THE PLEASING NIGHTMARE

Pic Credit: Google.com

 

Every night i encounter a strange entity the moment i fall into the hypothetical land.

Surprisingly, that entity pays its visit in my dream just to provide me the things which this harsh reality doesn’t look up to.

The night pleases me, because the stars are visible and staring at the moon is easy unlike the daylight which haunts me.

The time spent with the faceless entity in my dream is too minimal in reality.

But, the time I spend with her is very comforting and is enough to seize the stress i carry all day.

The first thing she does when we meet is to give me a tight hug as if we reunited after ages. I have never felt a hug more divine than her’s.

And when i’m awake i can hear her voice in my mind reminding me that no matter what, i have a shoulder to cry on to, i have an entity who will talk me out of my miseries.

We run around the green hills filled with yellow daffodils, the sun was bright as ever, the winds were kind and gentle. The cool breeze blowing her hair.

Later on the hill top i lie on her lap, while her hair tickles my face, she gives me a kiss on my forehead and reminds me about the struggle left to turn that entity into reality.

I feel safe lying on her lap and to talk out the miseries i have been through the day.

I feel in soo much comfort with her that I relate myself to a wounded soldier with arrows in his back stabbed deeply, seeking peace with his soulmate after a war.

After all, Its just a dream which runs in loop. For how long? Not sure.

It’s just a Faceless young girl,

it’s just the sweetest voice I’ve ever heard.

It’s just a divine entity which symbolizes a person from the future or the past.

I don’t know…

 

NAWAZ AHMED

I Year BA Student

Kateel Ashok Pai Memorial College, Shivamogga

THE ROAD

According to Lewis carroll,

       “IF YOU DON’T KNOW WHERE ARE YOU GOING, ANY ROAD WILL GET YOU THERE”

For human beings, all living creature exists on the Earth, sky, mountains, trees, and many natural wonders are visible to the eye because of the road. For vehicles and pedestrians alike, the road is essential. Even airplane, before taking off, first moves on the road, its wheels rolling briefly on the ground before it lifts off and soars into the sky, only to land back on the road.

Countless wheels signals, more than four roads converge at the one point, and zebra crossing are marked on the road, vehicles stop due to red light, and pedestrians walk across safely. The way road is used reflects human ingenuity – vehicles stop, and pedestrians walk on zebra lines. The road guides us, having been created by digging the ground. It leads us in many directions, offering experiences and feelings to those who travel on it. The is stable, accommodating everything that travels across it. It plays a crucial in everyone’s life.

THINK ABOUT FOLLOWING QUESTIONS

*How far have you came?

*How did you get here?

*what helped to reach this place?

This kinds of questions arise in someone’s mind, and the answer often highlights the word “ROAD”.

Roads are constructed by digging the ground, carving through mountains, and building bridges over the water bodies.

 

Pritam B Patil

I BSW Student

Kateel Ashok Pai Memorial College, Shivamogga

WHISPERS OF A GROUNDED SOUL

 

In a meadow green, an ant did fret,

Its feathers gone, in sorrow set.

Once it soared with grace so high,

Now it ponders, “Why, oh why?”

 

Wings that danced in skies so blue,

Now but memories, faded too.

Confused and tense, it roams the land,

Seeking purpose, trying to understand.

 

Pain and ache in every stride,

A heavy heart it cannot hide.

“Am I still me without my flight?

Can I find joy in earthbound light?”

 

In shadows cast by doubts so vast,

It dreams of skies and a brighter past.

But in the grass, it starts to see,

Life’s still full of mystery.

 

For even grounded, beauty’s near,

In every dawn and twilight’s cheer.

With aching heart, it learns to find,

Strength and peace in a grounded mind.

 

NAWAZ AHMED

I Year BA Student

Kateel Ashok Pai Memorial College, Shivamogga

ಮೊದಲು ಮನಸ್ಸು ಮಾಡು…

 

ಒಬ್ಬ ಝೆನ್ ಮಾಸ್ಟರ್ ಪ್ರತಿದಿನ ದೂರದ ನದಿಯಿಂದ ತನ್ನ ಆಶ್ರಮಕ್ಕೆ ಎರಡು ಮಣ್ಣಿನ ಮಡಕೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಮಾಸ್ಟರ್ ಒಂದು ಕೋಲಿನ ಎರಡೂ ತುದಿಗಳಲ್ಲಿ ಎರಡು ಮಡಕೆಗಳನ್ನು ಕಟ್ಟಿಕೊಂಡು ಆ ಕೋಲನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಪ್ರತಿದಿನ ತನ್ನ ಆಶ್ರಮಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದ.

