ವಿಪತ್ತು, ಹಿಂಸೆ, ನಿಂದನೆ, ಅಥವಾ ನಷ್ಟವನ್ನು ಅನುಭವಿಸುವುದು ಮತ್ತು ಪ್ರತ್ಯೇಕತೆಯ ಪ್ರಜ್ಞೆಯು ಆತ್ಮಹತ್ಯಾ ನಡವಳಿಕೆಯೊಂದಿಗೆ ಬಲವಾಗಿ ಸಂಬಂಧಿಸಿದೆ.

ನನ್ನ ಕಾಲೇಜು ನನ್ನ ಹೆಮ್ಮೆ- 2

ಆ ದಿನ ಸಂಜೆ ಹೊಸನಗರದಿಂದ ಶಿವಮೊಗ್ಗಕ್ಕೆ ಬಂದು ಕಾಲಿಟ್ಟ ಆ ದಿನ ಕಳೆದು ಬಹಳ ಕಾಲವಾಯಿತು ಎಂದು ಅನಿಸುತ್ತಿಲ್ಲ..

ನೋಡು ನೋಡುತ್ತಲೇ ಎರಡು ವರ್ಷ ಅಲ್ಲ ಎರಡುವರೆ ವರ್ಷಗಳು ಕಳೆದು ಹೋಯಿತು.. ಯಾರೂ ಪರಿಚಯ ಇರದ ತರಗತಿ, ಬೆರಳೆಣಿಕೆ ದಿನಗಳಲ್ಲಿ ಪರಿಚಯವಾಗಿ ಕಳೆದು ಹೋದ ಆ ದಿನಗಳನ್ನು ನೆನೆಯುವುದು ಅನಿವಾರ್ಯ.

ಕ್ಲಾಸ್ ಇಲ್ಲದೆ ಇದ್ದಾಗ ಸ್ನೇಹಿತರೊಂದಿಗೆ ಹರಟೆ ಹೊಡೆದ  ಆ ಕ್ಷಣಗಳು, ಮಾಡಿದ ಮೋಜು ಮಸ್ತಿ, ನಮಗೆ ಫ್ರೆಷರ್ಸ್ ಪಾರ್ಟಿ ಕೊಟ್ಟ ಆ ಸೀನಿಯರ್ಸ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಿದ ಆ ಕ್ಷಣಗಳು, ಕನ್ನಡ ತರಗತಿಯಲ್ಲಿ ಮಾಡಿದ ತರ್ಲೆಗಳು, ಇಂಗ್ಲಿಷ್ ತರಗತಿಯಲ್ಲಿ ಮಾಡಿದ ಕೀಟಲೆಗಳು,

ಆಪ್ಷನಲ್ ಇಂಗ್ಲಿಷ್ ತರಗತಿಯಲ್ಲಿ ನಿದ್ರೆ 😴 ಹೋದ ಆ ಕ್ಷಣಗಳು, ಸೈಕಾಲಜಿ ತರಗತಿಯಲ್ಲಿ ತಮಾಷೆ ಮಾಡಲು ಹೋಗಿ ಅಮಾವಾಸ್ಯೆಯಾದ ಆ ದಿನಗಳು😂🙌, ಆಕ್ಟಿವಿಟಿ ಗಾಗಿ ಕೂರುತ್ತಿದ್ದ  ಜರ್ನಲಿಸಂ ಕ್ಲಾಸ್ ಗಳು,🥳, ಅಟೆಂಡೆನ್ಸ್ ಬೇಕಲ್ಲ ಎಂದು ಕೂರುತಿದ್ದ ಐಸಿ ಮತ್ತು ಇವಿಎಸ್ ತರಗತಿಗಳು😁.

ಬೇಡ ಬೇಡವೆಂದರೂ ಬರುತ್ತಿದ್ದ ಎರಡು ಇಂಟರ್ನಲ್ಸ್ ಗಳು🥺🤦🏻‍♀️, ನಾನ್ ಏನ್ ಕಮ್ಮಿ ಇಲ್ಲ ಅಂತ ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾಕ್ ಪ್ರಾಕ್ಟಿಕಲ್ಸ್ ಗಳು 🤦🏻‍♀️ಕ್ಲಾಸ್ ಟೆಸ್ಟ್ ಗಳು, ಇವೆಲ್ಲವೂ ಕೂಡ ಮೊನ್ನೆ ಮೊನ್ನೆ  ಅಷ್ಟೇ ನಡೆದಂತೆ ಅನಿಸುತ್ತಿದೆ..

