ಕಗ್ಗತ್ತಲ ಸಮಯದಲ್ಲಿ

ಕಗ್ಗತ್ತಲ ಸಮಯದಲ್ಲಿ

 

ಸಂತಸದಿ ತುಂಬಿತ್ತು ಈ ಜಗ
ಸಾವುನೋವಿನಲಿ ಮರುಗಿದೆ ಈಗ.
ಜೀವಿಗಳಿಗದು ಕತ್ತಲ ಕೂಪ
ಏನಿದೇನು ??… ಕರಿನೆರಳ ಕೋಪ?

ಜಗತ್ತೇ ಕತ್ತಲಿಂದ ಬಳಲುತ್ತಿದೆ
ನೋವಿಗೆ ಮಿತಿಯೇ ಇಲ್ಲದೆ?
ನಿನ್ನೆ ನೋಡಿದವರಿಂದಿಲ್ಲ ,
ಆಗು ಹೋಗುಗಳ ಅರಿವೇ ಇಲ್ಲ!

ಅಂದು ಆ ಮಲೆನಾಡು
ಇಂದು ಬಯಲುಸೀಮೆಯ ಬೀಡು
ಮನಸ್ಸಿಗೆ ಮುದ ನೀಡಿದ್ದ ತಂಗಾಳಿ
ಇಂದು ಮನಸ ಘಾಸಿಗೊಳಿಸುವ ಬಿರುಗಾಳಿ
ಅಯ್ಯೋ ಏನಿದು ಕರಾಳ ರಾತ್ರಿಯ ರೌದ್ರಾವತಾರ?

ಕತ್ತಲಾವರಿಸಿದೆ ಮನದಲ್ಲಿ
ಕರೋನ ಎಂಬ ಭಯದಲ್ಲಿ
ಹೊರ ಜಗಕ್ಕೆ ಪ್ರವೇಶವಿಲ್ಲ
ಒಳ ಜಗದಲ್ಲಿ ಮನಃಶಾಂತಿಯೇ ಇಲ್ಲ 😞..

ದುಡಿಮೆ ಇಲ್ಲದೆ ಕಾಸಿಲ್ಲ
ಕಾಸಿಲ್ಲದೆ ಕೂಳಿಲ್ಲ
ಕೂಳಿಲ್ಲದೆ ಜೀವವೇ ಇಲ್ಲಾ…
ಇರುವುದೊಂದೇ ಕಗ್ಗತ್ತಲು…

ಬೃಹದಾಕಾರದ ಕಟ್ಟಡಗಳ ನಿರ್ಮಾಣ,
ಅದೇ ಇಂದು ನಮ್ಮೆಲ್ಲರ ನಿರ್ವಾಣ,
ಹಾಕಿದೆವು ಪಕ್ಷಿಗಳ ಪಂಜರದಲ್ಲಿ,
ನೂಕಿದೇವು ಪ್ರಾಣಿಗಳ ಸರ್ಕಸಿನಲ್ಲಿ,
ಫಲವಾಗಿ ನಾವಿಂದು ಮನೆಯೆಂಬ ಸೆರೆಮನೆಯಲ್ಲಿ.

ಸಾಗಬೇಕಿದೆ ಜೀವನ ಸುಗಮವಾಗಿ.
ಬದಲಾಗಬೇಕಿದೆ ಕಗ್ಗತ್ತಲು ಬೆಳಕಾಗಿ.
ಜೀವನವನ್ನು ಪ್ರೀತಿಸುತ್ತಾ, ಮಗುವಂತೆ ನಗುತ್ತಾ, ಎಲ್ಲರನ್ನು ಗೌರವಿಸುತ್ತಾ , ಮೆರೆಯಬೇಕಿದೆ ಮಾನವೀಯತೆ.

ಮಧುಶ್ರಿ,

ಪ್ರಥಮ ಬಿ ಎ

ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ

Leave a Reply

Your email address will not be published. Required fields are marked *