ಆ ಎರಡು ಮಡಕೆಗಳಲ್ಲಿ ಒಂದು ಮಡಕೆ ಕೊಂಚ ಬಿರುಕು ಬಿಟ್ಟಿತ್ತು ಮತ್ತು ಇನ್ನೊಂದು ಮಡಕೆಗೆ ಯಾವ ಹಾನಿಯೂ ಆಗಿರಲಿಲ್ಲ. ಚೆನ್ನಾಗಿ ಇರುವ ಮಡಕೆ ಪ್ರತಿದಿನ ಆಶ್ರಮಕ್ಕೆ ಒಂದು ಪೂರ್ತಿ ಮಡಕೆ ತುಂಬ ನೀರು ತೆಗೆದುಕೊಂಡು ಬರುತ್ತಿದ್ದರೆ, ಬಿರುಕು ಬಿಟ್ಟ ಮಡಕೆಯ ಅರ್ಧ ನೀರು ಸೋರಿ ಹೋಗುತ್ತಿತ್ತು, ಅದು ಆಶ್ರಮಕ್ಕೆ ಕೇವಲ ಅರ್ಧ ಮಡಕೆ ನೀರು ತರುತ್ತಿತ್ತು. ಹೀಗೇ ಈ ರೀತಿಯ ನೀರು ಸಾಗಾಣಿಕೆ ಎರಡು ವರ್ಷಗಳ ವರೆಗೆ ಮುಂದುವರೆಯಿತು.

ಹಾಗಾಗಿ ಮಾಸ್ಟರ್ ಗೆ ಪ್ರತಿದಿನ ನದಿಯಿಂದ ಕೇವಲ ಒಂದೂವರೆ ಮಡಕೆಯಷ್ಟು ಮಾತ್ರ ನೀರನ್ನ ಆಶ್ರಮಕ್ಕೆ ತರಲು ಸಾಧ್ಯವಾಗುತ್ತಿತ್ತು. ತಾನು ಹೆಚ್ಚು ನೀರು ಸಾಗಿಸುತ್ತಿದ್ದ ಕಾರಣಕ್ಕೆ ಚೆನ್ನಾಗಿದ್ದ ಮಡಕೆಗೆ ಹೆಮ್ಮೆಯಾದರೆ, ಪ್ರತಿದಿನ ಕೇವಲ ಅರ್ಧ ಮಡಕ್ಕೆಯಷ್ಟು ಮಾತ್ರ ನೀರು ಸಾಗಿಸುತ್ತಿದ್ದ ಬಿರುಕುಬಿಟ್ಟ ಮಡಕೆಗೆ ಬೇಸರ ಮತ್ತು ನಾಚಿಕೆಯಾಗುತ್ತಿತ್ತು.

ಒಂದು ದಿನ ಬಿರುಕುಬಿಟ್ಟ ಮಡಕೆ ಮಾಸ್ಟರ್ ನ ಕ್ಷಮೆ ಕೇಳಿತು, “ಮಾಸ್ಟರ್ ನಾನು ಬಿರುಕುಬಿಟ್ಟಿರುವ ಕಾರಣದಿಂದ ಪ್ರತಿದಿನ ಕೇವಲ ಅರ್ಧಮಡಕೆಯಷ್ಟು ಮಾತ್ರ ನೀರು ಸಾಗಿಸುವುದು ನನಗೆ ಸಾಧ್ಯವಾಗುತ್ತಿದೆ. ಅರ್ಧ ನೀರು ಸೋರಿ ಹೋಗಿ ವ್ಯರ್ಥವಾಗುತ್ತಿದೆ, ನನ್ನ ಕ್ಷಮಿಸು”.

“ಬೇಸರ ಮಾಡಿಕೊಳ್ಳಬೇಡ, ನಾಳೆ ನದಿಯಿಂದ ನಾವು ವಾಪಸ್ ಬರುವಾಗ ದಾರಿಯ ಒಂದು ಬದಿಯಲ್ಲಿ ಅರಳಿನಿಂತಿರುವ ಹೂವುಗಳನ್ನು ಒಮ್ಮೆ ನೋಡು, ಆಮೇಲೆ ಮಾತನಾಡೋಣ” ಝೆನ್ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನು ಸಂತೈಸಿದ.

ಮರುದಿನ ದಿನ ನೀರು ತೆಗೆದುಕೊಂಡು ವಾಪಸ್ ಬರುವಾಗ, ಬಿರುಕು ಬಿಟ್ಟ ಮಡಕೆ ದಾರಿಯಲ್ಲಿ ಅರಳಿ ನಿಂತಿದ್ದ ಸುಂದರ ಹೂವುಗಳನ್ನು ಗಮನಿಸಿತು. “ಗಮನಿಸಿದೆಯಾ ನೀರು ತರುವ ಹಾದಿಯಲ್ಲಿ ನಿನ್ನ ಬದಿಯಲ್ಲಿ ಮಾತ್ರ ಹೂವುಗಳು ಅರಳಿ ನಿಂತಿರುವುದನ್ನ? ಇನ್ನೊಂದು ಬದಿಯಲ್ಲಿ ಯಾವ ಹೂಗಳೂ ಇಲ್ಲದಿರುವುದನ್ನ? “ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನ ಪ್ರಶ್ನೆ ಮಾಡಿದ.

