Welcome to Manoloka Granthalaya - "Library is the Heart of an Institution"
Latest Updates
Blog
This blog focus on hidden talents of our college students and staff to expose themselves and also share the useful information to outer world.
ಅಂಬೇಡ್ಕರ್ ಅಂದಾಕ್ಷಣ ನೆನಪಿಗೆ ಬರುವುದು,ಸ್ವಾಭಿಮಾನ ಗಟ್ಟಿತನ ದೃಢತೆ.. ಕೇವಲ ಜಾತಿ ಎಂಬ ಪದ ಅವರನ್ನ ಅವರ ಸಮುದಾಯವನ್ನು ನಡುಗಿಸಿದ್ದು ಎಲ್ಲರನ್ನೂ ಕೊರೆಯುವಂತ ಸಂಗತಿ. ಕಮಲ ಪಂಕದಲ್ಲಿ ಬೆಳೆದರೂ ಅದರ ಅರ್ಪಣೆ ದೇವರ ಪದಕ್ಕೆ ಎಂಬಂತೆ ಸಮಾಜ ಅವರನ್ನ ಎಷ್ಟೇ ಕೆಸರಿಗೆ ತಳ್ಳಿದರೂ ಅವರು ಕಮಲದಂತೆ ಮರಳಿ ಮರಳಿ ಅರಳಿದರು!.. ಅವರು ಖಡ್ಗಕ್ಕಿಂತ ಲೇಖನಿ ಹರಿತವಾದುದು ಎಂಬ ಮಾತಿನಲ್ಲಿ ನಂಬಿಕೆ ಇತ್ತವರು, ಓದೆಂಬುದು ಅವರ ತೀವ್ರ ಹಸಿವಾಗಿತ್ತು,ಅದರ ಮೂಲಕವೇ ಅವರು ಸಂವಿಧಾನವನ್ನೇ ಬರೆದು ಮೆರೆದರು.
ಸಾಹಿತ್ಯದಲ್ಲಿ ಸ್ವರ್ಣಾಕ್ಷರವಾಗಿ ಉಳಿದ ಅಂಬೇಡ್ಕರ್ ಅವರು ಮಹಿಳೆಯರನ್ನ ಸಬಲೆ ಎಂದು ಸಾರುವುದರಲ್ಲಿ ಮುಖ್ಯಾತಿಮುಖ್ಯ ಪಾತ್ರವಹಿಸಿದ್ದಾರೆ. ಹಾಗಾದರೆ ಸಬಲೀಕರಣ ಎಂದರೇನು?, ಹಾ! ಹೆಣ್ಣು ಎಂಬಾಕೆ ಪೂರ್ಣ ಸ್ವಾತಂತ್ರ ಹೊಂದುವ ಪರಿಯೇ ಸಬಲೀಕರಣ ಅಂದರೆ ತನ್ನ ಕಾಲ ಮೇಲೆ ತಾನೇ ನಿಲ್ಲುವ ಮೂಲಕ ತನ್ನ ತಾನು ಗುರುತಿಸಿಕೊಳ್ಳುವುದು. ಅವರು ಕಂಡಂತೆ ಹೆಣ್ಣು ಮಕ್ಕಳ ಪ್ರತೀ ಹೆಜ್ಜೆ ಕೂಡ ಅವರ ಮನೆಯಲ್ಲಿನ ಯಾವುದೇ ಗಂಡಿನ ಮೇಲೆ ನಿರ್ಧಾರವಾಗುತಿತ್ತು, ಬಾಲ್ಯದಲ್ಲೇ ವಿವಾಹ ಹಾಗೂ ನಾಲ್ಕು ಗೋಡೆಗಳ ಮಧ್ಯದ ಜೀವನ ದೌರ್ಜನ್ಯ ಅದೊಂದು ದೊಡ್ಡ ಕೊನೆಯೇ ಇಲ್ಲದ ಪಟ್ಟಿಯಾಗಿತ್ತು. ನಿಜವಾದ ಶಿಕ್ಷಣ ಪಡೆದ ವ್ಯಕ್ತಿ ಏನನ್ನ ಯೋಚಿಸಬೇಕೋ ಹಾಗೆ ಯೋಚಿಸಿದ ಸರಿಕ ವ್ಯಕ್ತಿ ಅಂಬೇಡ್ಕರ್ ಎಂಬ ಮಾತಿನ ಮೇಲೆ ನಾನು ಬಲವಾಗಿ ನಿಲ್ಲುತ್ತೇನೆ ಏಕೆಂದರೆ ಅವರು ಯೋಚಿಸಿದ್ದು ಕೊರತೆ ಇರುವುದು ಮಹಿಳಾ ಶಿಕ್ಷಣದಲ್ಲಿ ಎಂದು ಹಾಗೆ ಮಹಿಳಾ ಶಿಕ್ಷಣಕ್ಕೆ ಬಹಳ ಹೋರಾಡಿದರು. ದಲಿತ ಸಾಹಿತ್ಯ ಎಂಬ ಪುಟಗಳನ್ನು ತಿರುವಿದಾಗ ಅಲ್ಲಿ ನೆಂದ, ನೊಂದ ಪುಟಗಳೇ ಹೆಚ್ಚು ಅದರಲ್ಲೂ ಸ್ತ್ರೀ ವಾದಿ ಪುಟಗಳಂತೂ ಇನ್ನೂ ಒಣಗಿಲ್ಲ..