ಕ್ಲಾಸ್ ಮುಗಿದ ಕೂಡಲೇ ಪಕ್ಕದಲ್ಲಿರುವ ಟೀ ಅಂಗಡಿಗೆ ಹೋಗಿ ಕುಡಿಯುತ್ತಿದ್ದ ಬಿಸಿ ಬಿಸಿ ಟೀ ☕ ಗಳು ಮತ್ತು 12 ರೂಪಾಯಿಯ ಪೇಪರ್ ಬೋಟ್ಗಳು 🧃, ಹೊರಗಡೆ ಊಟಕ್ಕೆ ಕಾಸಿಲ್ಲ💰 ಎಂದಾಗ ಕಾಲೇಜ್ ಕ್ಯಾಂಟೀನ್ ನಲ್ಲೇ ಅನ್ನ ಮತ್ತು ಸೊಪ್ಪಿನ ಹುಳಿ 🍚 ತಿನ್ನುತ್ತಿದ್ದ ಆ ದಿನಗಳು, ಕೆಲವರಿಗಂತು ಉಪ್ಪಿನಕಾಯಿಯೇ ಅನ್ನ 😂 ಹೋಗಿಬಂದು ಕುಡಿಯುತ್ತಿದ್ದ ಆ ಮಜ್ಜಿಗೆ ಮತ್ತು ತಿನ್ನುತ್ತಿದ್ದ 🍋 ನಿಂಬೆಕಾಯಿ ಉಪ್ಪಿನಕಾಯಿ.

ಕಾಲೇಜ್ ಕ್ಯಾಂಟೀನ್ ನಲ್ಲಿ ತಿಂದು ತಿಂದು ಬೇಸರವಾದಾಗ, ಸಾಲ ಮಾಡಿ ಹೋಗುತ್ತಿದ್ದ ಆ ತಿನಿಸು ಅಂಗಳ (ಫುಡ್ ಕೋರ್ಟ್) ದಲ್ಲಿ ತಿನ್ನುತ್ತಿದ್ದ ಆ ಪಲಾವ್, ಗೋಬಿ, ಮೊಸರನ್ನ, ದಿನ ಕಳೆದಂತೆ ಬದಲಾದ ಆ ಪಯಣದ ದಾರಿ ವೆಜ್ ಫುಡ್ ಕೋರ್ಟ್ ನಿಂದ ನಾನ್ ವೆಜ್ ಫುಡ್ ಕೋರ್ಟ್ ಕಡೆಗೆ.

ತರಗತಿ ಇದ್ದರೂ ಬಂಕ್ ಮಾಡಿ ಲೈಬ್ರರಿಯಲ್ಲಿ ಕೂತು ಕಂಪ್ಲೀಟ್ ಮಾಡಿದ ಅಸೈನ್ಮೆಂಟ್  ಮತ್ತು ರೆಕಾರ್ಡ ಗಳು  ಗಳು, ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ ಆ ಪಿಪಿಟಿ ಮತ್ತು  ಸೆಮಿನಾರ್ ಗಳು,  ಮಧ್ಯಾಹ್ನ ಕ್ಲಾಸ್ ಇಲ್ಲದೆ ಇದ್ದಾಗ ಮಾಡಿದ ಆ ಗಲಾಟೆಗಳು, ಅದಕ್ಕೆ ಪ್ರತಿಫಲವಾಗಿ ಸರಾಸರಿಯಾಗಿ ಪ್ರತಿಯೊಬ್ಬ ಶಿಕ್ಷಕರಿಂದ ಉಗಿಸಿಕೊಂಡ   ಆ ಮಧುರವಾದ ಕ್ಷಣಗಳು. 😁⭐

ಕಡೆ ಕಡೆಗೆ ಪರಿಚಯ ಆದ  ಜೂನಿಯರ್ಸ್ ಗಳು🦧 ಸೀನಿಯರ್ಸ್ ಅಂತ ಬಹಳ ಮರ್ಯಾದೆ  ಮರ್ಯಾದೆ ನೀಡುತ್ತಾ ನಮಗೆ ಹೆದರದೆ ಸಹೋದರ ಸಹೋದರಿಯರಂತೆ ಕೀಟಲೆ ಮಾಡಿ, ಕಾಳಜಿ ತೋರಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕಲಿಯುತ್ತಿರುವ ಗೆಳೆಯರು.