“ನನಗೆ ನಿನ್ನಲ್ಲಿ ಬಿರುಕು ಇರುವುದು ಗೊತ್ತಿತ್ತು ಆದ್ದರಿಂದ ನಿನ್ನ ಬದಿಯ ಹಾದಿಯಲ್ಲಿ ನಾನು ಹೂವಿನ ಗಿಡದ ಬೀಜಗಳನ್ನು ದಾರಿಯುದ್ದಕ್ಕೂ ಬಿತ್ತಿದ್ದೆ. ನಾನು ನಿನ್ನೊಳಗಿನ ಕೊರತೆಯನ್ನು ಗುರುತಿಸಿ ಅದನ್ನು ಸದುಪಯೋಗ ಮಾಡಿಕೊಂಡೆ. ನಿನ್ನಿಂದ ಸೋರಿ ಹೋಗುತ್ತಿದ್ದ ನೀರಿನಿಂದಾಗಿಯೇ ನಿನ್ನ ಬದಿಯ ಹಾದಿಯಲ್ಲಿ ಇಂದು ಹೂವಿನ ಗಿಡಗಳು ಬೆಳೆದು ನಿಂತಿರುವುದು. ಈ ಎರಡು ವರ್ಷ ನಿನ್ನಿಂದ ಸೋರಿದ ನೀರಿನ ಕಾರಣವಾಗಿಯೇ ಇವತ್ತು  ಈ ಹೂವುಗಳು ಅರಳಿ ನಿಂತಿರುವುದು, ಈ ಜಗತ್ತು ಇಷ್ಟರಮಟ್ಟಿಗೆ ಸುಂದರವಾಗಿರುವುದು.” ಮಾಸ್ಟರ್, ಬಿರುಕುಬಿಟ್ಟ ಮಡಕೆಯನ್ನು ಸಮಾಧಾನ ಮಾಡಿದ.

ನಾವು ಪ್ರತಿಯೊಬ್ಬರಲ್ಲೂ ಕೊರತೆಗಳಿವೆ, ದೌರ್ಬಲ್ಯಗಳಿವೆ. ನಾವೆಲ್ಲರೂ ಒಂದು ರೀತಿಯಲ್ಲಿ ಬಿರುಕುಬಿಟ್ಟಿರುವ ಮಡಕೆಯ ಹಾಗೆ. ಆದರೆ ನಾವು ಮನಸ್ಸು ಮಾಡಿದರೆ, ಪ್ರಯತ್ನ ಮಾಡಿದರೆ. ನಮ್ಮ ದೌರ್ಬಲ್ಯ, ಕೊರತೆಗಳ ಬಗ್ಗೆ ಸುಮ್ಮನೇ ಹಳಹಳಿಸುತ್ತ ಕುಳಿತುಕೊಳ್ಳದೇ ನಾವು ನಮ್ಮ ದೌರ್ಬಲ್ಯಗಳನ್ನು ಧನಾತ್ಮಕವಾಗಿ ಬಳಕೆ ಮಾಡಬಹುದು. ಅವಗಳನ್ನ ವಿರೋಧ ಮಾಡದೇ ಅವನ್ನು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಹುದು. ವಿವೇಕವಂತರ ದೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ನಮ್ಮ ಕೊರತೆಗಳು ನಮ್ಮನ್ನು ಕಟ್ಟಿಹಾಕುವುದು ಬೇಡ. ನಮ್ಮ ಕೊರತೆಗಳ ಬಗ್ಗೆ ತಿಳುವಳಿಕೆ ಹೊಂದಿರುವುದು ಮತ್ತು ಅದನ್ನು ಮೀರಿ ನಡೆಯುವುದು ನಮ್ಮ ಒಂದು ದೊಡ್ಡ ಸಾಮರ್ಥ್ಯ.

 

ಸಂಗ್ರಹ:

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಜ್ಞಾನ ಮತ್ತು ಅಹಂಕಾರ

 

Image Credit: LinkedIn

 

“ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ……”

 ಆಲ್ಬರ್ಟ್ ಐನ್ಸ್ಟೈನ್…..

ಇರಬಹುದೇ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ……

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಬಹುತೇಕ ಆಸಕ್ತಿಯ ಎಲ್ಲಾ ಜನರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಮತ್ತು ಸ್ವಾತಂತ್ರ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮನುಷ್ಯನಿಗೆ ಇರಬಹುದಾದ ಅಥವಾ ಬರಬಹುದಾದ ಅಹಂಕಾರ ಅಥವಾ ಅದಕ್ಕೂ ಮಿಗಿಲಾಗಿ ದುರಹಂಕಾರ ಯಾವ ಕಾರಣಗಳಿಗಾಗಿ ಅವನೊಳಗೆ ಪ್ರವೇಶಿಸುತ್ತದೆ ಎಂಬುದನ್ನು ಪರಿಶೀಲಿಸೋಣ…..

ಹಣದ ಅಹಂ, ಅಧಿಕಾರದ ಅಹಂ, ಆಸ್ತಿಯ ಅಹಂ, ಸೌಂದರ್ಯದ ಅಹಂ, ಅಕ್ಷರದ ಅಹಂ, ಜ್ಞಾನದ ಅಹಂ, ಪ್ರಶಸ್ತಿಯ ಅಹಂ, ಜನಪ್ರಿಯತೆಯ ಅಹಂ ಹೀಗೆ ನಾನಾ ಕಾರಣಗಳಿಂದಾಗಿ ಇದು ಹುಟ್ಟುತ್ತದೆ.