ಅಂಬೇಡ್ಕರ್ ಅವರೂ ಕೂಡ ಅರ್ಧ ದೇಹದಲ್ಲಿ ನಾರಿಯನ್ನೇ ಹೊತ್ತವರು ಹಾಗಾಗೇ ಅವರೂ ಮರುಗಿದ್ದು.. ಅವರು ಹೆಣ್ಣಿಗೆ ತನ್ನ ದೇಹದ ಮೇಲೆ ತನಗೆ ಮಾತ್ರ ಹಕ್ಕಿದೆ ಎಂಬ ಅರಿವು ಮೂಡಿಸುವ ಬಗೆಗೂ ಅವರ ಪಾತ್ರ ಮಂದರದಷ್ಟಿದೆ, ಏಕೆಂದರೆ ಸಾಹಿತ್ಯ ಇತಿಹಾಸ ತೆಗೆದು ನೋಡಿದಾಗ ದಲಿತ ಸಮುದಾಯದ ಮೇಲೆ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಬಗೆಗೆ ಹಲವರಿಗೆ ತಿಳಿದಿದೆ ಅದರಲ್ಲೂ ಹೆಚ್ಚಾಗಿ ಆ ಸಮಯದಲ್ಲಿ , ಮೇಲೆ ಎಂಬ ಮನಸ್ಥಿತಿಯ ಗಂಡಸರು ದಲಿತ ಸಮುದಾಯದ ಹೆಣ್ಣು ಮಕ್ಕಳನ್ನು ಎಳೆದು ಅತ್ಯಾಚಾರ ಮಾಡುತ್ತಿದ್ದ ಬಗೆಗೆ ಎಷ್ಟು ಜನಕ್ಕೆ ಗೊತ್ತು? ಆದರೆ ಅದೇ ಮೇಲು ಮನಸ್ಥಿತಿಯವರು ಸಮಾಜದ ಎದುರು ದಲಿತರ ನೆರಳನ್ನೂ ಬೀಳಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲದರ ತೀವ್ರ ಗಾಸಿಯನ್ನ ಹೊತ್ತು ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದರು ಅಂಬೇಡ್ಕರ್!.. ಅವರ ಧ್ವನಿ ಕೇವಲ ದಲಿತರೇ ಆಗಿಲ್ಲ ಎಲ್ಲಾ ಹೆಣ್ಣು ಮಕ್ಕಳಾಗಿದ್ದರು,..
ಸ್ಥಾನ ಅಧಿಕಾರ ಸಿಕ್ಕಾಕ್ಷಣ ಜಗತ್ತೇ ಮರೆವ ಕಾಲದಲ್ಲೂ ಅಂಬೇಡ್ಕರ್ ಅವರು ಕರ್ತವ್ಯಗಳ ಕವಲುಗಳನ್ನೇ ದಿಟ್ಟಿಸಿದರು. ಅವರಿಗೆ ತಿಳಿದಿತ್ತು ಕೆಲಸ ಮಾತಿನಲ್ಲಲ್ಲ ಕ್ರಿಯೆಯಲ್ಲಿ ಎಂದು.
ಭಾವನೆಗಳಿಗೆ ಅಂಬೇಡ್ಕರ್ ಎಷ್ಟು ಗೌರವ ನೀಡುತ್ತಿದ್ದರೆಂದರೆ ಮೊದಲು ಬಹುಪತ್ನಿತ್ವದ ವಿರುದ್ಧ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಿದರು, ಹೆಣ್ಣು ಕುಲಕ್ಕೆ ಭಾರ ಎನ್ನುವಂತ ಕಾಲದಲ್ಲಿ ಆಕೆ ಎಂದೂ ಭಾರವಲ್ಲ ಎನ್ನುವುದನ್ನ ಸಾರುವ ಸಲುವಾಗಿ ಆಸ್ತಿಯಲ್ಲಿ ಅವಳ ಹಕ್ಕನ್ನು ಬಲ ಪಡಿಸುವ ಕಾಯ್ದೆ ಜಾರಿ ತಂದರು. ಹೀಗೆ ಕಾಯ್ದೆಗಳ ಮೂಲಕವೇ ಅವರು ಅವರು ಕಟ್ಟುಪಾಡಿನ ಸಮಾಜಕ್ಕೆ ಕಡಿವಾಣ ಹಾಕಿದರು. ಇನ್ನೂ ಅನೇಕಾನೇಕ ವಿಷಯಗಳಲ್ಲಿ ಸಬಲೀಕರಣ ಎಂಬುದು ಮಹಿಳೆಯರ ಸ್ವತ್ತಾಗಿಲ್ಲವಾದರೂ, ಅಧಿಕಾರ ಎಂದು ಬಂದಾಗ ಅವಳದ್ದು ಅವಳಿಗೆ ತಲುಪುವಂತೆ ಮಾಡುವ ಪ್ರಯತ್ನವಂತೂ ಅಂಬೇಡ್ಕರ್ ಎಂಬ ಅಪರೂಪದ ಮುತ್ತಿಗಿತ್ತು!..
ಕವನ ಕೆ. ಓ.
ದ್ವಿತೀಯ ಬಿ ಎ, ವಿದ್ಯಾರ್ಥಿನಿ,
ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Visitors Opinion
Visitors and Special guest opinion on kapmi