ಇಂಟರ್ನಲ್ ಇದ್ದಾಗ ಮಾತ್ರ ಯೂಸ್ ಮಾಡಿಕೊಳ್ಳುತ್ತಿದ್ದ ಲೈಬ್ರರಿ ಕಾರ್ಡುಗಳು , ಲೈಬ್ರರಿಗೆ ಓದಲು 📖 ಎಂದು ಹೋಗಿ ಅಲ್ಲೇ ಮಲಗಿ ಬಿಡುತ್ತಿದ್ದ ಸಾಧಕರದ ನನ್ನ ಮಿತ್ರರು, ಸದಾಕಾಲ ಓದುತ್ತಲೇ ಇದ್ದು ಟಾಪರ್ ಟಾಪರ್ ಎಂದು ಕರೆಸಿ ಕೊಳ್ಳುತ್ತಿದ್ದಂತ ಮಹಾನ್ ಮೇಧಾವಿಗಳು, ಏನು ಓದದೆ ಪರೀಕ್ಷೆಯಲ್ಲಿ ಓದಿದವರಿಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದ ಬುದ್ಧಿವಂತರು, ಏನನ್ನು ಓದಿಯೇ ಇಲ್ಲ ಓದಿಯೇ ಇಲ್ಲ ಎಂದು ಕಾಗೆ ಹಾರಿಸಿ ಪ್ರತಿ ಪರೀಕ್ಷೆಯಲ್ಲೂ  ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುತ್ತಿದ್ದ   ಆ ಮಿತ್ರದ್ರೋಹಿಗಳು.

ಸದಾಕಾಲ ಹೊಗಳಿಸಿಕೊಳ್ಳುವವರ ಮಧ್ಯೆ ಇಲ್ಲದ ಕೀಟಲೆಗಳನ್ನು ಮಾಡಿ ಬೈಸಿಕೊಳ್ಳುತ್ತಿದ್ದ ವೀರರು, ಪ್ರಾರಂಭದಲ್ಲಿ ಉಂಟಾದ ಅದೆಷ್ಟೋ ಗ್ಯಾಂಗ್ಗಳು,  ಕಾಲಾ ನಂತರ ಮುರಿದು ಬಿದ್ದ ಅದೇ ಗ್ಯಾಂಗಳು, ಉಂಟಾದ ಅದೆಷ್ಟೋ ಮನಸ್ತಾಪಗಳು , ಬಿಡು ಮಚ ಇದೆಲ್ಲ ಕಾಮನ್ ಅನ್ನುತ್ತಾ..

ಫ್ರೆಂಡ್ಶಿಪ್ ಅಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ,
ಕಂಪ್ರೋ ಮಾಡಿ  ಮತ್ತರಿತುಕೊ ಒಗಟ್ಟಲಿ ಬಲವಿದೆ..

ಎಂದು ಕಿರಿಕ್ ಪಾರ್ಟಿ ಸಿನೆಮಾದ ಹಾಡನ್ನು ನೆನೆಸುತ್ತ ಕೊನೆಗೂ ಒಂದಾದ ಅದೆಷ್ಟೋ ಸ್ನೇಹ ಸಂಬಂಧಗಳು.

ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದ ಪ್ರತಿಭೆಗಳು⭐, ಪ್ರತಿಯೊಬ್ಬರೂ ಭಾಗವಹಿಸಲೇಬೇಕೆಂದು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದ ಕಟೀಲ್ ಅಶೋಕ್ ಪೈ ಕಾಲೇಜಿನ ಶಿಕ್ಷಕ ವೃಂದ, ಯಾವ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಹೊರಗಡೆ ಹೋಗದಂತೆ ಕಾವಲು ಕಾಯುತ್ತಿದ್ದ ಅಬ್ದುಲ್ ಅಣ್ಣ, 

ಇದೇ ನಮ್ಮೆಲ್ಲರ ಕಾಲೇಜ್ ,

ಇಷ್ಟೇ ಅಲ್ಲ ಹೇಳಕ್ ಹೋದ್ರೆ ಬೇಜಾನ್ ಇದೆ ಆದ್ರೆ ಓದೊರಿಲ್ಲ.. Anyway ಇನ್ನೇನ್ ಕಾಲೇಜ್ ಮುಗೀತಾ ಬಂತು … ನಗ್ತಾ ಇರೋಣ ನಾಗ್ಸ್ತಾ ಇರೋಣ..

ಇಷ್ಟು ಹೇಳಕ್ಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್.

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