ಇಲ್ಲಿ ಅಹಂಕಾರ, ದುರಹಂಕಾರ, ಹೆಮ್ಮೆ ಇವುಗಳಿಗೆ ಇರುವ ವ್ಯತ್ಯಾಸ ಕೂಡ ಗಮನದಲ್ಲಿಟ್ಟುಕೊಂಡು ಚರ್ಚಿಸಬೇಕು. ಏಕೆಂದರೆ ಇತರರ ಬಳಿ ಇಲ್ಲದಿರುವುದು ನನ್ನ ಬಳಿ ಇದೆ ಎನ್ನುವ ತನ್ನ ಸ್ವ ಸಾಮರ್ಥ್ಯದ ಹೆಚ್ಚುಗಾರಿಕೆಯ ಆಂತರಿಕ ಹೆಮ್ಮೆ ಮತ್ತು ಅದರ ಭಾಗವಾಗಿ ಬಹಿರಂಗವಾಗಿ ವಿನಯದ ಪ್ರದರ್ಶನ,  ತನ್ನ ಬಳಿ ಇರುವುದು ಅವರ ಬಳಿ ಇಲ್ಲ ಎನ್ನುವ ಕಾರಣಕ್ಕಾಗಿ ಇತರರನ್ನು ಕೀಳಾಗಿ ಕಾಣುವುದು ಅಥವಾ ಅವರಿಗೆ ಮುಜುಗರವಾಗುವಂತೆ ವರ್ತಿಸುವುದು ಅಹಂಕಾರ, ಇದೇ ಕಾರಣಕ್ಕಾಗಿ ಬೇರೆಯವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವುದು ದುರಹಂಕಾರ ಮತ್ತು ಅಪರಾಧ.

ಬಹುಶಃ ಐನ್ಸ್ಟೈನ್ ಅವರ ಮಾತಿನ ಅರ್ಥ ಅಜ್ಞಾನಿಗಳು ಹೆಚ್ಚು ಅಹಂಕಾರ ಹೊಂದಿರುತ್ತಾರೆ ಕಾರಣ ಅವರಿಗೆ ಸಮಗ್ರ ಚಿಂತನೆಯಾಗಲಿ, ವಿಶಾಲ ಮನೋಭಾವವಾಗಲಿ, ಒಳ್ಳೆಯತನವಾಗಲಿ ಇರುವುದಿಲ್ಲ. ಸಂಕುಚಿತ ದೃಷ್ಟಿಕೋನ ಮತ್ತು ನಾನು ನನ್ನದು ಎಂಬ ಸ್ವಾರ್ಥ ತುಸು ಹೆಚ್ಚಾಗಿಯೇ ಇರುತ್ತದೆ. ಆ ಅಜ್ಞಾನ ಅಹಂಕಾರವಾಗಿ ನಮಗರಿವಿಲ್ಲದೇ ಪರಿವರ್ತನೆ ಹೊಂದಿ ನಮ್ಮೊಳಗೆ ಅಡಕವಾಗಿ ನಮ್ಮ ನಡವಳಿಕೆಯಾಗಿ ಮಾರ್ಪಡುತ್ತದೆ ಎಂಬುದಾಗಿರಬಹುದು.

ಆಳದಲ್ಲಿ ಅಹಂಕಾರದ ಒಳ ಅರ್ಥ ಮತ್ತೇನೋ ಇರಬಹುದು ಅಥವಾ ಆ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ವ್ಯಾವಹಾರಿಕವಾಗಿ ಐನ್ಸ್ಟೈನ್ ಹೇಳಿದ ನಡವಳಿಕೆ ನಮ್ಮ ಸುತ್ತಮುತ್ತಲಿನ ಜನರ ಒಡನಾಟದಿಂದ ನಮಗೆ ಅರಿವಾಗುತ್ತದೆ.

ಉದಾಹರಣೆಗೆ ನಮ್ಮ ನಿಮ್ಮ ನಡುವೆ ಸಾಮಾನ್ಯ ಪರಿಸ್ಥಿತಿಯಲ್ಲಿ ಆತ್ಮೀಯವಾಗಿ ಸ್ನೇಹದಿಂದ ಇರುವ ವ್ಯಕ್ತಿಗಳು ಅಥವಾ ಸಂಬಂಧಿಕರು ಯಾವುದೋ ಕಾರಣದಿಂದಾಗಿ ಅವರ ಒಟ್ಟು ಪರಿಸ್ಥಿತಿ ನಮಗಿಂತ ಉತ್ತಮವಾದಾಗ ಅವರ ವರ್ತನೆಯ ಬದಲಾವಣೆಗಳನ್ನು ಗಮನಿಸಬಹುದು.

ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತೊಂದಿದೆ. ಜ್ಞಾನವಂತನ ಮನಸ್ಥಿತಿ ಹೆಚ್ಚು ಸಮತೋಲನದಿಂದ ಕೂಡಿರುತ್ತದೆ. ಪ್ರಬುದ್ದತೆಯ ಮಟ್ಟ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಆಗ ವಿಷಯ ಯಾವುದೇ ಇರಲಿ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಬಹುದು.

ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮನೋಭಾವ ಮತ್ತು ನಡವಳಿಕೆಯಲ್ಲಿ ಒಂದಷ್ಟು  ಬದಲಾವಣೆ ಮಾಡಿಕೊಂಡರೆ ಅಹಂಕಾರ ಮತ್ತು ದುರಹಂಕಾರ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಆತ್ಮವಿಮರ್ಶೆ ಇದಕ್ಕಾಗಿ ಇರುವ ಅತ್ಯುತ್ತಮ ಮಾರ್ಗ.

ಮನುಷ್ಯ ಸಾವಿರಾರು ವರ್ಷಗಳಷ್ಟು ಬದುಕುವುದಿಲ್ಲ. ಸಾಮಾನ್ಯವಾಗಿ 60 ರಿಂದ 80 ಎಂದು ಒಂದು ಅಂದಾಜು. ಈ ಕಾಲದಷ್ಟು ಜೀವನದಲ್ಲಿ ಇತರರೊಂದಿಗೆ ನಾವು ಕೂಡ ಒಂದಷ್ಟು ನೆಮ್ಮದಿ – ಸಂತೋಷದಿಂದ ಜೀವನ ನಡೆಸಬೇಕೆಂದರೆ ಇಡೀ ಸಮಾಜದ ವಾತಾವರಣ ಮುಖ್ಯವಾಗಿ ನಮ್ಮ ಮತ್ತು ನಮ್ಮ ಸಹವರ್ತಿಗಳ ನಡವಳಿಕೆ ಉತ್ತಮವಾಗಿರಬೇಕು ಅಂದರೆ ಅಹಂಕಾರ ಅಥವಾ ದುರಹಂಕಾರಗಳ ಹೆಚ್ಚು ಪ್ರದರ್ಶನಕ್ಕೆ ಅವಕಾಶ ಇರಬಾರದು.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ” ಎಂದು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಾವೆಲ್ಲರೂ ಇನ್ನು ಮುಂದೆ ನಮ್ಮ ಸಾಮರ್ಥ್ಯ, ನಮ್ಮ ಅದೃಷ್ಟ, ನಮ್ಮ ಉತ್ತಮ ಜೀವನಮಟ್ಟ, ನಮ್ಮ ಸುಖ ಸಂತೋಷಕ್ಕಾಗಿ ಹೆಮ್ಮೆ ಪಡೋಣ. ಆದರೆ ಅಹಂಕಾರ ಅಥವಾ ದುರಹಂಕಾರ ಪಡುವುದು ಬೇಡ.

ನಮ್ಮಲ್ಲಿ ಇನ್ನೂ ದುರಹಂಕಾರ ಇದೆ ಎಂದಾದರೆ ನಾವು ಇನ್ನೂ ಅಜ್ಞಾನಿಗಳು ಎಂದು ನಮ್ಮನ್ನು ನಾವೇ ನಿರ್ಧರಿಸಿ ಮತ್ತೆ ನಾವು ಅಹಂಕಾರ ತ್ಯಜಿಸಿ ಜ್ಞಾನವಂತರಾಗಲು ಪ್ರಯತ್ನಿಸೋಣ. ಇದೊಂದು ನಿರಂತರ ಪ್ರಕ್ರಿಯೆ. ಇದು ಸ್ವಲ್ಪಮಟ್ಟಿಗೆ ಸಾಧ್ಯವಾದರೆ ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಸಮಾಜ ನಿರ್ಮಾಣದೆಡೆಗೆ ನಮ್ಮ ಹೆಜ್ಜೆಗಳು ಸಾಗುತ್ತಿವೆ ಎಂದು ಭಾವಿಸಬಹುದು.

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

“ಅಶೋಕವನದೊಳು ಅಮೃತದೆಲರು”

ಅಶೋಕ ವನದೊಳು ಎರಡು ದಿನಗಳಿಂದ ನಿರಂತರ ಬೀಸಿದ “ಅಮೃತ” ಎಲರು(ಗಾಳಿ) ನೀವು.. ಪದ ಪುಂಜಗಳ ಬಲೆಯೊಳಗೆ ಸಿಲುಕಲಸಾಧ್ಯವಾದ ನಿಮ್ಮೀ ಆತ್ಮ ವಿಶ್ವಾಸವ ಹೇಗೆಂದು ವರ್ಣಿಸಲಿ!!!

ಭಾಸ್ಕರನ ಭವ್ಯ ತೇಜಸ್ಸು ಒಂದೆಡೆಯೇ ಕೇಂದ್ರೀಕೃತವಾಗಿ ಪ್ರಜ್ವಲಿಸುವಂತಿರುವ ನಿಮ್ಮ ವ್ಯಕ್ತಿತ್ವ ಸರಳತೆಯ ಆಡಂಬರವೇ ಆಗಿತ್ತು ನಮಗೆ……

