Skip to content

KAPMI Library

  • Home
  • About
    • Library
    • Library Rules
    • Library Collection
    • KAPMI
    • Manasa
  • Services
  • Resources
    • E-Journals & E-Books
    • E-Database
    • E-Courses & E-Lectures
    • E-Papers
    • E- Materials
  • KAPMI Archives
    • Question Bank
    • Video Lectures
    • Syllabus
    • News Paper Clipping
    • Gallery
    • Achievers
  • Research
    • Useful Websites & Apps
    • Dissertations
    • Publications
    • Seminars/Workshops/Conferences
  • Events
  • Contact

Welcome to Manoloka Granthalaya - "Library is the Heart of an Institution"

Notice Board

Circular Policies

Library Hours

Web OPAC

Downloads

HELINET Consortium

Old Question Papers

Membership Form

Library App

Ask A Librarian

Latest Updates

UG - Rank Holder

Hearty Congratulation for securing Rank in BA, BSW 2023 Examinations of Kuvempu University.

UG - Rank Holder

Hearty Congratulation for securing Rank in BSW and BA 2022 Examinations of Kuvempu University.

PG - Rank Holder

Hearty Congratulation for securing Rank in M. Sc Clinical Psychology 2023 Examinations of RGUHS, Bengaluru

PG - Rank Holder

Hearty Congratulation for securing Rank in M. Sc Psychology 2022 Examinations of Kuvempu University.

Blog

This blog focus on hidden talents of our college students and staff to expose themselves and also share the useful information to outer world.

April 15, 2025 Leave a Reply

ಅಂಬೇಡ್ಕರ್ ಕೂಡ ಅರ್ಧ ದೇಹದಲ್ಲಿ ನಾರಿಯನ್ನ ಹೊತ್ತವರು!

 

ಅಂಬೇಡ್ಕರ್ ಅಂದಾಕ್ಷಣ ನೆನಪಿಗೆ ಬರುವುದು,ಸ್ವಾಭಿಮಾನ ಗಟ್ಟಿತನ ದೃಢತೆ.. ಕೇವಲ ಜಾತಿ ಎಂಬ ಪದ ಅವರನ್ನ ಅವರ ಸಮುದಾಯವನ್ನು ನಡುಗಿಸಿದ್ದು ಎಲ್ಲರನ್ನೂ ಕೊರೆಯುವಂತ ಸಂಗತಿ. ಕಮಲ ಪಂಕದಲ್ಲಿ ಬೆಳೆದರೂ ಅದರ ಅರ್ಪಣೆ ದೇವರ ಪದಕ್ಕೆ ಎಂಬಂತೆ ಸಮಾಜ ಅವರನ್ನ ಎಷ್ಟೇ ಕೆಸರಿಗೆ ತಳ್ಳಿದರೂ ಅವರು ಕಮಲದಂತೆ ಮರಳಿ ಮರಳಿ ಅರಳಿದರು!.. ಅವರು ಖಡ್ಗಕ್ಕಿಂತ ಲೇಖನಿ ಹರಿತವಾದುದು ಎಂಬ ಮಾತಿನಲ್ಲಿ ನಂಬಿಕೆ ಇತ್ತವರು, ಓದೆಂಬುದು ಅವರ ತೀವ್ರ ಹಸಿವಾಗಿತ್ತು,ಅದರ ಮೂಲಕವೇ ಅವರು ಸಂವಿಧಾನವನ್ನೇ ಬರೆದು ಮೆರೆದರು.