ಅಂಬರದಂತೆ ತೆರೆದಿಟ್ಟುಕೊಂಡ ನಿಮ್ಮ ಮೆದುಳು ಅಂಬುದಿಯಂತೆ ಹಲವು ಅರಿವ ಹೊಳೆಯ ಸಂಗಮಿಸಿಕೊಂಡು ತುಂಬಿಕೊಳ್ಳದೇ ಇನ್ನಷ್ಟು ಅರಿವಿಗಾಗಿ ಹವಣಿಸುತ್ತಿದೆ.. ನಿಮ್ಮರಿವ ಛಾಯೆ ನಮ್ಮೆಲ್ಲರನಪ್ಪಿ ನದುಳಂತೆ ಹೊಳೆವಂತಿದೆ!.. “ದೇಶ ಮೊದಲು!” ಎಂದೆದೆಗೊಗೆದ ನಿಮ್ಮ ಮೊದಲ ಮಾತಿನ ಬೀಜ ಯುವಕ ಯುವತಿಯರಾದ ನಮ್ಮ ಮನಭೂಮಿಗೆ ಬಿದ್ದು ಹಸಿರೊಡೆದಿದೆ. ಮೊದಲ ದಿನದ ಹತ್ತು ಮಾತುಗಳಲ್ಲಿ ಎಲ್ಲರ ಮಸ್ತಕದಲ್ಲಿ ಅಚ್ಚಳಿಯದೇ ಉಳಿದ ಮಾತು ‘ನಾನ್ಯಾಕೆ ಹೀಗಿರುವೆ?’ ಹಾಗೂ ಸಾಧನೆಯ ಬಾಗಿಲ ತೆರೆಯಲು “ಮುಂದೆ ಗುರಿ – ಹಿಂದೆ ಉರಿ” ಇರಬೇಕು ಎಂದು ನಿಮ್ಮ  ವಾಕ್ಯಗಳ ಹೆದೆಯಲ್ಲೇ ನೇರ ಬಾಣವ ಅಂತರಾಳಕ್ಕೆ ಗುರಿ ಇಟ್ಟು ಬೀಸಿದಿರಿ ,ನಮ್ಮೆಲ್ಲರನ್ನೂ ಖಾರವಾದ ನಿಂದನೆಯಲ್ಲಿ ಮೀಯಿಸಿ ಅದರ ಹಸಿ ಆವಿಯಾಗುವ ಮೊದಲೇ ಸಾಧನೆಯ

ಮಾರ್ಗವ ಭಾರ್ಗವ ಅರ್ಜುನನಿಗೆ ವಿವರಿಸಿದಂತೆ ವಿವರಿಸಿದಿರಿ..

ಸೈನಿಕನಾಗಿ ದೇಶದ ಜೀವಮಣಿಯ  ಹೊಳಪಲ್ಲಿ ಪ್ರಜ್ವಲಿಸಿದವರು, ಕಷ್ಟ ಒದಗಿಸುವ ಪಾಠಗಳ ನಿಮ್ಮುದಾರಣೆ ಮೂಲಕವೇ ಅಚ್ಛರಿಯಂತೆ ಅರಿವಂತೆ ಮಾಡಿದಿರಿ. ಜ್ಞಾನಕ್ಕೂ ವಿದ್ಯೆಗೂ ಕಾಗದಕ್ಕೂ ಇರುವ ಅಂತರವ ಅರ್ಥೈಸಿದಿರಿ!, ಹದಿ ಹರೆಯದ ವಯಸ್ಸಿನ ಭಾವಕ್ಕಿರುವ ಮರ್ಕಟನ ಬುದ್ಧಿಯ ತಿಳಿಸಿದಿರಿ. ನಿನ್ನಿಂದಸಾಧ್ಯ, ನಿನ್ನಿಂದಸಾಧ್ಯ!! ಎಂಬ ಸಮಾಜದೊಳು  ನಿನ್ನಿಂದ – “ಸಾಧ್ಯ” ಎನ್ನುವ ಅಕ್ಷರಾರ್ಥವನ್ನೂ ಜೀವಂತ ಉದಾಹರಣೆ ಮೂಲಕ ಮನದಾಳಕ್ಕಿದು ಚಿತ್ರಿಸಿದ್ದೀರಿ, ‘ಹಸಿವು’ ಪದದ ನಿಜಾರ್ಥವ ತಿಳಿಸಿದ ನಿಮಗೆ ಋಣಿ ನಾನು ನಿಮ್ಮಡಿದಾವರೆಗಳಿಗೆ‍♀…..

ಯಾವುದೊಂದೋ ಪಶ್ಚಾತಾಪದ ಅಗ್ನಿಯೊಳು  ಬೇಯುತ್ತಿದ್ದ ಬಳಲುತ್ತಿದ್ದ ನನ್ನಾತ್ಮಕ್ಕೆ  ಸಾಂತ್ವಾನ,ಸ್ಫೂರ್ತಿಯ ತುತ್ತ ನೀಡಿ  ಮರಣದ ಮಡುವಿನಿಂದ  ಹೊರತಂದ ನಿಮಗೆ… ಕೋಟಿ ಕೋಟಿ ಪ್ರಣಾಮಗಳು..

 

ತಂದೆಯ ಸ್ಥಾನದಲ್ಲಿರುವ ನಿಮಗೆ…

ಭಾವೋನ್ಮಾದದಿಂದ ಎರಗುವೆನು ನಾನು..

ಇದೊ ನಿಮಗಿದು ಭಾವಕ್ಷರಗಳ ಒಂದನೆ

 

ಕವನ ಕೆ. ಓ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

The parasite inside me…

Image Credit: Pinterest

What is it called??

When I crave for a soul to acknowledge mine…

Though I was amongst a crowd,

my heart was hollow…

Have u ever felt that!?

Because there was a parasite inside me eating off my softer side…

probably it wanted to fit me into this mechanical world, by making me independent

 

Time passed and I was used to it…

Freezing cold heart which lacked the emotions…

But one day, a bunch of people came around me…

They made me realize what it was,

to be valued…

 

How it felt when u could rely on someone,

How it felt when someone consoles ur weeping soul…

My soul was introduced to warmth,

The glimpses of happiness had started filling the hollowness in my heart…

But the bunch faded away!

What!? When!? Why!?

My head was spinning with such questions…

 

The lonely me had become – the alone, independent version of me, which is collapsed

The parasite which was safeguarding me, was on edge of death…

Should I wake it?

 

Akshatha R Kamath

1st BSc

Kateel Ashok Pai Memorial College, Shivamogga

 

ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನಮ್ಮ ಹೆಮ್ಮೆಯ ಸಮಾಜಕಾರ್ಯ

ವಿಶ್ವ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ವಿಶ್ವದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಸಮಾಜ ಸೇವಕರ ಸಾಧನೆಗಳನ್ನು ಸರ್ವರಿಗೂ ತಿಳಿಸಲು ಅವರ ಕಾರ್ಯಗಳನ್ನು ಹಾಗೂ ಅವರ ಕಾರ್ಯಗಳ ಉದ್ದೇಶ ವನ್ನು ಸಮಾಜಕ್ಕೆ ದರ್ಶಿಸಲು ಹಾಗೂ ನವ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯ ಸೇವೆಗಳ ಅರಿವನ್ನು ಸರ್ವರಿಗೂ ಮೂಡಿಸಲು ಮೀಸಲಾದ ದಿನವೆಂದು ಹೇಳಬಹುದು

ಸಮಾಜ ಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.

ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜ ಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ ಅವರಿಗೆ ಉತ್ತೇಜನ ನೀಡುವ ದಿನವಾಗಿದೆ ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜ ಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.

ಇಂದಿನ ಯುವ ಸಮಾಜ ಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ:

ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.

ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.

 ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.

ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು  ಚಳುವಳಿಗಳನ್ನು ಮುನ್ನಡೆಸಿದವರು.

ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.

ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.

ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ನವ ಸಮಾಜ ಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು   ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡೋಣ.

ಸಮಾಜ ಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕೋರ್ಸ್ಗೆ ಸೇರಲು ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ  ನಮ್ಮ ಪಾಲು ನೀಡೋಣ.

 

ಬರಹ : ನ್ಯಾನ್ಸಿ ಲವಿನಾ ಪಿಂಟೊ,

ಸಹಾಯಕ ಪ್ರಾಧ್ಯಾಪಕರು,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಅಪ್ಪ ಐ ಲವ್ ಯೂ

ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ

ಅಪ್ಪ ಅಂದರೆ ಅದ್ಭುತ, ಅಮರ ಪ್ರತಿಪಾದಕ, ಅಮೋಘ, ಆನಂದ, ಆದರ್ಶ, ಅನಂತ, ನನ್ನ ಜಗತ್ತು, ಮೊದಲ ಸ್ನೇಹಿತ ಅಪ್ಪಾ… ಅಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಕೊಡಿಸುವ ಶಕ್ತಿ ಹೊಂದಿದವರು, ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ಅಪ್ಪನದು, ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ತೋರಿಸಿದ ಹೃದಯವಂತ, ಕಲಿತ ಪಾಠ, ಕಂಡ ಕಷ್ಟಗಳು, ಸದಾ ಕಾಲ ನಗು ಮುಖವ ತೋರು ಎಂದು ತಿಳಿಸಿದವರು, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಿದ್ದ ನನಗೆ ಜೀವನದ ಅರ್ಥ ತಿಳಿಸಿ, ಛಲದಿಂದ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿ ಹಿಂಬಾಲಿಸಿದವರು ನನ್ನಪ್ಪ…. ಸಾವಿರ ಸಾವಿರ ಕಷ್ಟ ಬಂದರು ಛಲ ಬಿಡದೆ ಹೆಜ್ಜೆ ಮುಂದಿಟ್ಟ ಸಾಹುಕಾರ, ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿದ್ದಾನೆ. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿ ತೋರಿಸಿದವ, ತಾನು ಶಿಕ್ಷಣ ಪಡೆದಿಲ್ಲ ಆದರೂ ಮಕ್ಕಳು ಪಾಠದಿಂದ ವಂಚಿತರಾಗದಿರಲಿ ಎನ್ನುವ ಗುಣ ಅಪ್ಪನದು, ನಾ ಕಂಡ ಪಾಡು ನನ್ನ ಮಕ್ಕಳು ಕಾಣದಿರಲಿ ಎಂದು ಹಗಲಿರುಳ್ಳೆನ್ನದೇ ದುಡಿಯುತ್ತಿದ್ದಾರೆ….