ಸಾಹಿತ್ಯದಲ್ಲಿ ಸ್ವರ್ಣಾಕ್ಷರವಾಗಿ ಉಳಿದ ಅಂಬೇಡ್ಕರ್ ಅವರು ಮಹಿಳೆಯರನ್ನ ಸಬಲೆ ಎಂದು ಸಾರುವುದರಲ್ಲಿ ಮುಖ್ಯಾತಿಮುಖ್ಯ ಪಾತ್ರವಹಿಸಿದ್ದಾರೆ. ಹಾಗಾದರೆ ಸಬಲೀಕರಣ ಎಂದರೇನು?, ಹಾ! ಹೆಣ್ಣು ಎಂಬಾಕೆ ಪೂರ್ಣ ಸ್ವಾತಂತ್ರ ಹೊಂದುವ ಪರಿಯೇ ಸಬಲೀಕರಣ ಅಂದರೆ ತನ್ನ ಕಾಲ ಮೇಲೆ ತಾನೇ ನಿಲ್ಲುವ ಮೂಲಕ ತನ್ನ ತಾನು ಗುರುತಿಸಿಕೊಳ್ಳುವುದು. ಅವರು ಕಂಡಂತೆ ಹೆಣ್ಣು ಮಕ್ಕಳ ಪ್ರತೀ ಹೆಜ್ಜೆ ಕೂಡ ಅವರ ಮನೆಯಲ್ಲಿನ ಯಾವುದೇ ಗಂಡಿನ ಮೇಲೆ ನಿರ್ಧಾರವಾಗುತಿತ್ತು, ಬಾಲ್ಯದಲ್ಲೇ ವಿವಾಹ ಹಾಗೂ ನಾಲ್ಕು ಗೋಡೆಗಳ ಮಧ್ಯದ ಜೀವನ ದೌರ್ಜನ್ಯ ಅದೊಂದು ದೊಡ್ಡ ಕೊನೆಯೇ ಇಲ್ಲದ ಪಟ್ಟಿಯಾಗಿತ್ತು. ನಿಜವಾದ ಶಿಕ್ಷಣ ಪಡೆದ ವ್ಯಕ್ತಿ ಏನನ್ನ ಯೋಚಿಸಬೇಕೋ ಹಾಗೆ  ಯೋಚಿಸಿದ ಸರಿಕ ವ್ಯಕ್ತಿ ಅಂಬೇಡ್ಕರ್ ಎಂಬ ಮಾತಿನ ಮೇಲೆ ನಾನು ಬಲವಾಗಿ  ನಿಲ್ಲುತ್ತೇನೆ ಏಕೆಂದರೆ ಅವರು ಯೋಚಿಸಿದ್ದು ಕೊರತೆ ಇರುವುದು ಮಹಿಳಾ ಶಿಕ್ಷಣದಲ್ಲಿ ಎಂದು ಹಾಗೆ ಮಹಿಳಾ ಶಿಕ್ಷಣಕ್ಕೆ ಬಹಳ ಹೋರಾಡಿದರು. ದಲಿತ ಸಾಹಿತ್ಯ ಎಂಬ ಪುಟಗಳನ್ನು ತಿರುವಿದಾಗ ಅಲ್ಲಿ ನೆಂದ, ನೊಂದ ಪುಟಗಳೇ ಹೆಚ್ಚು ಅದರಲ್ಲೂ ಸ್ತ್ರೀ ವಾದಿ ಪುಟಗಳಂತೂ ಇನ್ನೂ ಒಣಗಿಲ್ಲ..

ಅಂಬೇಡ್ಕರ್ ಅವರೂ ಕೂಡ ಅರ್ಧ ದೇಹದಲ್ಲಿ ನಾರಿಯನ್ನೇ ಹೊತ್ತವರು ಹಾಗಾಗೇ ಅವರೂ ಮರುಗಿದ್ದು.. ಅವರು ಹೆಣ್ಣಿಗೆ ತನ್ನ ದೇಹದ ಮೇಲೆ ತನಗೆ ಮಾತ್ರ ಹಕ್ಕಿದೆ ಎಂಬ ಅರಿವು ಮೂಡಿಸುವ ಬಗೆಗೂ ಅವರ ಪಾತ್ರ ಮಂದರದಷ್ಟಿದೆ, ಏಕೆಂದರೆ ಸಾಹಿತ್ಯ ಇತಿಹಾಸ ತೆಗೆದು ನೋಡಿದಾಗ ದಲಿತ ಸಮುದಾಯದ ಮೇಲೆ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಬಗೆಗೆ ಹಲವರಿಗೆ ತಿಳಿದಿದೆ ಅದರಲ್ಲೂ ಹೆಚ್ಚಾಗಿ ಆ ಸಮಯದಲ್ಲಿ , ಮೇಲೆ ಎಂಬ ಮನಸ್ಥಿತಿಯ ಗಂಡಸರು ದಲಿತ ಸಮುದಾಯದ ಹೆಣ್ಣು ಮಕ್ಕಳನ್ನು ಎಳೆದು ಅತ್ಯಾಚಾರ ಮಾಡುತ್ತಿದ್ದ ಬಗೆಗೆ ಎಷ್ಟು ಜನಕ್ಕೆ ಗೊತ್ತು? ಆದರೆ ಅದೇ ಮೇಲು ಮನಸ್ಥಿತಿಯವರು ಸಮಾಜದ ಎದುರು ದಲಿತರ ನೆರಳನ್ನೂ ಬೀಳಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲದರ ತೀವ್ರ ಗಾಸಿಯನ್ನ ಹೊತ್ತು ಅಧಿಕಾರದ ಕುರ್ಚಿಯಲ್ಲಿ  ಕುಳಿತಿದ್ದರು ಅಂಬೇಡ್ಕರ್!.. ಅವರ ಧ್ವನಿ ಕೇವಲ ದಲಿತರೇ ಆಗಿಲ್ಲ ಎಲ್ಲಾ ಹೆಣ್ಣು ಮಕ್ಕಳಾಗಿದ್ದರು,..