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೋ ಜಾದೂಗಾರ ಅಪ್ಪ✨❤

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ… ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನ ಹಚ್ಕೊಳ್ಳೋದೇ ಜಾಸ್ತಿ…

ನೆನಪಿರಲಿ ಮಗಳೇ… ಈಗಲೇ ಹೇಳಿಬಿಡುತ್ತೇನೆ ನನಗೇನೂ ಬೇಡ ನಿನ್ನಿಂದ ಆದರೆ ನೀ ರಾಣಿಯಾಗು ನನ್ನ ಖುಷಿಯ ನೂರ್ಪಾಲು ನಿನಗಿರಲಿ ನಿನ್ನ ಕಣ್ಣೀರು ಬರೀ ಕನಸಾಗಲಿ. ಸಾಧಿಸು…ಧೈರ್ಯಗೆಡಬೇಡ ಬಿದ್ದರೆ ತುಳಿಯುವವರೇ ಇಲ್ಲಿ ಎದ್ದು ಗೆದ್ದು ಬಾ ಹಕ್ಕಿಯಂತೆ ಹಾರಾಡು…ಆದರೆ, ಮರೆಯಬೇಡ ಮಗಳೇ ನನ್ನ- ನನ್ನಾಕೆಯ ಮರೆಯಬೇಡ…

ಜನ್ಮ  ಕೊಡೋದು ತಾಯಿ,
ಜೀವನ ಕಲಿಸಿಕೊಡೋದು ತ೦ದೆ,

ತುತ್ತು ಕೊಡೋದು ತಾಯಿ
ತುತ್ತು ತ೦ದಾಕೋದು ತ೦ದೆ,

ಅತ್ತಾಗ ಮಡಿಲು   ಕೊಟ್ಟು ಕ೦ಬನಿ ಒರೆಸೋದು  ತಾಯಿ
ದ್ರುತಿಗೆಟ್ಟು ಕೂತಾಗ  ಹೆಗಲ ಕೊಟ್ಟು ಧೈರ್ಯ ತು೦ಬೋನು ತ೦ದೆ,,

ಮಗಳ ಮದುವೆಯಲ್ಲಿ ತನ್ನ ಕ೦ದನ ಅಗಲುವಿಕೆ
ನೆನೆದು ನೆನೆದು   ಕಣ್ಣೀರಿಡುವಳು ತಾಯಿ
ಮರೆಯಲಿ ನಿ೦ತು ಮಗಳೆದುರು ಕಣ್ಣೀರಿಡಲು
ಆಗದೇ ತಾಯಿ ಸ್ವರೂಪಿಣಿಯ೦ತಿದ್ದ  ಮಗಳು

ಜೀವ ಕೊಟ್ಟದ್ದು  ತಾಯಿಯೇ
ಜೀವವಿರುವ ವರೆಗೂ  ಜೀವನದ ಬಗ್ಗೆ ಪಾಠ ಕಲಿಸೋದು ತ೦ದೆ.. ❤❤

ತಂದೆ ನೀನು ತಂದೆ ನನ್ನ ಬಾಳ ತುಂಬಾ ಹರುಷ,
ಮರೆಯಲಾರೆ ನಿನ್ನ ನಾನು ಸಾವಿರ ವರುಷ,
ನೊಂದ ಗುರುತು ಬಹಳ ಕಂಡದ್ದು ನಗುವ ಮುಖ,
ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ…

ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ,
ಕಷ್ಟ ನೋರಿದ್ದರು ನಿನ್ನೊಳಗೆ ಹುಧುಗಿ ಇಟ್ಟೆ,
ಸಂಸಾರ ಸಾಗಿಸಲು ಬಹಳ ಕಷ್ಟ ಪಟ್ಟೆ,
ಆದರೂ ನಿನ್ನ ನಾನು ಇಷ್ಟ ಪಟ್ಟೆ….

ನನ್ನ ನೋವ ಕಂಡ ನಿನ್ನ ಎರಡೂ ಕಣ್ಣಲ್ಲಿ,
ನೋವು ನಿನಗೆ ಹೆಚ್ಚು ಬಿದ್ದಾಗ ನಾನು ಮಣ್ಣಲ್ಲಿ,
ಆಡ ಬಯಸುವೆ ಆಟ ಮಗುವಾಗಿ ನಿನ್ನೊಂದಿಗೆ,
ಮರೆಯಲಾರೆ ನಿನ್ನ, ನಿನ್ನ ನೆನಪೇ ನನ್ನೊಂದಿಗೆ….

ಬಯದಿ ಅವಿತು ನೆನಪು ನಿನ್ನ ಬೆನ್ನಲ್ಲಿ,
ಮಗುವಾಗಿ ಆಡುವಾಸೆ ನಿನ್ನ ಬಳಿಯಲ್ಲಿ,
ಮಗುವಾಗಿ ಮಲಗುವಾಸೆ ನಿನ್ನ ತೋಳಲ್ಲಿ,
ಮಗುವಾಗಿ ನಲಿವ ಆಸೆ ನಿನ್ನ ಜೊತೆಯಲ್ಲಿ!❣….

ಅಪ್ಪ  ಐ  ಲವ್ ಯೂ….❤❤❣

 

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