ಸ್ಥಾನ ಅಧಿಕಾರ ಸಿಕ್ಕಾಕ್ಷಣ ಜಗತ್ತೇ ಮರೆವ ಕಾಲದಲ್ಲೂ ಅಂಬೇಡ್ಕರ್ ಅವರು ಕರ್ತವ್ಯಗಳ ಕವಲುಗಳನ್ನೇ ದಿಟ್ಟಿಸಿದರು. ಅವರಿಗೆ ತಿಳಿದಿತ್ತು ಕೆಲಸ ಮಾತಿನಲ್ಲಲ್ಲ ಕ್ರಿಯೆಯಲ್ಲಿ ಎಂದು.

ಭಾವನೆಗಳಿಗೆ ಅಂಬೇಡ್ಕರ್ ಎಷ್ಟು ಗೌರವ ನೀಡುತ್ತಿದ್ದರೆಂದರೆ ಮೊದಲು ಬಹುಪತ್ನಿತ್ವದ ವಿರುದ್ಧ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಿದರು, ಹೆಣ್ಣು ಕುಲಕ್ಕೆ ಭಾರ ಎನ್ನುವಂತ ಕಾಲದಲ್ಲಿ ಆಕೆ ಎಂದೂ ಭಾರವಲ್ಲ ಎನ್ನುವುದನ್ನ ಸಾರುವ ಸಲುವಾಗಿ ಆಸ್ತಿಯಲ್ಲಿ ಅವಳ ಹಕ್ಕನ್ನು ಬಲ ಪಡಿಸುವ ಕಾಯ್ದೆ ಜಾರಿ ತಂದರು. ಹೀಗೆ  ಕಾಯ್ದೆಗಳ ಮೂಲಕವೇ ಅವರು ಅವರು ಕಟ್ಟುಪಾಡಿನ ಸಮಾಜಕ್ಕೆ ಕಡಿವಾಣ ಹಾಕಿದರು. ಇನ್ನೂ ಅನೇಕಾನೇಕ ವಿಷಯಗಳಲ್ಲಿ ಸಬಲೀಕರಣ ಎಂಬುದು ಮಹಿಳೆಯರ ಸ್ವತ್ತಾಗಿಲ್ಲವಾದರೂ, ಅಧಿಕಾರ ಎಂದು ಬಂದಾಗ ಅವಳದ್ದು ಅವಳಿಗೆ ತಲುಪುವಂತೆ ಮಾಡುವ ಪ್ರಯತ್ನವಂತೂ ಅಂಬೇಡ್ಕರ್ ಎಂಬ ಅಪರೂಪದ ಮುತ್ತಿಗಿತ್ತು!..

 

ಕವನ ಕೆ. ಓ.

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Visitors Opinion

Visitors and Special guest opinion on kapmi

ಕಟೀಲು ಅಶೋಕ್ ಪೈ ಸ್ಮಾರಕ ಶಾಲೆ ಎಂದರೆ ಹೃದಯ ಆರ್ದ್ರವಾಗುತ್ತದೆ. ಅಶೋಕ್ ನೆನಪಿನ ಕೊಳದಲ್ಲಿ ಜೀವಂತ. ಅವರ ನೆನಪನ್ನು ಕಾದಿರಿಸುವ ಈ ಶಾಲೆಗೆ ನೂರು ನಮಸ್ಕಾರ.

ನಾಗತಿಹಳ್ಳಿ ಚಂದ್ರಶೇಖರ ಚಿತ್ರ ನಿರ್ದೇಶಕರು ಹಾಗೂ ಲೇಖಕರು

Dr. Ashok Pai Memorial Institute is an upcoming, comprehensive college where psychology, Social Work and other subjects are taught. I am very delighted to learn about this institute as it was the dream of Dr. Ashok Pai to popularize psychology, through various meaning full ways, film, theatre, Talks and the like. now more youngsters are keen to study psychology is a sign of growing interest in the subject. I am sure this institute will grow in to a prestigious centre.

Suresh Heblikar Actor / Director/ Environmentalist

ಕಾಲೇಜು, ಇಲ್ಲಿನ ವಾತಾವರಣ ಎಲ್ಲವೂ ತುಂಬಾ ಖುಷಿಕೊಟ್ಟಿತು, ಇಲ್ಲಿನ ವಿದ್ಯಾರ್ಥಿ ಮಿತ್ರರ ಉತ್ಸಾಹ ಕಂಡು ನನ್ನ ಕಾಲೇಜಿನ ದಿನಗಳೂ ನೆನಪಿಗೆ ಬಂದವು. ಪ್ರಾಂಶುಪಾಲರು, ಭೋದಕ ವರ್ಗದವರ ಪ್ರೀತಿಗೆ ನಾನು ಮೂಕನಾದೆ, ಕಾಲೇಜಿಗೆ ಎಲ್ಲ ಒಳಿತುಗಳು ರಾಶಿ ರಾಶಿ ಬರಲಿ, ಎಲ್ಲ ಮಕ್ಕಳಿಗೂ ಶುಭವಾಗಲಿ. ತುಂಬ ಪ್ರೀತಿಯಿಂದ,

ಮಣಿಕಾಂತ್, ಎ ಆರ್ ಪತ್ರಕರ್ತರು, ಲೇಖಕರು

ಶ್ರೀಯುತ ಅಶೋಕ್ ಪೈ ರವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯ್ರಮದಲ್ಲಿ ಮಕ್ಕಳ (ವಿಧ್ಯಾರ್ಥಿಗಳ) ಪರಿಕಲ್ಪನೆಯನ್ನು ವಿನೂತನ ನಾವೀನ್ಯತೆಯಿಂದ ಪ್ರಸ್ತುತ ಪಡಿಸಿದ್ದು ನಿಜಕ್ಕೂ ಹಮ್ಮೆಪಡುವಂತದ್ದು, ಅಭಿನಂದನೆಗಳು,

ಕೆ. ಎ ದಯಾನಂದ ಜಿಲ್ಲಾಧಿಕಾರಿಗಳು, ಶಿವಮೊಗ್ಗ,

ಪ್ರಿಯರೇ, ನಿಮ್ಮ ಕಾಲೇಜು ಖುಷಿ ಕೊಟ್ಟಿತು, ಮಕ್ಕಳು ಅತ್ಯಂತ ಆಸಕ್ತಿಯಿಂದ ಮಾತುಗಳನ್ನು ಕೇಳಿಸಿಕೊಂಡು ಸಂವಾದ ಮಾಡಿದರು. ಮಾನಸಿಕ ಆರೋಗ್ಯ ಬಹು ಮುಖ್ಯವಾದದ್ದು, ಅದರ ಕುರಿತು ಶಿಕ್ಷಣ ನೀಡುತ್ತಿರುವ ನಿಮ್ಮ ಉದ್ದೇಶ ಗೌರವ ಪೂರ್ಣವಾದದ್ದು, ನಿಮಗೆ ಶುಭವಾಗಲಿ,

ವಸುಧೇಂದ್ರ ಕಥೆಗಾರ

I am extremely happy to associate myself with your institution in taking the academics to greater heights. I know very well that Manasa Trust - Kateel Ashok Pai Memorial College is doing very good wonderful work on the field of Psychology, Sociology and other Social Sciences. As the VC of Kuvempu University, I give all support and encouragement in all your academic endeavour and I am always with you in future.

Prof. B P Veerabhadrappa Vice-Chancellor, Kuvempu University, Shivamogga

ಇದೊಂದು ವಿನೂತನ ಪ್ರಯೋಗ, ಸ್ಪಷ್ಟತೆ ಬರಲು ಸಮಯದ ಅಗತ್ಯವಿರುತ್ತದೆ, ಮುಂದುವರೆಸಿ, ನನ್ನ ಬೆಂಬಲವಿದೆ.

ನಡಹಳ್ಳಿ ವಸಂತ್ ಲೇಖಕರು

QUICK LINKS

Kuvempu University

RGUHS

NAD-Digilocker

UGC

AISHE

NAAC

CATEGORIES

New Arrivals

Library Blog 

Question Bank

Library Collection

Reach Us

Download Centre

MANASA FAMILY

Manasa

KAPMI

Manasa Nursing Home

MEFFMH

MCCS

USEFUL LINKS

UUCMS

SAKALA

SEVA SINDHU

SSP- (State Scholarship Portal)

NSP- (National Scholarship Portal)

Visitor

0 6 5 0 2 5
Users Today : 19
Users This Month : 1215
Users This Year : 8748
© 2023, Library & Information Center, KAPMC Shivamogga . All Rights Reserved.